ಆರೋಗ್ಯವಂತರಾಗಿ, ಆರೋಗ್ಯವಂತ ದೇಶ ನಿರ್ಮಿಸಿ: ಮೋದಿ ಕರೆ
Recommended Video
ನವದೆಹಲಿ, ಆಗಸ್ಟ್ 29: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ 'ಫಿಟ್ ಇಂಡಿಯಾ ಅಭಿಯಾನಕ್ಕೆ' ಕ್ಕೆ ಚಾಲನೆ ನೀಡಿದರು.
ಸ್ವಾರ್ಥದಿಂದ ಸ್ವಾಸ್ಥದ ಎಡೆಗೆ ಭಾರತವನ್ನು ಕೊಂಡೊಯ್ಯುವ ನಿಟ್ಟಿನಿಂದ ಈ ಅಭಿಯಾನ ಪ್ರಾರಂಭ ಮಾಡಲಾಗಿದೆ ಎಂದು ಮೋದಿ ಹೇಳಿದರು.
ಫಿಟ್ ಇಂಡಿಯಾ ಅಭಿಯಾನದ ಈ ದಿನ ಆರೋಗ್ಯ ಮಾತ್ರವಲ್ಲದೆ, ದೇಶದ ಬಾವುಟವನ್ನು ವಿಶ್ವದೆಲ್ಲೆಡೆ ಹಾರಿಸಿದ ಕ್ರೀಡಾಪಟುಗಳಿಗೆ ಅಭಿನಂದಿಸುವ ದಿನವೂ ಆಗಿದೆ ಎಂದು ಅವರು ಹೇಳಿದರು.

ಫಿಟ್ ಇಂಡಿಯಾ ಕಾರ್ಯಕ್ರಮ ಸರ್ಕಾರದ ಕಾರ್ಯಕ್ರಮವಲ್ಲ ಇದು ಜನರ ಕಾರ್ಯಕ್ರಮ, ಇದು ಭಾರತದ ಎಲ್ಲ ಕುಟುಂಬಗಳ ಕಾರ್ಯಕ್ರಮ ಆಗಬೇಕು ಸರ್ಕಾರ ಕೇವಲ ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ ಎಂದು ಮೋದಿ ಹೇಳಿದರು. ಈ ಆಂದೋಲನವನ್ನು ಸರ್ಕಾರ ಶುರು ಮಾಡಿದೆ ಆದರೆ ಇದನ್ನು ಜನರೇ ಮುಂದುವರೆಸಬೇಕು ಎಂದರು.
ಆರೋಗ್ಯ ಸಂಬಂಧಿ ಅಭಿಯಾನವನ್ನು ವಿಶ್ವದ ದೇಶಗಳು ಈಗಾಗಲೇ ಪ್ರಾರಂಭ ಮಾಡಿಬಿಟ್ಟಿವೆ. ಜರ್ಮನಿ, ಆಸ್ಟ್ರೇಲಿಯಾ, ಅಮೆರಿಕ, ಚೀನಾ ಅಂತು ಮಿಷನ್ ರೀತಿಯಲ್ಲಿ ಫಿಟ್ ನೆಸ್ ಸಂಬಂಧಿ ಕಾರ್ಯಕ್ರಮ ಮಾಡುತ್ತಿದೆ ಎಂದರು.
ಬೋರ್ಡ್ ರೂಂನಿಂದ ಬಾಲಿವುಡ್ ವರೆಗೆ ಯಾವ ವ್ಯಕ್ತಿ ಆರೋಗ್ಯವಂತನಾಗಿರುತ್ತಾನೆಯೋ ಆತ ಮಾತ್ರವೇ ಸಾಧನೆಯ ಉತ್ತುಂಗ ಸ್ಪರ್ಷಿಸಬಲ್ಲ, ಆರೋಗ್ಯವಂತ ದೇಹ ಇದ್ದ ಕಡೆ ಮಾತ್ರವೇ ಆರೋಗ್ಯವಂತ ಮನಸ್ಸು ಮತ್ತು ಆಲೋಚನೆಗಳು ಇರುತ್ತವೆ ಎಂದು ಮೋದಿ ಹೇಳಿದರು.
ಫಿಟ್ ಇಂಡಿಯಾ ಆಂದೋಲವನ್ನು ನಿಮ್ಮ ಜೀವನದ ಭಾಗವನ್ನಾಗಿ ಮಾಡಿಕೊಳ್ಳಿ, ಇದರಲ್ಲಿ ಬಂಡವಾಳ ಇಲ್ಲ ಆದರೆ ಲಾಭ ಮಾತ್ರ ಅಸೀಮವಾಗಿದೆ. ವ್ಯಕ್ತಿ, ಕುಟುಂಬ, ಸಮಾಜ ದೇಶ ಎಲ್ಲವೂ ಆರೋಗ್ಯವಂತವಾಗಿರುತ್ತದೆ. 'ನಾನು ಫಿಟ್ ನನ್ನ ದೇಶ ಫಿಟ್' ಎಂಬ ಘೋಷಣೆಯನ್ನೂ ಮೋದಿ ನೀಡಿದರು.
ತಂತ್ರಜ್ಞಾನದಿಂದ ನಾವು ನಡೆಯುವುದು, ಓಡುವುದು ಬಿಟ್ಟುಬಿಟ್ಟಿದ್ದೀವಿ. ಆದರೆ ಇಂದು ಅದೇ ತಂತ್ರಜ್ಞಾನ ನೀವು ದಿನಕ್ಕೆ ಎಷ್ಟು ಹೆಜ್ಜೆ ಇಟ್ಟಿರೆಂದು ಲೆಕ್ಕ ಮಾಡಿ ಹೇಳುತ್ತಿದೆ ಎಂದು ಫಿಟ್ನೆಸ್ ಆಪ್ಗಳ ಬಗ್ಗೆ ಮೋದಿ ಹೇಳಿದರು.
ಎಳವೆಯಲ್ಲಿಯೇ ಹೃದಯಾಘಾತ, ಸಕ್ಕರೆ ಖಾಯಿಲೆ ಇನ್ನೂ ಅನೇಕ ಖಾಯಿಲೆಗಳಿಂದ ಇಂದಿನ ಯುವ ಪೀಳಿಗೆ ಬಳಲುತ್ತಿದೆ. ಇದರಿಂದ ಹೊರ ಬಂದು ನಿರೋಗಿಯಾಗಲು ವ್ಯಾಯಾಮದ ಅವಶ್ಯಕತೆ ಇದೆ ಎಂದರು ಮೋದಿ.
-
Vastu Alert: ಹಳೆಯ ಬಾವಿ ಮೇಲೆ ಮನೆ ಕಟ್ಟಿದ್ರೆ ಏನಾಗುತ್ತದೆ? ಇಲ್ಲಿದೆ ವಾಸ್ತು ಸತ್ಯಗಳು -
ನಿಮ್ಮ ಮನೆಯ ವಾಸ್ತು ಸರಿಯಿದೆಯೇ? ಶಾಂತಿ ಮತ್ತು ಪ್ರಗತಿಗಾಗಿ ಇಲ್ಲಿವೆ ಪರಿಹಾರಗಳು -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ












Click it and Unblock the Notifications