ವಿವಿಧ ಸಂಕಷ್ಟ: ಭತ್ತದ ಬದಲಿಗೆ ಕಬ್ಬು ಬೆಳಯುವತ್ತ ದೇವದುರ್ಗ ರೈತರ ಚಿತ್ತ
ರಾಯಚೂರು, ಆಗಸ್ಟ್ 03: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ವ್ಯಾಪ್ತಿಯಲ್ಲಿ ನೀರು ಕೊರತೆ, ದುಬಾರಿ ನಿರ್ವಹಣಾ ವೆಚ್ಚ, ಭೂಮಿ ಸವಳು-ಜವಳಾಗುವ ಆತಂಕ, ಕಡಿಮೆ ದರ ಹಾಗೂ ಇತರ ಕಾರಣಗಳಿಗಾಗಿ ತಾಲೂಕಿನ ರೈತರು ಈಗ ಭತ್ತದ ಬದಲಿಗೆ ಕಬ್ಬಿನತ್ತ ಚಿತ್ತ ಹರಿಸಿದ್ದಾರೆ.
ಸಂಪೂರ್ಣ ನೀರಾವರಿಗೆ ಒಳಪಟ್ಟಿರುವ ತಾಲೂಕಿನ ಅರ್ಧಕ್ಕೂ ಹೆಚ್ಚು ಪ್ರದೇಶದಲ್ಲಿ ಕಳೆದ ಮೂರು ದಶಕಗಳಿಂದ ಭತ್ತ ಬೆಳೆಯಲಾಗುತ್ತಿತ್ತು. ಕಳೆದ ಎರಡು ಮೂರು ವರ್ಷಗಳಿಂದ ಕೆಲ ರೈತರು ಕಬ್ಬು ನಾಟಿ ಮಾಡುತ್ತಿದ್ದಾರೆ.

ದೇವದುರ್ಗ ತಾಲೂಕು ಶೇ. 80ರಷ್ಟು ಭೂಮಿ ನೀರಾವರಿ ಸೌಲಭ್ಯ ಹೊಂದಿದೆ. ರೈತರು 30 ವರ್ಷಗಳಿಂದ ಭತ್ತ ಬೆಳೆಯುತ್ತಿದ್ದಾರೆ. ತಾಲೂಕಿನಲ್ಲಿಯೇ ಅತಿ ಹೆಚ್ಚು ಭತ್ತ ಬೆಳೆಯುತ್ತಿದ್ದ ಗ್ರಾಮಗಳಾದ ಜಾಲಹಳ್ಳಿ, ಲಿಂಗದಳ್ಳಿ, ಬುಂಕಲದೊಡ್ಡಿ, ಮಸರಕಲ್, ಕೊಪ್ಪರ, ಕುರ್ಕಿಹಳ್ಳಿ, ಯಾಟಗಲ್, ಸುಂಕೇಶ್ವರಹಾಳ, ಬೂದಿನಾಳ, ಜಿನ್ನಾಪುರ ಮತ್ತು ಹಂಚಿನಾಳ ಸೇರಿದಂತೆ ಹಲವು ಗ್ರಾಮಗಳಲ್ಲಿ ರೈತರು ಕಬ್ಬು ಬೆಳೆಯಲು ಮುಂದಾಗಿದ್ದಾರೆ.
ಭತ್ತದ ಕೃಷಿಗೆ ಬಳಸುವ ನೀರಿನಲ್ಲಿ ಕಬ್ಬಿಗೆ ಅರ್ಧದಷ್ಟು ಪ್ರಮಾಣ ಬಳಸಿದರೆ ಸಾಕು. ಭೂಮಿ ಸವಳಾಗುವ ಆತಂಕ ಇಲ್ಲ. ಸದ್ಯ ಟನ್ಗೆ ₹2,500 ಬೆಲೆ ಇದೆ. ಒಂದು ಎಕರೆಗೆ ₹1 ಲಕ್ಷ ಮೌಲ್ಯದ ಬೆಳೆ ಬರುತ್ತದೆ. ಮೂರು ವರ್ಷಗಳ ನಂತರ ಹೊಸದಾಗಿ ನಾಟಿ ಮಾಡಬೇಕು. ಮೊದಲ ವರ್ಷ ಎಕರೆಗೆ ₹35 ಸಾವಿರ, ನಂತರದ ವರ್ಷಗಳಲ್ಲಿ ₹10 ಸಾವಿರ ನಿರ್ವಹಣಾ ವೆಚ್ಚ ತಗಲುತ್ತದೆ. ಕಡಿಮೆ ಬಡ್ಡಿ ದರದಲ್ಲಿ ಎಣ್ಣೆ, ಬೀಜ ಹಾಗೂ ಗೊಬ್ಬರವನ್ನು ಕಾರ್ಖಾನೆ ಒದಗಿಸುತ್ತದೆ. ಕಟಾವು ಮತ್ತು ಸಾಗಣೆ ಜವಾಬ್ದಾರಿಯೂ ನಮ್ಮದೇ ಎಂದು ಕಾರ್ಖಾನೆ ಮೇಲ್ವಿಚಾರಕರು ತಿಳಿಸಿದ್ದಾರೆ.
ಭತ್ತಕ್ಕೆ ಭೂಮಿ ಹದ ಮಾಡುವುದರಿಂದ ಹಿಡಿದು ನಾಟಿ, ಗೊಬ್ಬರ, ಕೀಟನಾಶಕ ಸಿಂಪಡಣೆ, ಕಟಾವು ಮಾಡುವುದರಲ್ಲಿ ರೈತನಿಗೆ ಸಾಕಾಗುತ್ತದೆ. ಎಲ್ಲ ದರಗಳು ದುಬಾರಿಯಾಗಿವೆ. ಪ್ರತಿವರ್ಷ ನೀರಿನ ಕೊರತೆ ಕಾಡುತ್ತದೆ. ಎರಡನೇ ಬೆಳೆಗೆ ನೀರಿಗಾಗಿ ಕಾದಾಟವೇ ನಡೆಯುತ್ತದೆ. ಒಂದು ಎಕರೆಗೆ 35 ರಿಂದ 40 ಚೀಲ ಇಳುವರಿ ಬಂದರೆ ಹೆಚ್ಚು. ಒಂದು ವರ್ಷ ದರ ಸಿಕ್ಕರೆ ಮತ್ತೆರಡು ವರ್ಷ ಕಡಿಮೆ ದರ ಇರುತ್ತದೆ. ನಷ್ಟ ಅನುಭವಿಸುವುದೇ ಹೆಚ್ಚು ಎಂದು ಜಾಲಹಳ್ಳಿಯ ರೈತ ವಿರೂಪಾಕ್ಷಪ್ಪ ಹೇಳಿದ್ದಾರೆ.

ನೆರೆಯ ವಡಗೇರಾ ತಾಲೂಕಿನ ತುಮಕೂರು ಗ್ರಾಮದಲ್ಲಿ ಕೋ-ಗ್ರೀನ್ ಸಕ್ಕರೆ ಕಾರ್ಖಾನೆ ಇದೆ. ಅಲ್ಲಿನ ಅಭಿವೃದ್ಧಿ ಅಧಿಕಾರಿ ಸೂಗನಗೌಡ ಪಾಟೀಲ ದೇವದುರ್ಗದವರು. ಕಾರ್ಖಾನೆ 45 ಕಿ.ಮೀ ವ್ಯಾಪ್ತಿ ಹೊಂದಿದೆ. ಸೂಗನಗೌಡ ಅವರು ರೈತರಿಗೆ ಕೊಬ್ಬು ಬೆಳೆಯ ಕುರಿತು ಮಾಹಿತಿ ನೀಡಿದ ಕಾರಣ ಈಗ 300 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಕಬ್ಬು ನಾಟಿ ಮಾಡಲಾಗಿದೆ.
'ಮೊದಲ ವರ್ಷ ಎಕರೆಗೆ ₹80 ಸಾವಿರ ಲಾಭ'
ರೈತರು ಸಿ.ಒ 86032 ತಳಿಯ ಕಬ್ಬು ಬೆಳೆಯುತ್ತಿದ್ದಾರೆ. ವಾಣಿಜ್ಯ ಬೆಳೆಗಳಲ್ಲಿ ಅತಿವೃಷ್ಟಿ-ಅನಾವೃಷ್ಟಿಯನ್ನು ತಡೆದುಕೊಳ್ಳುವ ಶಕ್ತಿ ಹೊಂದಿರುವ ಕಬ್ಬು ರೈತರಿಗೆ ಆರ್ಥಿಕವಾಗಿ ಲಾಭ ಉಂಟು ಮಾಡಲಿದೆ. ವಾರ್ಷಿಕ 1 ಎಕರೆ ಕಬ್ಬಿಗೆ ಪ್ರಥಮ ವರ್ಷ ₹80 ಸಾವಿರ ನಿವ್ವಳ ಲಾಭ ಬಂದರೆ, ಎರಡು ಮತ್ತು ಮೂರನೇ ವರ್ಷ ₹1.5 ಲಕ್ಷದಿಂದ 2 ಲಕ್ಷದವರೆಗೆ ರೈತರಿಗೆ ಲಾಭ ಸಿಗುತ್ತದೆ ಎಂದು ಕಾರ್ಖಾನೆ ಸೂಪರ್ವೈಸರ್ ಶಿವರಾಜ ಕೊಪ್ಪರ ಮಾಹಿತಿ ನೀಡಿದ್ದಾರೆ.
ಕಬ್ಬು ಬೆಳೆಯುವ ರೈತರಿಗೆ ವೈಜ್ಞಾನಿಕ ಪದ್ಧತಿಯ ಮಾಹಿತಿ ಜೊತೆಗೆ ಕಬ್ಬು ನಾಟಿ ಮಾಡಿದ ರೈತರಿಗೆ ಕಟಾವು, ಕಾರ್ಮಿಕರ ಕೂಲಿ, ಕಬ್ಬು ಸಾಗಾಟ ವಾಹನಗಳ ವೆಚ್ಚಕ್ಕೆ ಆರ್ಥಿಕ ನೆರವು ನೀಡಲಾಗುತ್ತಿದೆ.
-
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ












Click it and Unblock the Notifications