ವಿಚ್ಛೇದನದ ದೂರಲ್ಲಿ ಲಾಲೂ ಮಗನನ್ನು ಮಾದಕ ವ್ಯಸನಿ ಎಂದ ಐಶ್ವರ್ಯಾ
ಪಾಟ್ನಾ, ಆಗಸ್ಟ್ 6: ತೇಜ್ ಪ್ರತಾಪ್ ಮರಿಜುವಾನ ವ್ಯಸನಿ. ಆತ ನನ್ನನ್ನು ಶೋಷಣೆ ಮಾಡುತ್ತಿದ್ದರು ಎಂದು ಬಿಹಾರದ ಮಾಜಿ ಆರೋಗ್ಯ ಸಚಿವರೂ ಆದ ತೇಜ್ ಪ್ರತಾಪ್ ವಿರುದ್ಧ ಪತ್ನಿ ಕೋರ್ಟ್ ನಲ್ಲಿ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಮಾಡಿದ್ದಾರೆ. ಐಶ್ವರ್ಯಾ ರೈ ಸೆಕ್ಷನ್ 26 ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಮಹಿಳೆಯರ ವಿರುದ್ಧದ ಕೌಟುಂಬಿಕ ಹಿಂಸೆ ವಿರೋಧಿ ಕಾಯ್ದೆ 2005ರ ಅಡಿಯಲ್ಲಿ ತನಗೆ ರಕ್ಷಣೆ ದೊರಕಿಸಬೇಕು ಎಂದು ಕೌಟುಂಬಿಕ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ. ಐಶ್ವರ್ಯಾ ಹೇಳಿಕೊಂಡಿರುವ ಪ್ರಕಾರ: ತೇಜ್ ಮಾದಕ ವ್ಯಸನಿ ಎಂಬುದು ಗೊತ್ತಾಯಿತು. ಆತ ಮಾದಕ ಪದಾರ್ಥ ಸೇವನೆ ಮಾಡುತ್ತಿದ್ದರು. ಹಾಗೆ ಸೇವನೆ ಮಾಡಿದಾಗ ತಾನು ಶಿವನ ಅವತಾರ ಎನ್ನುತ್ತಿದ್ದುದಾಗಿ ಅಲವತ್ತುಕೊಂಡಿದ್ದಾರೆ.
"ತೇಜ್ ಪ್ರತಾಪ್ ಅವರು ರಾಧಾ ಹಾಗೂ ಕೃಷ್ಣ ಥರ ವೇಷ ಧರಿಸುತ್ತಿದ್ದರು. ನನಗೆ ಮದುವೆ ಆದ ನಂತರ ಗೊತ್ತಾಗಿದ್ದೇನೆಂದರೆ, ಆತ ದೇವ- ದೇವತೆಗಳ ರೀತಿ ದಿರಿಸು ಧರಿಸುತ್ತಿದ್ದರು. ಅಷ್ಟೇ ಅಲ್ಲ, ಮಾದಕ ಪದಾರ್ಥ ಸೇವನೆ ನಂತರ ತೇಜ್ ಘಾಗ್ರಾ ಹಾಗೂ ಚೋಲಿ ಧರಿಸುತ್ತಿದ್ದರು. ರಾಧಾ ರೀತಿ ಸಿಂಗರಿಸಿಕೊಳ್ಳುತ್ತಿದ್ದರು. ಅಲಂಕಾರ ಮಾಡಿಕೊಂಡು, ವಿಗ್ ಧರಿಸುತ್ತಿದ್ದರು" ಎಂದು ಐಶ್ವರ್ಯಾ ಆರೋಪಿಸಿದ್ದಾರೆ.

ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಲಾಲೂ ಪ್ರಸಾದ್ ಹಾಗೂ ರಾಬ್ರಿ ದೇವಿ ಹಿರಿಯ ಮಗ ತೇಜ್ ಪ್ರತಾಪ್ ಯಾದವ್ ಕಳೆದ ವರ್ಷ ಮೇ ತಿಂಗಳಲ್ಲಿ ಐಶ್ವರ್ಯಾರನ್ನು ವಿವಾಹ ಆಗಿದ್ದರು. ತನ್ನ ಪತಿಯ ಸಂಬಂಧಿಕರ ಗಮನಕ್ಕೂ ಈ ಬಗ್ಗೆ ಗಮನ ತಂದೆ. ಆದರೆ ಅವರಿಂದ ಯಾವ ಸಹಾಯವೂ ಆಗಲಿಲ್ಲ ಎಂದಿದ್ದಾರೆ.
"ತೇಜ್ ನ ನಡವಳಿಕೆ ಬಗ್ಗೆ ಅತ್ತೆ, ನಾದಿನಿಯ ಗಮನಕ್ಕೆ ತಂದೆ. ಇನ್ನು ಮುಂದೆ ಆತ ಹಾಗೆ ನಡೆದುಕೊಳ್ಳುವುದಿಲ್ಲ ಎಂದು ಅವರು ಭರವಸೆ ನೀಡಿದರು. ನನ್ನ ಅತ್ತೆ ಭಾವನಾತ್ಮಕವಾಗಿ ಸಮಾಧಾನ ಮಾಡಲು ಯತ್ನಿಸಿದರು. ಆದರೆ ತೇಜ್ ನಡವಳಿಕೆಯಲ್ಲಿ ಯಾವ ಬದಲಾವಣೆಯಲ್ಲಿ ಕಾಣಲಿಲ್ಲ" ಎಂದು ಐಶ್ವರ್ಯಾ ಹೇಳಿದ್ದಾರೆ.
ಈ ರೀತಿ ವೇಷ ಹಾಕಿಕೊಳ್ಳಬೇಡಿ, ಮಾದಕ ಪದಾರ್ಥ ಸೇವಿಸಬೇಡಿ ಎಂದು ಐಶ್ವರ್ಯಾ ಹೇಳಿದ್ದರಂತೆ. ಅದಕ್ಕೆ ಆತ: ಗಾಂಜಾ ಎಂಬುದು ಶಿವನಿಗೆ ಅರ್ಪಣೆ. ಅದಕ್ಕೆ ನಾನು ಹೇಗೆ ಬೇಡ ಅನ್ನಲಿ. ಇನ್ನು ರಾಧಾನೇ ಕೃಷ್ಣ. ಕೃಷ್ಣನೇ ರಾಧಾ ಎಂದು ಸಮರ್ಥನೆ ನೀಡಿದ್ದರಂತೆ.
ಇನ್ನು ತನ್ನ ವಿದ್ಯಾಭ್ಯಾಸದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರು ಎಂದು ದೂರು ನೀಡಿರುವ ಐಶ್ವರ್ಯಾ; "ನೀನು ಇರುವುದು ಅಡುಗೆ ಮಾಡುವುದಕ್ಕೆ, ಸಂಸಾರಕ್ಕೆ ಮಾತ್ರ ಎನ್ನುತ್ತಿದ್ದರು" ಎಂದು ಹೇಳಿಕೊಂಡಿದ್ದಾರೆ.
ದೂರಿನ ಸಾರಾಂಶದ ಪ್ರಕಾರ: ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಹಿಂಸೆಯ ಹೊರತಾಗಿಯೂ ತನ್ನ ಅತ್ತೆ- ಮಾವನ ಮನೆಯಲ್ಲಿ ವಾಸ ಇದ್ದುದಾಗಿ ಹಾಗೂ ನಿತ್ಯವೂ ಹಿಂಸೆ ಅನುಭವಿಸುತ್ತಿದ್ದುದಾಗಿ ಐಶ್ವರ್ಯಾ ಹೇಳಿಕೊಂಡಿದ್ದಾರೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications