ಬಿಜೆಪಿ ಆಡಳಿತದ ರಾಜ್ಯಗಳಲ್ಲಿ 'ಬೀಫ್' ತಿನ್ನೋದೇ ಒಂದು ಖುಷಿ, ಗುಹಾ
ಪಣಜಿ, ಡಿ 7: ಗೋವನ್ನು ದೇವರೆಂದು ಪೂಜಿಸುವ ದೇಶವಿದು, ನೀವೂ ಪೂಜಿಸಬೇಕು ಎನ್ನುವ ಒತ್ತಾಯವೇನೂ ಇಲ್ಲ. ಆದರೆ, ರಾಮಚಂದ್ರ ಎಂದು ಹೆಸರಿಟ್ಟುಕೊಂಡಿರುವ ನೀವು ಈ ರೀತಿ ಅಣಕವಾಡುವುದು ಸರಿಯೇ?
ಖ್ಯಾತ ಇತಿಹಾಸಗಾರ ರಾಮಚಂದ್ರ ಗುಹಾ, ಬಿಜೆಪಿಯನ್ನು, ಗೋಪ್ರೇಮಿಗಳನ್ನು ತಮಾಷೆ ಮಾಡಲು ಹೋಗಿ, ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಸರಿಯಾಗಿ ಉಗಿಸಿಕೊಂಡಿದ್ದಾರೆ.
ಗೋವಾದ ಪಣಜಿಯಲ್ಲಿ ಊಟ ಮಾಡುತ್ತಿದ್ದೇನೆ, ಇಲ್ಲಿ ಬಿಜೆಪಿಯ ಆಡಳಿತವಿದೆ. ಹಾಗಾಗಿ, ಊಟಕ್ಕೆ ಖುಷಿಯಿಂದ ದನದ ಮಾಂಸ ತಿನ್ನುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು, ಕೈಯಲ್ಲಿ ಬೀಫ್ ಇರುವ ತಟ್ಟೆ, ಜೊತೆಗೆ ಬಿಯರ್ ಇರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ.
ಸುಮಾರು 2.04 ಮಿಲಿಯನ್ ಫಾಲೋವರ್ ಗಳನ್ನು ಹೊಂದಿರುವ ರಾಮಚಂದ್ರ ಗುಹಾ ಅವರ ಈ ಟ್ವೀಟಿಗೆ 1,300ಕ್ಕೂ ಹೆಚ್ಚು ಕಾಮೆಂಟುಗಳು ಬಂದಿವೆ. ಜೊತೆಗೆ, ಈ ಟ್ವೀಟ್ 653 ಬಾರಿ ರಿಟ್ವೀಟ್ ಆಗಿದೆ.
ಹಿಂದೂ ಸಂಪ್ರದಾಯ, ಬಿಜೆಪಿ, ಸಂಘ ಪರಿವಾರ ಮತ್ತು ಗೋಪ್ರೇಮಿಗಳನ್ನು, ಅಣಕಿಸುವ ಉದ್ದೇಶದಿಂದಲೇ ಹಾಕಲಾಗಿರುವ ಈ ಟ್ವೀಟಿಗೆ, ವ್ಯಾಪಕ ಟೀಕೆ ವ್ಯಕ್ತವಾಗಿದೆ. ಕೆಲವೊಂದು ಸ್ಯಾಂಪಲ್ ಗಳು, ಕೆಳಗೆ ಮುಂದುವರಿಸಲಾಗಿದೆ...

ಸಮಾನತೆ ವಿಷಯ ಬಂದಾಗ, ದಲಿತರು ಮಹಿಳೆಯರಿಗಿಂತ ಹೆಚ್ಚು ಪ್ರಗತಿ
ಖ್ಯಾತ ಇಂಗ್ಲಿಷ್ ದಿನಪತ್ರಿಕೆಗಳ ಅಂಕಣಕಾರರೂ ಆಗಿರುವ ರಾಮಚಂದ್ರ ಗುಹಾ, ಸಮಾನತೆ ವಿಷಯ ಬಂದಾಗ, ದಲಿತರು ಮಹಿಳೆಯರಿಗಿಂತ ಹೆಚ್ಚು ಪ್ರಗತಿಯನ್ನು ಕಾಣುತ್ತಿದ್ದಾರೆಂದು ಹೇಳಿದ್ದರು. ಪಣಜಿಯಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಗುಹಾ ಈ ಮೇಲಿನ ವಿವಾದಕಾರಿ ಟ್ವೀಟ್ ಅನ್ನು ಮಾಡಿದ್ದರು.

ಆಲಿಗಢಕ್ಕೆ ಹೋಗಿ, ಅಲ್ಲಿ ಪೋರ್ಕ್ ಅನ್ನು ತಿನ್ನಿ
ವೆಲ್ಡನ್.. ಇದೇ ರೀತಿ ಆಲಿಗಢಕ್ಕೆ ಹೋಗಿ, ಅಲ್ಲಿ ಪೋರ್ಕ್ (ಹಂದಿ ಮಾಂಸ) ಅನ್ನು ತಿನ್ನಿ.. ಬದುಕಿ ವಾಪಸ್ ಬಂದರೆ, ಮತ್ತೆ ಟ್ವೀಟ್ ಮಾಡಿ... ನೀವು ಖುಷಿಯಿಂದ ಊಟ ಮಾಡುತ್ತಿಲ್ಲ. ಕೋಟ್ಯಾಂತರ ಜನರ ಭಾವನೆಯನ್ನು ಅಣಕವಾಡಲೆಂದೇ ಹಾಕಲಾಗಿರುವ ಟ್ವೀಟ್ ಇದು..

ಅದು ನಾಯಿಯ ಮಾಂಸವಿರಬೇಕು
ಇತ್ತೀಚೆಗೆ ತಮಿಳುನಾಡಿನಲ್ಲಿ ಸುಮಾರು ಒಂದೂವರೆ ಸಾವಿರ ಕೆಜಿಯಷ್ಟು ಮಾಂಸವನ್ನು ಪರೀಕ್ಷಿಸಲಾಗಿತ್ತು. ಅದು ದನದ ಮಾಂಸವಾಗಿರಲಿಲ್ಲ, ಅದು ನಾಯಿಯ ಮಾಂಸವಾಗಿತ್ತು. ಬಹುಷಃ ನೀವು ನಾಯಿ ಮಾಂಸವನ್ನೇ ತಿಂದಿರಬೇಕು.. ನೀವು ಪಕ್ಕಾ ಅವಕಾಶವಾದಿ ಎನ್ನುವ ಟ್ವೀಟ್..

10, ಜನಪಥ್ ಗೆ ಹೋದಾಗ ಅಲ್ಲಿ ಪೋರ್ಕ್ ತಿನ್ನಿ
ಮುಂದೊಂದು ದಿನ ಹೈದರಾಬಾದಿಗೆ ಹೋಗಿ ಹಂದಿ ಮಾಂಸವನ್ನು ತಿನ್ನಿ... 10, ಜನಪಥ್ ಗೆ ಹೋದಾಗ ಅಲ್ಲಿ ಪೋರ್ಕ್ ತಿನ್ನಿ... ವಯಸ್ಸಾದ ದನಗಳನ್ನು ಜನ ಕಟುಕರಿಗೆ ಮಾರುತ್ತಾರೆ.. ಅದು ಅವರ ಜೀವನಕ್ಕಾಗಿ.. ಆದರೆ, ಇದರಿಂದ ಅವರು ಖುಷಿ ಪಡುವುದಿಲ್ಲ...

ಉಪನಾಮದಲ್ಲೇ ಗೋ ಖಾ... ಎನ್ನುವುದಿದೆ
ನಿಮ್ಮ ಉಪನಾಮದಲ್ಲೇ ಗೋ ಖಾ... ಎನ್ನುವುದಿದೆ...ಹಾಗಾಗಿ ತಿನ್ನಿ.. ಅವಾಗಾವಾಗ ಹಂದಿಯ ಮಾಂಸವನ್ನೂ ತಿನ್ನಿ.. ನಿಮ್ಮದು ಅದ್ಭುತ ಸಾಧನೆಯಿದು.. ನಿಮಗೆ ನೊಬೆಲ್ ಪ್ರಶಸ್ತಿ ಕೊಡಬೇಕು.. ಈ ರೀತಿಯ ಕಾಮೆಂಟುಗಳು ರಾಮಚಂದ್ರ ಗುಹಾ ಅವರ ಟ್ವೀಟಿಗೆ ಬರುತ್ತಿದೆ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ












Click it and Unblock the Notifications