ಬಿಜೆಪಿ ಆಡಳಿತದ ರಾಜ್ಯಗಳಲ್ಲಿ 'ಬೀಫ್' ತಿನ್ನೋದೇ ಒಂದು ಖುಷಿ, ಗುಹಾ
ಪಣಜಿ, ಡಿ 7: ಗೋವನ್ನು ದೇವರೆಂದು ಪೂಜಿಸುವ ದೇಶವಿದು, ನೀವೂ ಪೂಜಿಸಬೇಕು ಎನ್ನುವ ಒತ್ತಾಯವೇನೂ ಇಲ್ಲ. ಆದರೆ, ರಾಮಚಂದ್ರ ಎಂದು ಹೆಸರಿಟ್ಟುಕೊಂಡಿರುವ ನೀವು ಈ ರೀತಿ ಅಣಕವಾಡುವುದು ಸರಿಯೇ?
ಖ್ಯಾತ ಇತಿಹಾಸಗಾರ ರಾಮಚಂದ್ರ ಗುಹಾ, ಬಿಜೆಪಿಯನ್ನು, ಗೋಪ್ರೇಮಿಗಳನ್ನು ತಮಾಷೆ ಮಾಡಲು ಹೋಗಿ, ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಸರಿಯಾಗಿ ಉಗಿಸಿಕೊಂಡಿದ್ದಾರೆ.
ಗೋವಾದ ಪಣಜಿಯಲ್ಲಿ ಊಟ ಮಾಡುತ್ತಿದ್ದೇನೆ, ಇಲ್ಲಿ ಬಿಜೆಪಿಯ ಆಡಳಿತವಿದೆ. ಹಾಗಾಗಿ, ಊಟಕ್ಕೆ ಖುಷಿಯಿಂದ ದನದ ಮಾಂಸ ತಿನ್ನುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು, ಕೈಯಲ್ಲಿ ಬೀಫ್ ಇರುವ ತಟ್ಟೆ, ಜೊತೆಗೆ ಬಿಯರ್ ಇರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ.
ಸುಮಾರು 2.04 ಮಿಲಿಯನ್ ಫಾಲೋವರ್ ಗಳನ್ನು ಹೊಂದಿರುವ ರಾಮಚಂದ್ರ ಗುಹಾ ಅವರ ಈ ಟ್ವೀಟಿಗೆ 1,300ಕ್ಕೂ ಹೆಚ್ಚು ಕಾಮೆಂಟುಗಳು ಬಂದಿವೆ. ಜೊತೆಗೆ, ಈ ಟ್ವೀಟ್ 653 ಬಾರಿ ರಿಟ್ವೀಟ್ ಆಗಿದೆ.
ಹಿಂದೂ ಸಂಪ್ರದಾಯ, ಬಿಜೆಪಿ, ಸಂಘ ಪರಿವಾರ ಮತ್ತು ಗೋಪ್ರೇಮಿಗಳನ್ನು, ಅಣಕಿಸುವ ಉದ್ದೇಶದಿಂದಲೇ ಹಾಕಲಾಗಿರುವ ಈ ಟ್ವೀಟಿಗೆ, ವ್ಯಾಪಕ ಟೀಕೆ ವ್ಯಕ್ತವಾಗಿದೆ. ಕೆಲವೊಂದು ಸ್ಯಾಂಪಲ್ ಗಳು, ಕೆಳಗೆ ಮುಂದುವರಿಸಲಾಗಿದೆ...

ಸಮಾನತೆ ವಿಷಯ ಬಂದಾಗ, ದಲಿತರು ಮಹಿಳೆಯರಿಗಿಂತ ಹೆಚ್ಚು ಪ್ರಗತಿ
ಖ್ಯಾತ ಇಂಗ್ಲಿಷ್ ದಿನಪತ್ರಿಕೆಗಳ ಅಂಕಣಕಾರರೂ ಆಗಿರುವ ರಾಮಚಂದ್ರ ಗುಹಾ, ಸಮಾನತೆ ವಿಷಯ ಬಂದಾಗ, ದಲಿತರು ಮಹಿಳೆಯರಿಗಿಂತ ಹೆಚ್ಚು ಪ್ರಗತಿಯನ್ನು ಕಾಣುತ್ತಿದ್ದಾರೆಂದು ಹೇಳಿದ್ದರು. ಪಣಜಿಯಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಗುಹಾ ಈ ಮೇಲಿನ ವಿವಾದಕಾರಿ ಟ್ವೀಟ್ ಅನ್ನು ಮಾಡಿದ್ದರು.

ಆಲಿಗಢಕ್ಕೆ ಹೋಗಿ, ಅಲ್ಲಿ ಪೋರ್ಕ್ ಅನ್ನು ತಿನ್ನಿ
ವೆಲ್ಡನ್.. ಇದೇ ರೀತಿ ಆಲಿಗಢಕ್ಕೆ ಹೋಗಿ, ಅಲ್ಲಿ ಪೋರ್ಕ್ (ಹಂದಿ ಮಾಂಸ) ಅನ್ನು ತಿನ್ನಿ.. ಬದುಕಿ ವಾಪಸ್ ಬಂದರೆ, ಮತ್ತೆ ಟ್ವೀಟ್ ಮಾಡಿ... ನೀವು ಖುಷಿಯಿಂದ ಊಟ ಮಾಡುತ್ತಿಲ್ಲ. ಕೋಟ್ಯಾಂತರ ಜನರ ಭಾವನೆಯನ್ನು ಅಣಕವಾಡಲೆಂದೇ ಹಾಕಲಾಗಿರುವ ಟ್ವೀಟ್ ಇದು..

ಅದು ನಾಯಿಯ ಮಾಂಸವಿರಬೇಕು
ಇತ್ತೀಚೆಗೆ ತಮಿಳುನಾಡಿನಲ್ಲಿ ಸುಮಾರು ಒಂದೂವರೆ ಸಾವಿರ ಕೆಜಿಯಷ್ಟು ಮಾಂಸವನ್ನು ಪರೀಕ್ಷಿಸಲಾಗಿತ್ತು. ಅದು ದನದ ಮಾಂಸವಾಗಿರಲಿಲ್ಲ, ಅದು ನಾಯಿಯ ಮಾಂಸವಾಗಿತ್ತು. ಬಹುಷಃ ನೀವು ನಾಯಿ ಮಾಂಸವನ್ನೇ ತಿಂದಿರಬೇಕು.. ನೀವು ಪಕ್ಕಾ ಅವಕಾಶವಾದಿ ಎನ್ನುವ ಟ್ವೀಟ್..

10, ಜನಪಥ್ ಗೆ ಹೋದಾಗ ಅಲ್ಲಿ ಪೋರ್ಕ್ ತಿನ್ನಿ
ಮುಂದೊಂದು ದಿನ ಹೈದರಾಬಾದಿಗೆ ಹೋಗಿ ಹಂದಿ ಮಾಂಸವನ್ನು ತಿನ್ನಿ... 10, ಜನಪಥ್ ಗೆ ಹೋದಾಗ ಅಲ್ಲಿ ಪೋರ್ಕ್ ತಿನ್ನಿ... ವಯಸ್ಸಾದ ದನಗಳನ್ನು ಜನ ಕಟುಕರಿಗೆ ಮಾರುತ್ತಾರೆ.. ಅದು ಅವರ ಜೀವನಕ್ಕಾಗಿ.. ಆದರೆ, ಇದರಿಂದ ಅವರು ಖುಷಿ ಪಡುವುದಿಲ್ಲ...

ಉಪನಾಮದಲ್ಲೇ ಗೋ ಖಾ... ಎನ್ನುವುದಿದೆ
ನಿಮ್ಮ ಉಪನಾಮದಲ್ಲೇ ಗೋ ಖಾ... ಎನ್ನುವುದಿದೆ...ಹಾಗಾಗಿ ತಿನ್ನಿ.. ಅವಾಗಾವಾಗ ಹಂದಿಯ ಮಾಂಸವನ್ನೂ ತಿನ್ನಿ.. ನಿಮ್ಮದು ಅದ್ಭುತ ಸಾಧನೆಯಿದು.. ನಿಮಗೆ ನೊಬೆಲ್ ಪ್ರಶಸ್ತಿ ಕೊಡಬೇಕು.. ಈ ರೀತಿಯ ಕಾಮೆಂಟುಗಳು ರಾಮಚಂದ್ರ ಗುಹಾ ಅವರ ಟ್ವೀಟಿಗೆ ಬರುತ್ತಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications