ಗಣರಾಜ್ಯೋತ್ಸವದ ಮೇಲೆ ಐಎಸ್ಐಎಸ್ ಉಗ್ರರ ಕಣ್ಣು?
ನವದೆಹಲಿ, ಜನವರಿ 19 : ಐಎಸ್ಐಎಸ್ ಉಗ್ರರು ಗಣರಾಜ್ಯೋತ್ಸವದಂದು ದಾಳಿ ನಡೆಸುವ ಸಾಧ್ಯತೆ. ಕೇಂದ್ರ ಗುಪ್ತಚರ ಇಲಾಖೆ ನವದೆಹಲಿಯಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದೆ.
ಇಸ್ಲಾಮಿಕ್
ಸ್ಟೇಟ್
ಆಫ್
ಸಿರಿಯಾ
ಇರಾಕ್
(ಐಎಸ್ಐಎಸ್)
ಉಗ್ರರು
ಜನವರಿ
26ರ
ಗಣರಾಜ್ಯೋತ್ಸವದ
ದಿನ
ದೆಹಲಿ
ಸೇರಿದಂತೆ
ದೇಶದ
ವಿವಿಧ
ನಗರಗಳ
ಮೇಲೆ
ದಾಳಿ
ಮಾಡಬಹುದು
ಎಂದು
ಎಚ್ಚರಿಕೆ
ರವಾನಿಸಲಾಗಿದೆ.
ಅಗತ್ಯ
ಭದ್ರತೆ
ಕೈಗೊಳ್ಳುವಂತೆ
ಪೊಲೀಸರಿಗೆ
ಸೂಚಿಸಲಾಗಿದೆ.
[ಪುಣೆಯ
ಬಾಲಕಿ
ಉಗ್ರ
ಸಂಘಟನೆ
ಸೇರಲು
ಹೊರಟಿದ್ದಳೆ?]
ಈ ಬಾರಿಯ ಗಣರಾಜ್ಯೋತ್ಸವಕ್ಕೆ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೋಲ್ಯಾಂಡ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಫ್ರಾನ್ಸ್ ಐಎಸ್ಐಎಸ್ ಉಗ್ರರ ವಿರುದ್ಧ ಹೋರಾಟ ನಡೆಸುತ್ತಿರುವ ಕಾರಣ, ಉಗ್ರರು ದಾಳಿ ಮಾಡಬಹುದು ಎಂಬ ಎಚ್ಚರಿಕೆ ನೀಡಲಾಗಿದೆ. [ರಾಜಪಥ್ ನಲ್ಲಿ ಹೆಜ್ಜೆ ಹಾಕಲಿದ್ದಾರೆ ಫ್ರಾನ್ಸ್ ಯೋಧರು]
ದೆಹಲಿ ಪೊಲೀಸರು ಅಲ್ ಖೈದಾ ಉಗ್ರ ಸಂಘಟನೆ ಜೊತೆ ನಂಟು ಹೊಂದಿರುವ ಹಲವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅತ್ತ ದೇಶದ ವಿವಿಧ ನಗರಗಳಲ್ಲಿ ಐಎಸ್ಐಎಸ್ ಸಂಘಟನೆ ಸದಸ್ಯರ ಜೊತೆ ತನಿಖೆ ನಡೆಯುತ್ತಿದೆ. ಆದ್ದರಿಂದ, ಉಗ್ರರು ದಾಳಿ ನಡೆಸಬಹುದು ಎಂದು ಶಂಕಿಸಲಾಗಿದೆ.
ದಕ್ಷಿಣ ರಾಜ್ಯಗಳಲ್ಲೂ ಹೈ ಅಲರ್ಟ್ : ಐಎಸ್ಐಎಸ್ ಉಗ್ರರು ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ತೆಲಂಗಾಣ, ಕರ್ನಾಟಕದಲ್ಲಿ ಹೆಚ್ಚು ಬೆಂಬಲಿಗರನ್ನು ಹೊಂದಿರುವುದು ಇತ್ತೀಚಿಗೆ ಬೆಳಕಿಗೆ ಬಂದಿದೆ. ಆದ್ದರಿಂದ, ಜನವರಿ 26ರಂದು ಭದ್ರತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಗುಪ್ತಚರ ಇಲಾಖೆ ಹೇಳಿದೆ. [isisಗೆ ಹೈದರಾಬಾದ್ ನಲ್ಲಿ ಹೆಚ್ಚು ಬೆಂಬಲಿಗರು]
ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದ ಪರೇಡ್ನಲ್ಲಿ ವಿದೇಶಿ ಸೇನಾ ತುಕಡಿ ಪಾಲ್ಗೊಳ್ಳಲಿದೆ. ಫ್ರಾನ್ಸ್ನ 35ನೇ ಸಶಸ್ತ್ರ ಪಡೆ ರಾಜಪಥ್ನಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದು, 56 ಯೋಧರು ಭಾರತೀಯ ಸೇನಾ ಪಡೆ ಜೊತೆ ಹೆಜ್ಜೆ ಹಾಕಲಿದ್ದಾರೆ.