'ಆರ್‌ಬಿಐ ಹಿಂದೆ ಕೇಂದ್ರವು ಅಡಗಿಕೊಂಡಿದೆ' : ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್

ನವದೆಹಲಿ, ಆಗಸ್ಟ್‌ 26: ಬಡ್ಡಿಯನ್ನು ಮನ್ನಾ ಮಾಡಬಹುದೇ ಅಥವಾ ಮೊರಟೋರಿಯಂ ಅವಧಿಯಲ್ಲಿ ಗಳಿಸಿದ ಬಡ್ಡಿಗೆ ಬಡ್ಡಿ ವಿಧಿಸುವುದನ್ನು ನಿಲ್ಲಿಸಬಹುದೇ ಎಂಬ ಬಗ್ಗೆ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಅಫಿಡವಿಟ್ ಅನ್ನು ಸಕಾಲದಲ್ಲಿ ಸಲ್ಲಿಸದಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ವಿಪತ್ತು ನಿರ್ವಹಣಾ ಕಾಯ್ದೆ (ಡಿಎಂಎ) ಅಡಿಯಲ್ಲಿ ಕೇಂದ್ರವು ತನ್ನ ಸ್ಥಾನವನ್ನು ಸ್ಪಷ್ಟಪಡಿಸಬೇಕಾಗಿತ್ತು ಮತ್ತು ಅದರ ಅಧಿಕಾರವನ್ನು ಹೊಂದಿರುವ ಅಫಿಡವಿಟ್ ಅನ್ನು ಸಲ್ಲಿಸಬೇಕಾಗಿತ್ತು. ಆದರೆ ಸರ್ಕಾರವು ಆರ್‌ಬಿಐ ನಿರ್ಧಾರದ ಹಿಂದೆ ಉಳಿದೆ ಎಂದು ಸುಪ್ರೀಂ ಕೆಂಡಕಾರಿದೆ.

ಈ ಪ್ರಕರಣವು ದೀರ್ಘಕಾಲದಿಂದ ಮುನ್ನಡೆಯುತ್ತಿರುವುದನ್ನು ಗಮನಿಸುತ್ತಾ, ನ್ಯಾಯಪೀಠದ ಮುಖ್ಯಸ್ಥ ನ್ಯಾಯಮೂರ್ತಿ ಅಶೋಕ್ ಭೂಷಣ್, "ನಿಮ್ಮ (ಕೇಂದ್ರ) ಲಾಕ್‌ಡೌನ್‌ನಿಂದ ಈ ಸಮಸ್ಯೆಯನ್ನು ಸೃಷ್ಟಿಸಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹಿಂದೆ ಯೂನಿಯನ್ ಆಫ್ ಇಂಡಿಯಾ ಅಡಗಿಕೊಂಡಿರುವುದು ಕಂಡುಬರುತ್ತದೆ "ಎಂದು ಅವರು ಹೇಳಿದರು.

SC Slams Govt On Loan Moratorium: Cant Be Interested Only In Business And Not About Sufferings Of People

" ಇದು ವ್ಯವಹಾರವನ್ನು ಮಾತ್ರ ನೋಡಿಕೊಳ್ಳುವ ಸಮಯವಲ್ಲ, ಜನರ ದುಃಸ್ಥಿತಿಯನ್ನು ಪರಿಗಣಿಸಬೇಕಾಗಿದೆ. ಪರಿಹಾರವನ್ನು ಪರಿಗಣಿಸಿ " ಎಂದು ನ್ಯಾಯಪೀಠ ಹೇಳಿದೆ.

ಸರ್ಕಾರ ಮತ್ತು ಆರ್‌ಬಿಐ ಸಹಕಾರದಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರವು ತಲೆಮರೆಸಿಕೊಂಡಿದೆ ಎಂದು ಹೇಳುವುದು ಅನ್ಯಾಯವಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದರು.

ಆಗಸ್ಟ್ 31 ರಂದು ಮುಕ್ತಾಯಗೊಳ್ಳಲಿರುವ ಸಾಲ ನಿಷೇಧವನ್ನು ಮರುಪಾವತಿ ಮಾಡುವ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ತನ್ನ ವಿಳಂಬವಾದ ಅಫಿಡವಿಟ್ ಸಲ್ಲಿಸಲು ನಿರ್ದೇಶಿಸಿದೆ. ಈ ಪ್ರಕರಣವನ್ನು ಮುಂದಿನ ಸೆಪ್ಟೆಂಬರ್ 1 ರಂದು ವಿಚಾರಣೆ ನಡೆಸಲಾಗುವುದು.

ವಾಸ್ತವವಾಗಿ, ಲಾಕ್ ಡೌನ್ ಸಮಯದಲ್ಲಿ ಕೇಂದ್ರ ಸರ್ಕಾರ ನೀಡಿದ ಸಾಲ ನಿಷೇಧಕ್ಕೆ ಬ್ಯಾಂಕುಗಳು ಬಡ್ಡಿ ವಿಧಿಸುತ್ತಿದ್ದು, ಇದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+