ಸುಭಾಷ್ ಚಂದ್ರ ಬೋಸ್ ರನ್ನು ಪ್ರಣಬ್ ಮುಖರ್ಜಿ ಭೇಟಿಯಾಗಿದ್ದರೆ?
ನವದೆಹಲಿ, ಅಕ್ಟೋಬರ್, 27: ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಎಂದು ಭಾವಿಸುತ್ತಿರುವ ಗುಮ್ನಾಮೀ ಬಾಬಾ ಅವರನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಭೇಟಿಯಾಗಿದ್ದರೆ ಎಂಬ ಊಹಾಪೋಹಗಳು ಈಗ ದೇಶದಾದ್ಯಂತ ಹರಿದಾಡುತ್ತಿವೆ.
ಸ್ವಾಂತಂತ್ರ್ಯ ನಂತರವೂ ಸಹ ನೇತಾಜಿಯವರು ಬದುಕಿದ್ದರು ಮತ್ತು ಗುಮ್ನಾಮಿ ಬಾಬಾ ಎಂಬ ಹೆಸರಲ್ಲಿ ಸಂಚರಿಸುತ್ತಿದ್ದರು ಎಂಬ ಚರ್ಚೆಗಳು ಹಲವು ವರ್ಷಗಳಿಂದ ನಮ್ಮ ದೇಶದಲ್ಲಿ ಇವೆ.

1980ರಲ್ಲಿ ಕಾಂಗ್ರೆಸ್ ನ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಣಬ್ ಮುಖರ್ಜಿಯವರು ಗುಮ್ನಾಮೀ ಬಾಬಾ ಅವರನ್ನು ಫೈಜಾಬಾದ್ ನಲ್ಲಿ ಭೇಟಿಯಾಗಿದ್ದರು ಎಂಬ ಸುದ್ದಿ ಈಗ ಹರಿದಾಡುತ್ತಿದೆ.
ಸುಭಾಷ್ ಚಂದ್ರಬೋಸ್ ಅವರು 1945ರಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮರಣಿಸದ್ದಾರೆ ಎಂದು ಹಲವು ಮಂದಿ ಭಾವಿಸಿದ್ದರೂ ಸಹ ಅದು ನಿಜವಲ್ಲ 1980ರ ವರೆಗೂ ಗುಮ್ನಾಮೀ ಬಾಬಾ ಎಂಬ ಹೆಸರಲ್ಲಿ ಬೋಸ್ ಅವರು ಬದುಕಿದ್ದರು ಎಂದು ಕೆಲವರು ಹೇಳುತ್ತಿದ್ದಾರೆ.
ಪ್ರಣಬ್ ಮುಖರ್ಜಿಯವರು ಗುಮ್ನಾಮೀ ಬಾಬಾ ಅವರನ್ನು 1980ರಲ್ಲಿ ಭೇಟಿಯಾಗಿದ್ದರು ಎಂಬ ಸುದ್ದಿಯನ್ನು ಆಂಗ್ಲ ದಿನಪತ್ರಿಕೆಯೊಂದು ಪ್ರಕಟಿಸಿದೆ. ರವೀಂದ್ರ ಶುಕ್ಲಾ ಎಂಬುವವರು ಮಂಗಳವಾರ ಈ ವಿಷಯ ತಿಳಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
ಗುಫ್ತಾರ್ ಘಾಟ್ ಗಳಲ್ಲಿ ನಡೆದ ಗುಮ್ನಾಮೀ ಬಾಬಾ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ 13ಮಂದಿ ವ್ಯಕ್ತಿಗಳ ಪೈಕಿ ರವೀಂದ್ರ ಶುಕ್ಲಾ ಸಹ ಒಬ್ಬರು ಎಂದು ಹೇಳಲಾಗಿದೆ.
1981-82ರ ಮಧ್ಯ ಸಮಯದಲ್ಲಿ ಗುಮ್ನಾಮೀ ಬಾಬಾ ಅವರು " ಬೆಂಗಾಲ್ ನಿಂದ ಓರ್ವ ಸಜ್ಜನ ವ್ಯಕ್ತಿ ಬಂದಿದ್ದಾರೆ ಅವರೊಂದಿಗೆ ಮಾರುಕಟ್ಟೆ ವರೆಗೂ ಜೊತೆಯಾಗಿ ಹೋಗು" ಎಂದು ನನಗೆ ತಿಳಿಸಿದ್ದರು. ಆ ವ್ಯಕ್ತಿ ಅಯೋಧ್ಯೆಗೆ ಸೇರಿದ ಬಿರ್ಲಾ ದರ್ಮಶಾಲೆಯಲ್ಲಿ ಉಳಿದುಕೊಂಡಿದ್ದರು.
"ನನ್ನ ಬೈಕ್ ನಲ್ಲೇ ಅವರನ್ನು ಕೂರಿಸಿಕೊಂಡು ಫೈಜಾಬಾದ್ ಚೌಕ್ ವರೆಗೂ ಕರೆದುಕೊಂಡು ಹೋಗಿದ್ದೇ ಅವರನ್ನು ಈಗಲೂ ನಾನು ಗುರುತಿಸಬಲ್ಲೇ ಅವರು ಇಂದು ದೇಶದ ಉನ್ನತ ಹುದ್ದೆಯಲ್ಲಿದ್ದಾರೆ. ಅವರು ಬೇರಾರೂ ಅಲ್ಲ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರೇ" ಎಂದು ರವೀಂದ್ರ ಶುಕ್ಲಾ ಪತ್ರಿಕೆಗೆ ತಿಳಿಸಿದ್ದಾರೆ.
ಗುಮ್ನಾಮೀ ಬಾಬ ಅವರ ಆಶೀರ್ವಾದ ಪಡೆದಿದ್ದೇನೆ. ಪಾದ ಮುಟ್ಟಿ ನಮಸ್ಕರಿಸಿದ್ದೇನೆ. ಬಾಬಾ ಅವರಿಗೂ ಚಂದ್ರಬೋಸ್ ಅವರಿಗೂ ತೀರಾ ಹೋಲಿಕೆ ಇತ್ತು. ರೂಪದಲ್ಲಿ ಸಾಮ್ಯತೆ ಇತ್ತು ಎಂದು ಶುಕ್ಲಾ ತಿಳಿಸಿದ್ದಾರೆ.
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications