ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇನಾ ಕಾರ್ಯಾಚರಣೆ ಕುರಿತ ರಾಜಕೀಯಕ್ಕೆ ತೆರೆ ಎಳೆಯಲು ಚುನಾವಣಾ ಆಯೋಗಕ್ಕೆ ಮನವಿ

|
Google Oneindia Kannada News

ನವದೆಹಲಿ, ಮಾರ್ಚ್ 9: ಸೇನಾ ಕಾರ್ಯಾಚರಣೆ ಹಾಗೂ ಸೇನೆಯ ಚಟುವಟಿಕೆಗಳನ್ನು ಚುನಾವಣೆ ಅಥವಾ ರಾಜಕೀಯ ವಿಚಾರಕ್ಕೆ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕೆಂದು ಕೇಂದ್ರ ಚುನಾವಣಾ ಆಯೋಗಕ್ಕೆ ನೌಕಾ ಸೇನೆಯ ಮಾಜಿ ಮುಖ್ಯಸ್ಥರು ಪತ್ರ ಬರೆದಿದ್ದಾರೆ.

ನೌಕಾ ಸೇನೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ರಾಮ್‌ದಾಸ್‌ ಅವರು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದು ಆಯೋಗ ಕೂಡಲೇ ಮಧ್ಯಪ್ರವೇಶಿಸಬೇಕೆಂದು ಹೇಳಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಹಾಗೂ ಇತರೆ ಉಗ್ರ ನಿಗ್ರಹ ಕಾರ್ಯಾಚರಣೆ ಕುರಿತಂತೆ ಭಾರತದಲ್ಲಿ ನಡೆಯುತ್ತಿರುವ ರಾಜಕೀಯ ಆರೋಪ, ಪ್ರತ್ಯಾರೋಪಗಳ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆದಿದೆ.

3-4 ದಿನದಲ್ಲಿ ಪುಲ್ಮಾಮಾ ಶೈಲಿಯ ಮತ್ತೊಂದು ದಾಳಿಗೆ ಸಂಚು? ಗುಪ್ತಚರ ಮಾಹಿತಿ3-4 ದಿನದಲ್ಲಿ ಪುಲ್ಮಾಮಾ ಶೈಲಿಯ ಮತ್ತೊಂದು ದಾಳಿಗೆ ಸಂಚು? ಗುಪ್ತಚರ ಮಾಹಿತಿ

ಆಡಳಿತ ಪಕ್ಷ ಬಿಜೆಪಿಯು ಸರ್ಜಿಕಲ್ ಸ್ಟ್ರೈಕನ್ನು ರಾಜಕೀಯ ವಿಚಾರಕ್ಕೆ ಬಳಸಿಕೊಳ್ಳುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಪ್ರತಿ ದಿನ ಕಾಂಗ್ರೆಸ್ ಈ ಕುರಿತು ಬಿಜೆಪಿ ಮೇಲೆ ರಾಜಕೀಯ ದಾಳಿ ನಡೆಸುತ್ತಿದೆ.

stop Misuse Of Armed Forces Work In Polls

ಚುನಾವಣಾ ಸಮೀಪವಾಗುತ್ತಿರುವ ಕಾರಣ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವುದು ಚುನಾವಣಾ ಆಯೋಗದ ಕರ್ತವ್ಯವಾಗಿದೆ ಹಾಗಾಗಿ ಕೂಡಲೇ ಆಯೋಗ ಮಧ್ಯ ಪ್ರವೇಶಿಸಬೇಕೆಂದು ಮನವಿ ಮಾಡಿದ್ದಾರೆ.

ಜೈಷ್ ಮುಖಂಡ ಮಸೂದ್ ಬದುಕಿದ್ದಾನಾ, ಆಡಿಯೋ ಕ್ಲಿಪ್ ಏನು ಹೇಳುತ್ತೆ?ಜೈಷ್ ಮುಖಂಡ ಮಸೂದ್ ಬದುಕಿದ್ದಾನಾ, ಆಡಿಯೋ ಕ್ಲಿಪ್ ಏನು ಹೇಳುತ್ತೆ?

ಬಿಜೆಪಿಯು ಮತ್ತೊಮ್ಮೆ ಅಧಿಕಾರಕ್ಕೆ ಬರಲು ಭಾರತೀಯ ಸೇನೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿದ್ದವು.

English summary
Former Navy chief Admiral L Ramdas (retired) has asked immediate intervention of the Election Commission in stopping political parties from using the Pulwama attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X