'ರೋಹಿತ್ ತಿವಾರಿಗೆ ಬೇರೊಂದು ಮಹಿಳೆ ಜೊತೆ ಅಕ್ರಮ ಸಂಬಂಧವಿತ್ತು'
ನವದೆಹಲಿ, ಏ.27: ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ಡಿ ತಿವಾರಿ ಪುತ್ರ ರೋಹಿತ್ ತಿವಾರಿಗೆ ಬೇರೊಂದು ಹೆಣ್ಣಿನ ಜೊತೆ ಅಕ್ರಮ ಸಂಬಂಧವಿತ್ತು ಎಂದು ರೋಹಿತ್ ಅವರ ಪತ್ನಿ ಅಪೂರ್ವ ಮನೆಯವರು ಆರೋಪಿಸಿದ್ದಾರೆ.
ಏ.16ರಂದು ರೋಹಿತ್ ತಿವಾರಿ ಮೃತಪಟ್ಟಿದ್ದರು ಮೊದ ಮೊದಲು ಅದು ಹೃದಯಾಘಾತ ಅಂದುಕೊಂಡಿತ್ತಾದರೂ ವೈದ್ಯಕೀಯ ವರದಿ ಪ್ರಕಾರ ಅದು ಸಹಜ ಸಾವಲ್ಲ ಕೊಲೆ ಎನ್ನುವುದು ದೃಢಪಟ್ಟಿತ್ತು. ಅದಾದ ಬಳಿಕ ರೋಹಿತ್ ಪತ್ನಿ ಅಪೂರ್ವ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದು ತಾನೇ ಎಂದು ಆಕೆ ಒಪ್ಪಿಕೊಂಡಿದ್ದಳು.

ರೋಹಿತ್ ಕೊಲೆ ಮಾಡಲು ಇದೂ ಒಂದು ಕಾರಣ
ರೋಹಿತ್ ತಿವಾರಿಗೆ ಬೇರೊಂದು ಹೆಣ್ಣಿನ ಜೊತೆ ಅಕ್ರಮ ಸಂಬಂಧವಿತ್ತು ಎಂದು ರೋಹಿತ್ ಕುಟುಂಬಸ್ಥರು ಆರೋಪಿಸಿದ್ದಾರೆ. ಅಪೂರ್ವ ಹಾಗೂ ರೋಹಿತ್ ನಡುವೆ ಗಂಡ-ಹೆಂಡತಿಯ ಬಾಂಧವ್ಯವೇ ಇರಲಿಲ್ಲ ಇರಲಿಲ್ಲ ಎಂದು ಅಪೂರ್ವ ತಾಯಿ ಮಂಜುಳಾ ತಿಳಿಸಿದ್ದಾರೆ.

ರೋಹಿತ್ಗೆ ಗಂಭೀರ ಕಾಯಿಲೆ ಇತ್ತು
ಎನ್ಡಿ ತಿವಾರಿ ಪುತ್ರ ರೋಹಿತ್ ಶೇಖರ್ಗೆ ಗಂಭೀರ ಕಾಯಿಲೆ ಇತ್ತು. ಕೆಲವು ದಿನಗಳ ಹಿಂದೆ ರೋಹಿತ್ ಅವರ ಮನೆಯಲ್ಲಿ ಪೂಜೆ ನಡೆದಿತ್ತು. ಅಂದು ಅಪೂರ್ವ ಹಾಗೂ ರೋಹಿತ್ ಇಬ್ಬರ ಆರೋಗ್ಯವೂ ಸರಿ ಇರಲಿಲ್ಲ ಎಂದು ಮಂಜುಳಾ ಹೇಳಿದ್ದಾರೆ.

ರೋಹಿತ್ ಮತ್ತು ತಾಯಿ ಉಜ್ವಲ ನಡುವೆ ಆಸ್ತಿ ಕಲಹವಿತ್ತು
ರೋಹಿತ್ ತಿವಾರಿ ಹಾಗೂ ಅವರ ತಾಯಿ ಉಜ್ವಲ ಅವರ ನಡುವೆ ಆಸ್ತಿ ವಿಷಯವಾಗಿ ವೈಮನಸ್ಸು ಇತ್ತು, ಆಗಾಗ ಜಗಳ ನಡೆಯುತ್ತಿತ್ತು ಎನ್ನುವ ಮಾಹಿತಿ ತಿಳಿದುಬಂದಿದೆ.

ನಾಲ್ಕು ದಿನಗಳ ತನಿಖೆಯಲ್ಲಿ ಅಪೂರ್ವ ಹೇಳಿದ್ದೇನು?
ರೋಹಿತ್ ಕೊಲೆ ಕುರಿತು ಪೊಲೀಸರು ನಡೆಸಿದ ನಾಲ್ಕು ದಿನದ ತನಿಖೆಯಲ್ಲಿ ಅಪೂರ್ವ ಗೊಂದಲ ಹೇಳಿಕೆಗಳನ್ನು ನೀಡಿದ್ದಾರೆ. ತಮ್ಮ ನಿರ್ಧಾರದ ಕುರಿತು ಪಶ್ಚಾತಾಪ ಪಡುತ್ತಿರುವಂತೆಯೂ ಕಾಣುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾಗುವ ದಿನ ರೋಹಿತ್ ಆತನ ಸಹೋದರಿ ಜೊತೆಗೆ ಒಂದೇ ಗ್ಲಾಸಿನಲ್ಲಿ ಕುಡಿಯುತ್ತಿರುವ ಕುರಿತು ಜಗಳವಾಗಿತ್ತು. ಅಪೂರ್ವ ಹಾಗೂ ರೋಹಿತ್ ಒಂದೇ ಮಹಡಿಯಲ್ಲಿ ಬೇರೆ ಬೇರೆ ಕೋಣೆಯಲ್ಲಿ ವಾಸಿಸುತ್ತಿದ್ದರು ಎನ್ನುವುದು ಸಿಸಿಟಿವಿ ದೃಶ್ಯಾವಳಿ ಮೂಲಕ ತಿಳಿದುಬಂದಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications