ರಾಯಚೂರಿನಲ್ಲಿ ಲವ್ ಜಿಹಾದ್ ಆರೋಪ: ಹೈದರಾಬಾದ್ ಲಿಂಕ್ ಇರುವ ಶಂಕೆ
ರಾಯಚೂರು ಡಿಸೆಂಬರ್ 2: ರಾಯಚೂರಿನಲ್ಲಿ ಮತ್ತೆ ಜಿಹಾದ್ ಆರೋಪ ಕೇಳಿಬಂದಿದ್ದು ಇದಕ್ಕೆ ಹೈದರಾಬಾದ್ ಲಿಂಕ್ ಇರುವ ಶಂಕೆ ವ್ಯಕ್ತವಾಗಿದೆ. ತಂಗಿ.. ಸಹೋದರಿ ಎಂದು ಕರೆಯುತ್ತಲೇ ರಿಹಾನ್ ಮಿಯಾ ಎಂಬಾತ ಭಾರತಿಯನ್ನು ಪುಸಲಾಯಿಸಿ ಹೈದರಾಬಾದ್ಗೆ ಕರೆದೊಯ್ದಿದ್ದಾನೆ ಎಂದು ಪೋಷಕರು ನೇತಾಜಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಭಾರತಿ ಪೋಷಕರಾದ ಬಾಳಪ್ಪ ನಾಗಮ್ಮ ದೂರು ನೀಡಿದ್ದಾರೆ.
ಹಿಂದೂ ಯುವಕನೊಂದಿಗೆ ಮದುವೆ ನಿಶ್ಚಯವಾಗಿದ್ದರೂ ಭಾರತಿ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಳು. ನವೆಂಬರ್ 6ರಂದು ಭಾರತಿಯನ್ನು ರಿಹಾನ್ ಕರೆದೊಯ್ದಿದ್ದಾನೆ ಎಂದು ದೂರಲಾಗಿದೆ. ಈಗಾಗಲೇ ನಿಶ್ಚಿತಾರ್ಥವಾಗಿದ್ದ ಭಾರತಿಗೆ ಒಂದೇ ತಿಂಗಳಲ್ಲಿ ಬ್ರೇನ್ ವಾಶ್ ಮಾಡಿ ಮುಸ್ಲೀಂ ಧರ್ಮಕ್ಕೆ ಮತಾಂತರಿಸಲಾಗಿದೆ ಎಂದು ಆರೋಪಿಸಲಾಗಿದೆ. ಹೂವಿನಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಿಹಾನ್ ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಭಾರತಿಯ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು. ಆದರೆ ಇವರಿಬ್ಬರು ಅಣ್ಣ-ತಂಗಿಯಂತೆ ಇದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ ರಿಹಾನ್ ಆಕೆಯ ಪ್ರೀತಿಯ ಬಲೆಗೆ ಬೀಳಿಸಿದ್ದಾನೆಂದು ದೂರಲಾಗಿದೆ.
ಮನೆಯಿಂದ ನಾಪತ್ತೆಯಾಗಿದ್ದ ಭಾರತಿಯೊಂದಿಗೆ ಒಂದು ತಿಂಗಳು ರಿಹಾನ್ ಉಳಿದುಕೊಂಡಿದ್ದಾನೆ. ಬಳಿಕ ಆತ ಆಕೆಯನ್ನು ಹೈದರಾಬಾದ್ಗೆ ಕರೆದೊಯ್ದಿದ್ದಾನೆ. ಇದ್ದಕ್ಕಿದ್ದಂತೆ ಹೈದರಾಬಾದ್ನಲ್ಲಿ ಅವರು ಉಳಿಯಲು ಹೇಗೆ ಸಾಧ್ಯ. ಅವರು ಹೂ ಮಾರುವ ವ್ಯಾಪಾರಿ. ಯಾವುದೋ ಕಾಣದ ಕೈಗಳು ಕೆಲಸ ಮಾಡಿವೆ ಎನ್ನಲಾಗುತ್ತಿದೆ. ಹೈದರಾಬಾದ್ನಲ್ಲಿ ಲವ್ ಜಿಹಾದಿಗಳಿದ್ದಾರೆ ಎಂದು ಹೇಳಲಾಗುತ್ತಿದೆ. ಭಾರತಿ ಕಾಣೆಯಾದ ಬಳಿ ಪೋಷಕರ ದೂರನ್ನು ಆಧರಿಸಿ ನೇತಾಜಿ ನಗರದ ಪೊಲೀಸರು ವಿಚಾರಣೆ ಆರಂಭಿಸಿದ್ದರು. ಭಾರತಿಯ ಕಾಲ್ ಡಿಟೇಲ್ಸ್ ತೆಗೆಸಿದ್ದರು. ಈಗ ರಿಹಾನ್ ಆಕೆಯನ್ನು ಮಂತಾಂತರ ಮಾಡಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾನೆ ಎಂದು ತಿಳಿದುಬಂದಿದೆ.

ಠಾಣೆಗೆ ಅವರಿಬ್ಬರನ್ನು ಕರೆಸಿ ವಿಚಾರಿಸಿದಾಗ ಭಾರತಿ ಬುರ್ಖಾ ಧರಿಸಿ ಠಾಣೆಗೆ ಆಗಮಿಸಿದ್ದಳು ಎಂದು ತಿಳಿದು ಬಂದಿದೆ. 'ನಮ್ಮ ಮಗಳನ್ನು ವಾಪಸ್ ಕೊಡಿಸಿ. ಅವಳು ಕನ್ನಡ ಕೂಡ ಮಾತನಾಡುತ್ತಿಲ್ಲ. ಆಕೆಗೆ ಮೈಂಡ್ ವಾಷ್ ಮಾಡಲಾಗಿದೆ. ನಮ್ಮ ಮಗಳನ್ನು ನಮಗೆ ಹಿಂದೂ ಮತಾಂತರಿಸಿ ಕೊಡಿ. ಆಕೆಗೆ ನಾವು ಮದುವೆ ನಿಶ್ಚಯ ಮಾಡಿದ್ದೇವೆ' ಎಂದು ಭಾರತಿ ತಾಯಿ ಅಳಲು ತೋಡಿಕೊಂಡಿದ್ದಾರೆ. ಅವರಿಬ್ಬರ ಫೋಟೋಗಳು ವೈರಲ್ ಆಗಿದ್ದು ಫೋಟೋದಲ್ಲಿ ಯುವತಿಗೆ ಬಲವಂತಪಡಿಸಿರುವಂತೆ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ. ಯುವತಿ ಸಹಜ ಸ್ಥಿತಿಯಲ್ಲೇ ಕಂಡುಬಂದಿದ್ದಾಳೆ.

ಈ ಹಿಂದೆ ನಾಪತ್ತೆಯಾಗಿದ್ದ ಸುಹಾಸಿನಿ ಕೇಸ್ನಲ್ಲೂ ಹೈದರಾಬಾದ್ ಲಿಂಕ್ ಇತ್ತು. ಭಾರತಿ ಪ್ರಕರಣದಲ್ಲೂ ಹೈದರಬಾದ್ ಲಿಂಕ್ ಇದೆ ಎನ್ನಲಾಗುತ್ತಿದೆ. ಹೀಗಾಗಿ ಹೈದರಾಬಾದ್ನಲ್ಲಿ ರೆಡಿಯಾಗುತ್ತಿದ್ದಾರಾ ಲವ್ ಹಿಹಾದಿಗಳು ಎಂಬ ಪ್ರಶ್ನೆ ಉದ್ಬವಿಸಿದೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications