ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೌಡಿ ವಿಕಾಸ್ ದುಬೆ ಹತ್ಯೆ 'ನಕಲಿ ಎನ್‌ಕೌಂಟರ್‌' ಅಲ್ಲ: ಪೊಲೀಸರ ಮಾಹಿತಿ

|
Google Oneindia Kannada News

ಲಕ್ನೋ, ಜುಲೈ17: ರೌಡಿ ವಿಕಾಸ್ ದುಬೆ ಹತ್ಯೆ 'ನಕಲಿ ಎನ್‌ಕೌಂಟರ್' ಅಲ್ಲ ಎಂದು ಉತ್ತರ ಪ್ರದೇಶದ ಪೊಲೀಸರು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ.

ಸುಪ್ರೀಂಕೋರ್ಟ್ ನಿಯಮಗಳು ಹಾಗೂ ಕಾನೂನಿನ ಪ್ರಕಾರವೇ ನಾವು ನಡೆದುಕೊಂಡಿದ್ದೇವೆ. ಕಾರು ಅಪಘಾತವಾದಾಗ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಆತ ಪ್ರಯತ್ನಿಸಿದಾಗ ಗುಂಡು ಹಾರಿಸಿದ್ದೇವೆ. ಮಧ್ಯಪ್ರದೇಶದಲ್ಲಿ ಆತನನ್ನು ಬಂಧಿಸಲಾಗಿತ್ತು.

'ತೆಲಂಗಾಣ ಪ್ರಕರಣ ರೀತಿ ಮಾಡೋಣ': ವಿಕಾಸ್ ದುಬೆ ಕೇಸ್‌ ಬಗ್ಗೆ ಸುಪ್ರೀಂ ಚಿಂತನೆ'ತೆಲಂಗಾಣ ಪ್ರಕರಣ ರೀತಿ ಮಾಡೋಣ': ವಿಕಾಸ್ ದುಬೆ ಕೇಸ್‌ ಬಗ್ಗೆ ಸುಪ್ರೀಂ ಚಿಂತನೆ

ಅವನನ್ನು ಬಂಧಿಸಲು ಯತ್ನಿಸಿದಾಗ ಪೊಲೀಸರ ಗನ್ ವಶಕ್ಕೆ ಪಡೆದು ಗುಂಡು ಹಾರಿಸಿದ್ದ, ಹೀಗಾಗಿ ಅನಿವಾರ್ಯವಾಗಿ ಆತನ ಮೇಲೆ ಗುಂಡು ಹಾರಿಸಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Up Police Says Vikas Dubey Killing Not Fake Encounter

ವಿಕಾಸ್ ದುಬೆ ಹತ್ಯೆ ನಡೆದಿದ್ದು ನಕಲಿ ಎನ್‌ಕೌಂಟರ್ ಅಲ್ಲ ಇದನ್ನು ತೆಲಂಗಾಣ ಪ್ರಕರಣದ ಜತೆ ತಾಳೆ ಹಾಕುವುದು ಸರಿ ಅಲ್ಲ ಡಿಜಿ ತಿಳಿಸಿದ್ದಾರೆ.

ವಿಕಾಸ್ ದುಬೆ ಪ್ರಕರಣ ಹಾಗೂ ತೆಲಂಗಾಣ ಪ್ರಕರಣದಲ್ಲಿ ಬಹಳ ವ್ಯತ್ಯಾಸವಿದೆ. ರೌಡಿ ವಿಕಾಸ್ ವಿರುದ್ಧ 64 ಪ್ರಕರಣಗಳಿದ್ದವು ಎಂದು ಹೇಳಿದ್ದಾರೆ.ಎಂಟು ಪೊಲೀಸರನ್ನು ಹತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ವಿಕಾಸ್ ದುಬೆ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದನು. ದುಬೆ ಎನ್‌ಕೌಂಟರ್ ಕುರಿತು ಕೋರ್ಟ್ ಅಡಿ ಸಿಬಿಐ ತನಿಖೆ ಆಗಲಿ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸುಪ್ರೀಂಕೋರ್ಟ್ ಮುಂದೆ ಬಂದಿದೆ.

English summary
The death of Uttar Pradesh gangster while he was in the custody of the state police was not a "fake encounter", the UP Police told the Supreme Court today. The UP Police said "the state acted as per law and Supreme Court guidelines".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X