ಮೊದಲು ಅಮ್ಮ ಮುಖ್ಯ .. ನಂತರ ಸುದ್ದಿಗೋಷ್ಠಿ.. ಮೆಚ್ಚುಗೆಗೆ ಪಾತ್ರವಾದ ಟೀಮ್ ಇಂಡಿಯಾ ನಿತೀಶ್‌ ಕುಮಾರ್ ರೆಡ್ಡಿ ನಡೆ

Nitish Kumar Reddy: ಧರ್ಮಶಾಲಾದಲ್ಲಿ ಭಾನುವಾರ (ಜೂನ್ 14) ಅಫ್ಘಾನಿಸ್ತಾನದ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿತು. ಪಂದ್ಯದ ನಂತರ ಮೈದಾನದ ಹೊರಗೆ ಅದ್ಭುತ ಘಟನೆ ನಡೆದಿದೆ. ಟೀಮ್ ಇಂಡಿಯಾ ಯುವ ಆಲ್-ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದಾಗ, ಮಧ್ಯದಲ್ಲೇ ತಮ್ಮ ತಾಯಿಯ ಫೋನ್ ಕರೆ ಬಂದಿದ್ದರಿಂದ ಕೆಲಕಾಲ ಸುದ್ದಿಗೋಷ್ಠಿಯನ್ನು ಸ್ಥಗಿತಗೊಳಿಸಿದರು. ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದೆ.

ಪಂದ್ಯ ಮುಗಿದ ಬಳಿಕ ನಿತೀಶ್ ರೆಡ್ಡಿ ಅವರು ಪತ್ರಕರ್ತರು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಈ ಸಮಯದಲ್ಲಿ ಮೈಕ್ರೋಫೋನ್‌ಗಳ ಹತ್ತಿರವೇ ಇಟ್ಟಿದ್ದ ಅವರ ಮೊಬೈಲ್ ಫೋನ್ ಇದ್ದಕ್ಕಿದ್ದಂತೆ ರಿಂಗ್ ಆಗಲು ಪ್ರಾರಂಭಿಸಿತು. ಸ್ಕ್ರೀನ್ ಮೇಲೆ 'ಅಮ್ಮ' ಎಂದು ಹೆಸರು ಕಂಡ ತಕ್ಷಣ ಈ 23 ವರ್ಷದ ಯುವ ಆಟಗಾರ ಅಮ್ಮನ ಕರೆಯನ್ನು ನಿರ್ಲಕ್ಷಿಸದೆ ತಕ್ಷಣವೇ ಫೋನ್ ಕೈಗೆತ್ತಿಕೊಂಡರು.

Nitish Kumar Reddy Stops Press Conference for Mother s Call Heartwarming Moment Goes Huge Viral

'ಮೊದಲು ಅಮ್ಮ.. ನಂತರ ಪತ್ರಿಕಾಗೋಷ್ಠಿ'

ಅಲ್ಲಿದ್ದ ಪತ್ರಕರ್ತರಿಗೆ 'ಸಾರಿ, ನಾನು ಈ ಫೋನ್ ಕರೆಯನ್ನು ಸ್ವೀಕರಿಸಲೇಬೇಕು,' ಎಂದು ವಿನಂತಿಸಿದರು. ಬಳಿಕ ತಮ್ಮ ಮಾತೃಭಾಷೆಯಾದ ತೆಲುಗಿನಲ್ಲಿ ತಾಯಿಯೊಂದಿಗೆ ಮಾತನಾಡಿ, 'ಅಮ್ಮ ನೇನು ಮಳ್ಳಿ ಚೇಸ್ತಾನು, ಫೈವ್ ಮಿನಿಟ್ಸ್,' (ಅಮ್ಮ, ನಾನು ಐದು ನಿಮಿಷಗಳಲ್ಲಿ ನಿನಗೆ ವಾಪಸ್ ಫೋನ್ ಮಾಡುತ್ತೇನೆ) ಎಂದು ಅತ್ಯಂತ ವಿನಮ್ರವಾಗಿ ಹೇಳಿ ಫೋನ್ ಇಟ್ಟರು. ನಂತರ ಪತ್ರಕರ್ತರಲ್ಲಿ ಕ್ಷಮೆ ಯಾಚಿಸಿ ತಮ್ಮ ಮಾಧ್ಯಮ ಸಂವಾದವನ್ನು ಮುಂದುವರಿಸಿದರು. ಈ ಘಟನೆ ಇದೀಗ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ 'ಅಮ್ಮ' ಎನ್ನುವ ಪದದ ಹಿಂದೆ ಎಷ್ಟು ಶಕ್ತಿ ಅಡಗಿದೆ ಎಂಬುದನ್ನು ಎತ್ತಿತೋರಿಸಿದೆ.

ಬಿಸಿಸಿಐ ಮತ್ತು ಅಭಿಮಾನಿಗಳಿಂದ ಮೆಚ್ಚುಗೆಗಳ ಸುರಿಮಳೆ

ಈ ಸುಂದರ ಕ್ಷಣದ ವಿಡಿಯೋವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದೆ. ಅದಕ್ಕೆ ಬಿಸಿಸಿಐ, 'ಪಂದ್ಯದ ನಂತರದ ಪತ್ರಿಕಾಗೋಷ್ಠಿ ಕಾಯಬಹುದು, ಆದರೆ ಅಮ್ಮನ ಕರೆಗೆ ಕಾಯಿಸಲು ಸಾಧ್ಯವಿಲ್ಲ,' ಎಂದು ಬರೆದುಕೊಂಡಿದೆ. ನಿತೀಶ್ ರೆಡ್ಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಗಳಿಸುತ್ತಿದ್ದರೂ ತಮ್ಮ ತಾಯಿಗೆ ನೀಡಬೇಕಾದ ಆದ್ಯತೆಯನ್ನು ಮರೆತಿಲ್ಲ ಎಂದು ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

2 ಪ್ರಮುಖ ವಿಕೆಟ್‌ ಕಬಳಿಸಿದ ನಿತೀಶ್ ಕುಮಾರ್ ರೆಡ್ಡಿ

ಕೇವಲ ಮೈದಾನದ ಹೊರಗಷ್ಟೇ ಅಲ್ಲದೆ, ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲೂ ನಿತೀಶ್ ರೆಡ್ಡಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಮಳೆಯಿಂದಾಗಿ ತಲಾ 25 ಓವರ್‌ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಅವರು 4 ಓವರ್‌ ಬೌಲಿಂಗ್ ಎಸೆದು 31 ರನ್ ನೀಡಿ 2 ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. ಶತಕ ಬಾರಿಸಿ ಭಾರತಕ್ಕೆ ಅಪಾಯಕಾರಿಯಾಗಿದ್ದ ರಹಮಾನುಲ್ಲಾ ಗುರ್ಬಾಜ್ ಮತ್ತು ಹಿರಿಯ ಆಲ್-ರೌಂಡರ್ ಮೊಹಮ್ಮದ್ ನಬಿ ಅವರ ವಿಕೆಟ್ ಪಡೆಯುವ ಮೂಲಕ ಅಫ್ಘಾನ್‌ ತಂಡವನ್ನು 194 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಭಾರತ ತಂಡವು ನಾಯಕ ಶುಭ್‌ಮನ್ ಗಿಲ್ ಅವರ ಭರ್ಜರಿ ಅಜೇಯ 84 ರನ್‌ಗಳ ನೆರವಿನಿಂದ 7 ವಿಕೆಟ್‌ಗಳ ಸುಲಭ ಜಯ ದಾಖಲಿಸಿ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+