SC, ST ಮೀಸಲಾತಿ ಹೆಚ್ಚಳ ವಿಚಾರದಲ್ಲಿಯೂ ಮೋಸ: ರಾಯಚೂರಿನಲ್ಲಿ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆರೋಪ
ರಾಯಚೂರು, ಜನವರಿ, 13; ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಹೆಚ್ಚುವರಿ ಮೀಸಲಾತಿ ನೀಡುವುದಾಗಿ ಸುಳ್ಳು ಹೇಳಿ ರಾಜ್ಯ ಸರ್ಕಾರವು ದಾರಿ ತಪ್ಪಿಸುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಯಚೂರಿನಲ್ಲಿ ಆರೋಪಿಸಿದರು.
ದೇವದುರ್ಗ ತಾಲೂಕಿನ ತಿಂಥಣಿ ಬ್ರಿಡ್ಜ್ ಬಳಿಯ ಕನಕ ಗುರುಪೀಠದಲ್ಲಿ ಗುರುವಾರ ಮೂರು ದಿನಗಳ ಹಾಲುಮತ ಸಂಸ್ಕೃತಿ ವೈಭವದ ಹಾಲುಮತ ಕಲಾ ಪ್ರಕಾರಗಳು ಮತ್ತು ಕಲಾವಿದರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇವೆ. ಆದರೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಕುರುಬರಿಗೆ ಮೀಸಲಾತಿ ಕೊಡಿಸದೇ ಡೋಂಗಿತನ ತೋರುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಸಮಾಜದಲ್ಲಿ ಪ್ರತಿಯೊಬ್ಬರೂ ಅರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಬಲಿಷ್ಠರಾದಾಗ ಮಾತ್ರ ಎಲ್ಲರೂ ಸಮಾನತೆ ಮತ್ತು ನ್ಯಾಯ ಪಡೆಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಹೊಸದುರ್ಗ ಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಕನಕ ಗುರು ಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ, ಸಂಸದ ರಾಜಾ ಅಮರೇಶ್ವರ ನಾಯಕ, ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ ಮತ್ತು ಶಾಸಕ ಸತೀಶ ಜಾರಕಿಹೊಳಿ ಸೇರಿಂದತೆ ಮತ್ತಿತರರು ಇದ್ದರು.
ನನ್ನ ರಕ್ತಾನೇ ಕಾಂಗ್ರೆಸ್ ರೀ, ಹೌದು ನಾನು ಕಾಂಗ್ರೆಸ್ ಪಕ್ಷವನ್ನು ಸೇರುತ್ತೇನೆ ಎಂದ ಹೆಚ್.ವಿಶ್ವನಾಥ್
ಜೆಡಿಎಸ್
ಪಕ್ಷವನ್ನು
ಅಲ್ಲಾಡಿಸಲು
ಆಗಲ್ಲ
ಹಳೆ
ಮೈಸೂರು
ಭಾಗದಲ್ಲಿ
ಯಾವ
ನಾಯಕರು
ಭೇಟಿ
ಬಂದು
ಹೋದರೂ
ಎಚ್.ಡಿ.
ದೇವೇಗೌಡರು,
ಎಚ್.ಡಿ.ಕುಮಾರಸ್ವಾಮಿಯವರನ್ನು,
ಜೆಡಿಎಸ್
ಪಕ್ಷವನ್ನು
ಅಲ್ಲಾಡಿಸಲು
ಆಗುವುದಿಲ್ಲ
ಎಂದು
ಜೆಡಿಎಸ್
ಯುವ
ಘಟಕದ
ರಾಜ್ಯಾಧ್ಯಕ್ಷ
ನಿಖಿಲ್
ಕುಮಾರಸ್ವಾಮಿ
ಇತ್ತೀಚೆಗಷ್ಟೇ
ರಾಯಚೂರಿನಲ್ಲಿ
ಹೇಳಿದ್ದರು.
ಹಳೆ
ಮೈಸೂರು
ಭಾಗದಲ್ಲಿ
JDS
ವರ್ಚಸ್ಸು
ಸಿಂಧನೂರು
ಕ್ಷೇತ್ರದ
ಶಾಸಕ
ವೆಂಕಟರಾವ್
ನಾಡಗೌಡ
ಹುಟ್ಟುಹಬ್ಬದ
ಹಿನ್ನೆಲೆಯಲ್ಲಿ
ಸಿಂಧನೂರು
ನಗರಕ್ಕೆ
ಆಗಮಿಸಿದ
ವೇಳೆ
ಮಾಧ್ಯಮದವರೊಂದಿಗೆ
ಮಾತನಾಡಿದ್ದ
ಅವರು,
ಇತ್ತೀಚೆಗೆ
ಹಳೆ
ಮೈಸೂರು
ಭಾಗಕ್ಕೆ
ಕೇಂದ್ರ
ಗೃಹ
ಸಚಿವ
ಅಮಿತ್
ಶಾ
ಆಗಮಿಸಿದ್ದರು.
ಈ
ಕುರಿತಾಗಿ
ಪತ್ರಕರ್ತರ
ಪ್ರಶ್ನೆಗೆ
ಪ್ರತಿಕ್ರಿಯಿಸಿದ
ಅವರು
ಹಳೆ
ಮೈಸೂರು
ಭಾಗದಲ್ಲಿ
ಜೆಡಿಎಸ್
ವರ್ಚಸ್ಸು
ಇದೆ.
ಅಲ್ಲಿಗೆ
ಯಾರು
ಬಂದು
ಹೋದರು
ಸಹ
ಎಚ್.ಡಿ.ದೇವೇಗೌಡರು,
ಕುಮಾರಸ್ವಾಮಿಯವರನ್ನು,
ಜೆಡಿಎಸ್
ಪಕ್ಷವನ್ನು
ಅಲ್ಲಾಡಿಸಲು
ಆಗುವುದಿಲ್ಲ
ಎಂದು
ಸವಾಲು
ಹಾಕಿದ್ದರು.
ನಾನು ಪ್ರಪ್ರಥಮ ಬಾರಿಗೆ ಸಿಂಧನೂರು ಪಟ್ಟಣಕ್ಕೆ ಭೇಟಿ ನೀಡಿದ್ದೇನೆ. ಅತ್ಯಂತ ಉತ್ಸಾಹಕತೆಯಿಂದ ಸಿಂಧನೂರು ಪಟ್ಟಣದಲ್ಲಿ ಜನರು, ಅಭಿಮಾನಿಗಳು ಕಾರ್ಯಕರ್ತರು ಬೈಕ್ ರ್ಯಾಲಿ ಮಾಡುವ ಮೂಲಕ ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ ಎಂದರು. ಇಂದಿನಿಂದ ಕುಮಾರಸ್ವಾಮಿಯವರು ಬೀದರ್ನಿಂದ ಯಾತ್ರೆ ಆರಂಭ ಮಾಡಿದ್ದಾರೆ. ಎಲ್ಲೆಡೆಯೂ ಎರಡು ರಾಷ್ಟ್ರೀಯ ಪಕ್ಷಗಳಿಗೆ ಧಿಕ್ಕರಿಸಿ, ಈ ಬಾರಿ ಕುಮಾರಣ್ಣ ನಾಯಕತ್ವಕ್ಕೆ ಬೆಂಬಲಿಸುವ ಮಾತುಗಳು ಕೇಳಿಬರುತ್ತಿವೆ. ಎರಡು ಪಕ್ಷಗಳ ಬಗ್ಗೆ ನಾವು ಮಾತನಾಡಲು ಸಿದ್ಧರಿಲ್ಲ ಎಂದಿದ್ದರು.