ಹುಮಾಯುನ್ ಸಮಾಧಿಗೆ ಚಿನ್ನದ ಕವಚ ಹಾಕಿದ ಮೋದಿ ಸರ್ಕಾರ
ನವದೆಹಲಿ, ಏಪ್ರಿಲ್ 20: ಹುಮಾಯುನ್ ಸಮಾಧಿ ಸಂರಕ್ಷಣೆ ಯತ್ನದ ಭಾಗವಾಗಿ ಹುಮಾಯನ್ ಸಮಾಧಿಯಲ್ಲಿ 18 ಅಡಿ ಎತ್ತರದ ಕವಚವನ್ನ್ನು ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವ ಡಾ.ಮಹೇಶ್ ಶರ್ಮಾ ಹಾಗೂ ಟೈಟಾನ್ ಕಂಪನಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಭಾಸ್ಕರ್ ಭಟ್ ಅವರೊಂದಿಗೆ ಲೋಕಾರ್ಪಣೆಗೊಳಿಸಿದರು.
ಹುಮಾಯುನ್ ಸಮಾಧಿ ಮೊಘಲರರಿಂದ ನಿರ್ಮಿತ ಮೊದಲ ದರ್ಗಾವಾಗಿದ್ದು, ಇದು ಮುಘಲ್ ಕುಶಲತೆಯ ಪ್ರತೀಕ ಹಾಗೂ 18 ಅಡಿ ಎತ್ತರದ ಪ್ರತಿಮೆ 2014ರಲ್ಲಿ ಹಾನಿಗೊಂಡಿತ್ತು. ಮೂಲ ಕವಚವನ್ನು ಸಣ್ಣ ಮಟ್ಟದ ದುರಸ್ಥಿಯೊಂದಿಗೆ ನಂತರ ಹುಮಾಯುನ್ ಟಾಂಬ್ ಸ್ಫೂರ್ತಿ ಕೇಂದ್ರದಲ್ಲಿ ಇಡಲಾಯಿತು. ಈಗ ಮರುಸೃಷ್ಟಿ ಮಾಡಿದ ಕವಚ 22 ಅಡಿ ಎತ್ತರದ ಮರದಿಂದ ಕೂಡಿದ್ದು 300 ಕೆಜಿ ತಾಮ್ರ, 6 ಪದರದ ಚಿನ್ನದಿಂದ ಕೂಡಿದೆ.
ದೀರ್ಘವಾದ ಅವಲೋಕನದಲ್ಲಿ ಹಾನಿಗೊಂಡ ಲೇಪವನ್ನು ಮುಘಲ್ ಕಲಾವಿದರು ತಾಮ್ರ ಮತ್ತು ಶುದ್ಧ ಚಿನ್ನದಿಂದ ತಯಾರಿಸಿದ್ದರು ಎಂದು ತಿಳಿಯಿತು. ವಿಶ್ವ ಪಾರಂಪರಿಕ ತಾಣದ ಅಧಿಕೃತತೆ ರಕ್ಷಿಸುವ ನಿಟ್ಟಿನಲ್ಲಿ ಮತ್ತು ಯುನೆಸ್ಕೊದ ಕಠಿಣವಾದ ಮಾರ್ಗಸೂಚಿ ಹಿನ್ನೆಲೆಯಲ್ಲಿ ಆಗಾ ಖಾನ್ ಟ್ರಸ್ಟ್ ಫಾರ್ ಕಲ್ಚರ್, ಅಗತ್ಯವಿರುವ ಚಿನ್ನ ಮತ್ತು ಲೇಪದ ಮರು ನಿರ್ಮಾಣದಲ್ಲಿ ಟೈಟಾನ್ ಕಂಪನಿ ಲಿಮಿಟೆಡ್ ನ ಸಹಾಯ ಕೋರಿತು. ಗುಣಮಟ್ಟ ಮತ್ತು ಮರು ನಿರ್ಮಾಣದತ್ತ ದೃಷ್ಟಿ ಹಾಯಿಸಿತು.

ಕೇಂದ್ರ ಸಂಸ್ಕೃತಿ ಸಚಿವ ಡಾ.ಮಹೇಶ್ ಶರ್ಮಾ ಮಾತನಾಡಿ, 2 ವರ್ಷಗಳ ಕಠಿಣ ಕೆಲಸದ ನಂತರ ಹುಮಾಯುನ್ ಟಾಂಬ್ನ ಕಳಶ ಅಥವಾ ಶಿಖರಾಲಂಕಾರ ಪ್ರತಿಮೆಯ ಮೇಲೆ ಮರಳಿದೆ. ಈ ಪಾರಂಪರಿಕ ವಸ್ತುವನ್ನು ಶೇ.100ರಷ್ಟು ತಾಮ್ರದಿಂದ ನಿರ್ಮಿಸಿದ್ದು, ಹಿಂದು ದೇವಾಲಯದಲ್ಲಿ ಕಾಣಿಸುವ ಕಳಶದಿಂದ ಸ್ಪೂರ್ತಿಗೊಂಡಿದೆ. ಭಾರತೀಯ ಶಿಲ್ಪದ ಹೆಮ್ಮೆಯನ್ನು ಪ್ರತಿನಿಧಿಸುತ್ತದೆ.
2 ವರ್ಷಗಳ ಕಾಲ ಕಸೂತಿಗಾಗಿ ತಜ್ಞರು ಶ್ರಮಿಸಿದ್ದನ್ನು ನಾನು ಅರ್ಥೈಸಿಕೊಂಡಿದ್ದೇನೆ. ಶತಮಾನಗಳಷ್ಟು ಹಳೆಯದಾದ ಕಲೆಗೆ, ಅದರ ಪರಿಕರಗಳಿಗೆ ಹಾಕಿದ ಶ್ರಮ ಶ್ಲಾಘನೀಯ. ಆಧುನಿಕ ತಂತ್ರಜ್ಞಾನ ಹುಮಾಯನ್ ಟಾಂಬ್ ಕಳಸದ ಮರು ಸೃಷ್ಟಿ ಸಾಧ್ಯವಾಗಿಸಿದೆ. ಇದು ನಿಜವಾಗಿಯೂ ಮೇಡ್ ಇನ್ ಇಂಡಿಯಾ ಎಂದರು.
ಟೈಟಾನ್ ಕಂಪನಿ ಲಿಮಿಟೆಡ್ ನ ಎಂಡಿ ಭಾಸ್ಕರ್ ಭಟ್ ಮಾತನಾಡಿ, ನಮ್ಮ ಆಭರಣ ಉತ್ಪಾದಕ ತಜ್ಞರು ಮತ್ತು ಅವ ಸಾಮಥ್ರ್ಯದಿಂದಾಗಿ ಹಾಗೂ ನಮ್ಮ ದೇಶದ ಸಂಸ್ಕøತಿ ಉಳಿಸುವ ನಮ್ಮ ಮೂಲ ಧ್ಯೇಯದ ಫಲವಾಗಿ ನಾವು ಟೈಟಾನ್ ಕಂಪನಿ ಲಿಮಿಟೆಡ್ನಲ್ಲಿ ಈ ಯೋಜನೆಯನ್ನು ಗೌರವವೆಂದು ಸ್ವೀಕರಿಸಿದೆವು.
ಈ ಯೋಜನೆಯಲ್ಲಿ ನಾವು ಆಗ ಖಾನ್ ಟ್ರಸ್ಟ್ ಫಾರ್ ಕಲ್ಚರ್ ಮತ್ತು ಆರ್ಕಿಯೊಲಜಿಕಲ್ ಸರ್ವೆ ಆಫ್ ಇಂಡಿಯಾ ಜೊತೆ ಕೈಜೋಡಿಸಿರುವುದಕ್ಕೆ ಹೆಮ್ಮೆಯಿದೆ. ನಾವು ಈ ಯೋಜನೆಯಲ್ಲಿ ಕೇವಲ ಕವಚದ ಮೂಲ ರೂಪ ಮರುಸೃಷ್ಟಿಯನ್ನು ಮಾತ್ರ ಪರಿಗಣಿಸಿಲ್ಲ. ಜೊತೆಗೆ ಗುಣಮಟ್ಟವನ್ನು ಪರಿಗಣಿಸಿದ್ದೇವೆ ಎಂದರು.

ಆಗ ಖಾನ್ ಟ್ರಸ್ಟ್ ಪಾರ್ ಕಲ್ಚರ್ ಸಿಇಒ ರತೀಶ್ ನಂದ ಮಾತನಾಡಿ, ಕವಚ ಹುಮಾಯುನ್ ಟಾಂಬ್ನ ಅತ್ಯಂತ ಕಲಾಕೃತ ಭಾಗ. ಮರು ಸೃಷ್ಟಿ ಮಾಡಿದ ಕವಚ ನಿಖರವಾಗಿ ಮೂಲದಂತೆ ಕಾಣಬೇಕಿತ್ತು. ಇದು ಟೈಟಾನ್ ಪಾಲುದಾರಿಕೆ ಜೊತೆಗಿನ ಸವಲಾಗಿತ್ತು. ಈ ಸಂರಕ್ಷಣೆ ಕೇವಲ ಮುಘಲ್ ಕಲಾಕೃತಿ ರಕ್ಷಣೆಯಲ್ಲ, ಇಡೀ ಸಂಪ್ರದಾಯದ ರಕ್ಷಣೆ. ಟೈಟಾನ್ನ ಪ್ರಬಲ ಸಹಾಯದಿಂದ ಇದು ಸಾಧ್ಯವಾಗಿದೆ ಎಂದರು.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications