ವೋಟು ಮಾಡಿ ಪೆರುಗ್ವೆ ಧ್ವಜ ಹಾಕಿದ ವಾದ್ರಾಗೆ ಪಂಚೋ ಪಂಚು!
ನವದೆಹಲಿ, ಮೇ 13: ನವದೆಹಲಿಯಲ್ಲಿ ಭಾನುವಾರ ನಡೆದ ಆರನೇ ಹಂತದ ಚುನಾವಣೆಯಲ್ಲಿ ಮತದಾನ ಮಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತಿ ರಾಬರ್ಟ್ ವಾದ್ರಾ ಇದೀಗ ಟ್ರೋಲ್ ಬಲೆಗೆ ಸಿಕ್ಕಿಕೊಂಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮತ ಚಲಾಯಿಸಿದ ನಂತರ ಸೆಲ್ಫಿಯನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದ ವಾದ್ರಾ, ಭಾರತದ ಧ್ವಜ ಬದಲು ಪೆರುಗ್ವೆ ದೇಶದ ಧ್ವಜವನ್ನು ಹಾಕಿದ್ದು ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. "ರಾಹುಲ್ ಗಾಂಧಿ ಅವರ ಭಾವನಿಗೆ ತನ್ನ ಸ್ವಂತ ದೇಶದ ಧ್ವಜ ಹೇಗೆ ಕಾಣುತ್ತದೆ ಎಂಬುದೂ ಗೊತ್ತಿಲ್ಲ" ಎಂದು ಟ್ವಿಟ್ಟಿಗರು ಆಡಿಕೊಂಡಿದ್ದಾರೆ.
ತಮ್ಮ ತಪ್ಪಿನ ಅರಿವಾದ ನಂತರ ಈ ಟ್ವೀಟ್ ಅನ್ನು ವಾದ್ರಾ ಡಿಲೀಟ್ ಮಾಡಿದರಾದರೂ ಟ್ರಾಲ್ ಹೈಕ್ಳು ಜೋಪಾನವಾಗಿ ತೆಗೆದಿಟ್ಟ ಸ್ಕ್ರೀನ್ ಶಾಟ್ ಗಳು ಮಾತ್ರ ಈಗಲೂ ವಾದ್ರಾ ಅವರ ಕಾಲೆಳೆಯುವ ಕೆಲಸ ಮಾಡುತ್ತಿವೆ.
"ಇದು ಕಣ್ತಪ್ಪಿನಿಂದ ಆದ ಪ್ರಮಾದ ಎಂಬುದು ನಿಮಗೂ ಗೊತ್ತು. ನನ್ನ ದೇಶದ ಬಾವುಟ ನನಗೆ ಗೊತ್ತಾಗುವುದಿಲ್ಲವೇ? ಇದು ಅಚಾತುರ್ಯದಿಂದ ಆದ ತಪ್ಪು ಎಂದು ಗೊತ್ತಿದೂ ನೀವು ಅಪಹಾಸ್ಯ ಮಾಡುತ್ತಿರುವುದು ನನಗೆ ಕೊಂಚ ನೋವುಂಟು ಮಾಡಿದೆ. ಆದರೂ ಪರವಾಗಿಲ್ಲ" ಎಂದು ರಾಬರ್ಟ್ ವಾದ್ರಾ ನಂತರ ಟ್ವೀಟ್ ಮಾಡಿದ್ದಾರೆ.
|
ಪೂರಾ ಕುಟುಂಬವೂ ಬುದ್ದು!!
ಅಂದರೆ ವಾದ್ರಾಗೆ ಭಾರತದ ಧ್ವಜ ಯಾವುದು ಎಂಬುದು ಗೊತ್ತಿಲ್ಲ. ಈ ಜೋಕರ್ ಬಾರತದ ಧ್ವಜ ಎಂದು ತಿಳಿದು ಪೆರುಗ್ವೆ ಧ್ವಜ ಹಾಕಿದ್ದಾರೆ. ಪೂರಾ ಕುಟುಂಬವೇ ಬುದ್ದು - ಸನಾತನ ಧರ್ಮ ಟ್ವಿಟ್ಟರ್
|
ದಿವ್ಯ ಸ್ಪಂದನ ಏನಂತಾರೆ?
"ದಿವ್ಯ ಸಂದನ ಅವರೇ, ಮೋದಿ 1988 ರಲ್ಲಿ ಡಿಜಿಟಲ್ ಕ್ಯಾಮರಾ ಮತ್ತು ಇಮೇಲ್ ಬಳಸಿದ್ದೆ ಎಂದು ಹೇಳಿದರೆ ಅದನ್ನು ಆಡಿಕೊಳ್ಳುತ್ತೀರಿ. ರಾಬರ್ಟ್ ವಾದ್ರಾ ಬಗ್ಗೆ ಏನನ್ನುತ್ತೀರಿ ನಮ್ಮ ದೇಶದ ಧ್ವಜವನ್ನೇ ಯಾರಾದರೂ ತಪ್ಪಾಗಿ ಪ್ರಕಟಿಸುತ್ತಾರೆಯೇ?" -ಅತನು ದಾಸ್
|
ಕುಟುಂಬವೆಲ್ಲ ಒಳ್ಳೆಯ ಕೆಲಸ ಮಾಡಿದೆ!
ರಾಬರ್ಟ್ ವಾದ್ರಾ ಅವರು ಪೆರುಗ್ವೆ ಧ್ವಜವನ್ನು ತಮ್ಮ ಧ್ವಜ ಎಂಬಂತೆ ಹಾಕಿದ್ದಾರೆ. ಕುಟುಂಬವೆಲ್ಲ ಒಳ್ಳೆಯ ಕೆಲಸ ಮಾಡಿದೆ ಎಂದು ವಂದನಾ ಎಂಬುವವರು ಕಾಲೆಳೆದಿದ್ದಾರೆ.
|
ದೇಶವನ್ನು ಪ್ರೀತಿಸದಿದ್ದರೆ ಹೀಗಾಗುತ್ತದೆ
ನಿಮ್ಮ ದೇಶವನ್ನು ಪ್ರೀತಿ ಮಾಡದೆ ಇದ್ದಾಗ ಹೀಗಾಗುತ್ತದೆ!- ಪ್ರತೀಕ್ ಅಗರ್ವಾಲ್
|
ವಾದ್ರಾ ಸಮಜಾಯಿಷಿ
"ಭಾರತ ನನ್ನ ಹೃದಯದಲ್ಲಿದೆ ಮತ್ತು ನಾನು ತಿರಂಗವನ್ನು ಗೌರವಿಸುತ್ತೇನೆ. ನನ್ನ ಟ್ವೀಟ್ ನಲ್ಲಿ ಪೆರುಗ್ವೆ ಧ್ವಜವನ್ನು ಹಾಕಿದ್ದು ಅಚಾತುರ್ಯದಿಂದ. ಅದನ್ನು ಕಣ್ತಪ್ಪಿನಿಂದ ಪೋಸ್ಟ್ ಮಾಡಿದ್ದು ಎಮಬುದು ನನಗೂ ಗೊತ್ತು, ನಿಮಗೆಲ್ಲರಿಗೂ ಗೊತ್ತು. ಆದರೆ ನೀವು ನನ್ನ ತಪ್ಪಿನೊಂದಿಗೆ ಆಟ ಆಡಲು ನಿರ್ಧರಿಸಿದ್ದೀರಿ! ಈ ದೇಶದಲ್ಲಿ ಚರ್ಚೆ ಮಾಡುವುದಕ್ಕೆ ಸಾಕಷ್ಟು ವಿಷಯಗಳಿದ್ದರೂ ಇದನ್ನು ಚರ್ಚಿಸುತ್ತಿದ್ದೀರಿ. ಅದು ನನಗೆ ಬೇಸರ ತಂದಿದೆ. ಆದರೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ರಾಬರ್ಟ್ ವಾದ್ರಾ ಸಮಜಾಯಿಷಿ ನೀಡಿದ್ದಾರೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications