ರಾಜಕಾರಣಿಗಳ ಕೆಂಪು ದೀಪದ ಕಾರಿಗೆ ಸುಪ್ರೀಂ ತಡೆ

ಸಂವಿಧಾನಿಕ ಹುದ್ದೆಗಳಲ್ಲಿ ಇರುವವರು ಕೆಂಪು ದೀಪವಿರುವ ವಾಹನಗಳನ್ನು ಬಳಸೇಕು. ತುರ್ತು ಸೇವೆಯ ವಾಹನಗಳಾದ ಆಂಬ್ಯುಲೆನ್ಸ್, ಪೊಲೀಸ್ ವಾಹನಗಳು, ಅಗ್ನಿಶಾಮಕ ವಾಹನಗಳು ಇನ್ನು ಮುಂದೆ ಕೆಂಪು ದೀಪದ ಬದಲು, ನೀಲಿ ದೀಪಗಳನ್ನು ಬಳಸಬೇಕು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ಹೊಸ ಕಾನೂನನ್ನು ಮೂರು ತಿಂಗಳಲ್ಲಿ ರೂಪಿಸಬೇಕು ಮತ್ತು ಕಾನೂನು ಜಾರಿಯಾಗುವ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಕೆಂಪು ದೀಪದ ಕಾರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಹೊಸ ಮಾರ್ಗಸೂಚಿ ಹೊರಡಿಸಿದೆ. ಇದರಿಂದ ರಾಜಕಾರಣಿಗಳು ಇನ್ನು ಕೆಂಪು ದೀಪದ ಕಾರು ಬಳಸುವಂತಿಲ್ಲ. ಪೊಲೀಸ್, ಆಂಬ್ಯುಲೆನ್ಸ್, ಅಗ್ನಿ ಶಾಮಕ ದಳದ ವಾಹನಗಳು ನೀಲಿ ದೀಪವನ್ನು ಬಳಸಬೇಕಾಗಿದೆ.
ಯಾರು ಬಳಸಬಹುದು : ಸಂವಿಧಾನಿಕ ಹುದ್ದೆಗಳಲ್ಲಿ ಇರುವವರು ಮಾತ್ರ ಕೆಂಪು ದೀಪದ ಕಾರು ಬಳಸಬಹುದಾಗಿದೆ. ರಾಷ್ಟ್ರಪತಿ, ಪ್ರಧಾನಿ, ಸಚಿವರು, ರಾಜ್ಯಪಾಲರು, ಮುಖ್ಯ ನ್ಯಾಯಮೂರ್ತಿಗಳು, ಸುಪ್ರೀಂಕೋರ್ಟ್ ನ್ಯಾಯಾಧೀಶರು, ಸಂಸತ್ತಿನ ಉಭಯ ಸದನಗಳ ಮುಖ್ಯಸ್ಥರು ಕೆಂಪು ದೀಪದ ಕಾರಿನಲ್ಲಿ ಸಂಚರಿಸಬಹುದಾಗಿದೆ.












Click it and Unblock the Notifications