ನವದೆಹಲಿ, ಜುಲೈ 17: ರಾಜ್ಯ ರಾಜಕಾರಣ ಈಗ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಿನ್ನೆ ನಡೆದಿದ್ದು ಇಂದು ತೀರ್ಪು ಹೊರಬೀಳಲಿದೆ.
ತಮ್ಮ ರಾಜೀನಾಮೆಯನ್ನು ಶೀಘ್ರವಾಗಿ ಅಂಗೀಕಾರ ಮಾಡಬೇಕೆಂದು ಕರ್ನಾಟಕ ವಿಧಾನಸಭೆ ಸ್ಪೀಕರ್ಗೆ ನಿರ್ದೇಶನ ನೀಡಿರೆಂದು ಮನವಿ ಮಾಡಿ ಅತೃಪ್ತ ಶಾಸಕರು ಸುಪ್ರೀಂ ಮೊರೆ ಹೋಗಿದ್ದರು. ಇದಕ್ಕೆ ವಿರುದ್ಧವಾಗಿ ಸ್ಪೀಕರ್ ಸಹ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಅತೃಪ್ತ ಶಾಸಕರು, ಸ್ಪೀಕರ್ ರಮೇಶ್ ಕುಮಾರ್, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪರವಾಗಿ ನಿನ್ನೆ ವಕೀಲರು ಸುಪ್ರೀಂಕೋರ್ಟ್ನಲ್ಲಿ ಸುಧೀರ್ಘ ವಾದ ಮಂಡಿಸಿದ್ದು, ವಾದ ಆಲಿಸಿದ ಸಿಜೆಐ ರಂಜನ್ ಗೊಗೋಯ್ ನೇತೃತ್ವದ ಪೀಠವು ಇಂದಿಗೆ ಆದೇಶವನ್ನು ಕಾಯ್ದಿರಿಸಿದೆ.
ಇಂದು ಹೊರಡಿಸಲಾಗುವ ಆದೇಶದ ಮೇಲೆ ರಾಜ್ಯ ರಾಜಕಾರಣದ ಮುಂದಿನ ಮಜಲುಗಳು ಬದಲಾವಣೆ ಆಗಲಿವೆ ಎಂದು ನಿರೀಕ್ಷಿಸಲಾಗಿದೆ. ಜೊತೆಗೆ ರಾಜೀನಾಮೆ ನೀಡಿರುವ 16 ಶಾಸಕರ ರಾಜಕೀಯ ಭವಿಷ್ಯವೂ ಸಹ ಇಂದಿನ ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ನಿಂತಿದೆ.
ಬೆಳಿಗ್ಗೆ 10:30 ಕ್ಕೆ ಸುಪ್ರೀಂಕೋರ್ಟ್ ನ್ಯಾಯ ಪೀಠವು ಆದೇಶವನ್ನು ಹೊರಡಿಸಲಿದೆ.
Newest FirstOldest First
3:33 PM, 17 Jul
ವಿಧಾನಸೌಧದ ಸ್ಪೀಕರ್ ಕಚೇರಿಗೆ ಮೈತ್ರಿ ನಾಯಕರು ಭೇಟಿ ನೀಡಿದ್ದಾರೆ. ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ಕೆಜೆ.ಜಾರ್ಜ್ ಅವರುಗಳು ಸ್ಪೀಕರ್ ಕಚೇರಿಗೆ ಭೇಟಿ ನೀಡಿದ್ದಾರೆ.
1:31 PM, 17 Jul
ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಒತ್ತಡಕ್ಕೆ ಒಳದಾದಂತಿರುವ ಕುಮಾರಸ್ವಾಮಿ ಅವರು, ಸಚಿವ ಕೆ.ಜೆ.ಜಾರ್ಜ್ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಅಲ್ಲಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ವೇಣುಗೋಪಾಲ್, ದಿನೇಶ್ ಗುಂಡೂರಾವ್ ಅವರೊಂದಿಗೆ ಸಭೆ ನಡೆಸಿದ್ದಾರೆ.
11:21 AM, 17 Jul
ಅತೃಪ್ತರ ಪರ ವಕೀಲ ಮುಕುಲ್ ರೊಹ್ಟಗಿ: ಸುಪ್ರೀಂಕೋರ್ಟ್ ಆದೇಶದ ಅನ್ವಯ ನಾಳೆ ನಡೆಯುವ ವಿಶ್ವಾಸಮತ ಯಾಚನೆಗೆ ಹಾಜರಾಗಬೇಕು ಎಂದು ವಿಪ್ ಮೂಲಕ ಒತ್ತಾಯ ಮಾಡುವಂತಿಲ್ಲ. ನಾಳೆ ವಿಶ್ವಾಸಮತಕ್ಕೆ ಹಾಜರಾಗುವುದು ಬಿಡುವುದು ಅವರ ವಿವೇಚನೆಗೆ ಬಿಟ್ಟಿದೆ.
11:01 AM, 17 Jul
ಸುಪ್ರೀಂಕೋರ್ಟ್ ಆದೇಶದ ಅನ್ವಯ ಅತೃಪ್ತ ಶಾಸಕರು, ನಾಳೆ ನಡೆಯುವ ವಿಶ್ವಾಸಮತ ಯಾಚನೆಯಲ್ಲಿ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ಭಾಗವಹಿಸಲೇ ಬೇಕು ಎಂದು ವಿಪ್ ಮೂಲಕ ಒತ್ತಾಯ ಮಾಡುವಂತಿಲ್ಲ.
10:57 AM, 17 Jul
ಸ್ಪೀಕರ್ ಅವರಿಗೆ ಕಾಲಮಿತಿಯಲ್ಲಿ ರಾಜೀನಾಮೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಿ ಎಂದು ಸೂಚಿಸಲು ಆಗದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
10:52 AM, 17 Jul
ಸ್ಪೀಕರ್ ಅವರು ತಮ್ಮ ವಿವೇಚನೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರ್ಯರಾಗಿದ್ದು, ಅನರ್ಹತೆ ಮತ್ತು ರಾಜೀನಾಮೆ ಅಂಗೀಕಾರ ಎರಡೂ ಸಹ ಸ್ಪೀಕರ್ ಅವರ ಬಳಿಯೇ ಇದ್ದು, ಸೂಕ್ತ ಸಮಯದಲ್ಲಿ ಅವರು ನಿರ್ಧಾರ ತೆಗೆದುಕೊಳ್ಳಬೇಕಿದೆ.
10:51 AM, 17 Jul
ಸ್ಪೀಕರ್ಗೆ ಸ್ಪಷ್ಟ ಸೂಚನೆ ನೀಡದ ಸುಪ್ರೀಂಕೋರ್ಟ್, ರಾಜೀನಾಮೆಯನ್ನು ಸೂಕ್ತ ಸಮಯದ ಕಾಲಮಿತಿಯಲ್ಲಿ ಇತ್ಯರ್ಥ ಪಡಿಸುವಂತೆ ನಿರ್ದೇಶಿಸಿದೆ.
10:49 AM, 17 Jul
ರಾಜೀನಾಮೆ ಇತ್ಯರ್ಥಪಡಿಸುವ ವರೆಗೆ ವಿಧಾನಸಭೆಯ ಯಾವುದೇ ಪ್ರಕ್ರಿಯೆಗಳು ಅತೃಪ್ತರಿಗೆ ಅನ್ವಯವಾಗುವುದಿಲ್ಲವಾದ್ದ ರಿಂದ ಅತೃಪ್ತ ಶಾಸಕರ ಮೇಲೆ ವಿಪ್ ಸಹ ಜಾರಿ ಆಗುವುದಿಲ್ಲ. ಹೀಗಾಗಿ ಅತೃಪ್ತ ಶಾಸಕರು ನಿರಾಳವಾಗಿರಬಹುದು.
10:47 AM, 17 Jul
ರಾಜೀನಾಮೆ ಅಂಗೀಕಾರದ ಬಗ್ಗೆಯಾಗಲಿ, ಅನರ್ಹತೆಯ ಬಗ್ಗೆಯಾಗಲಿ ನಿರ್ದಿಷ್ಟ ಸೂಚನೆಯನ್ನು ಸುಪ್ರೀಂಕೋರ್ಟ್ ಸ್ಪೀಕರ್ ಅವರಿಗೆ ನಿರ್ದೇಶನ ನೀಡಲಿಲ್ಲ. ಬದಲಿಗೆ ಅವನ್ನು ಸ್ವಂತ ವಿವೇಚನೆ ಮೇರೆಗೆ ನಿರ್ಧರಿಸಲು ಬಿಟ್ಟಿದೆ.
10:42 AM, 17 Jul
ಸಾಂವಿಧಾನಿಕ ಸಮತೋಲನವನ್ನು ಕಾಯ್ದುಕೊಳ್ಳುವುದು ಕಡ್ಡಾಯವೆಂದು ಹೇಳಿದ ಸುಪ್ರೀಂಕೋರ್ಟ್, ದೊಡ್ಡ ಮಟ್ಟದ ಕಾನೂನಿನ ತೊಡಕುಗಳಿಗೆ ಸೀಮಿತ ಕಾಲಮಿತಿಯಲ್ಲಿ ಉತ್ತರ ಹುಡುಕಿಕೊಳ್ಳುವುದು ಕಷ್ಟ ಎಂದು ಹೇಳಿದೆ.
10:40 AM, 17 Jul
ಸ್ಪೀಕರ್ ಅವರು ಕಾಲಮಿತಿಯೊಳಗೆ ಶಾಸಕರ ರಾಜೀನಾಮೆಯನ್ನು ಇತ್ಯರ್ಥ ಪಡಿಸುವಂತೆ ಒತ್ತಡ ಹೇರಲಾಗದು. ಸ್ಪೀಕರ್ ಅವರು ರಾಜೀನಾಮೆಯನ್ನು ಇತ್ಯರ್ಥ ಪಡಿಸುವ ವರೆಗೂ ವಿಧಾನಸಭೆಯ ಯಾವ ಪ್ರಕ್ರಿಯೆಗಳಿಗೂ ಶಾಸಕರು ಒಳಗಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.
10:40 AM, 17 Jul
ಸ್ಪೀಕರ್ ಅವರು ಕಾಲಮಿತಿಯೊಳಗೆ ಶಾಸಕರ ರಾಜೀನಾಮೆಯನ್ನು ಇತ್ಯರ್ಥ ಪಡಿಸುವಂತೆ ಒತ್ತಡ ಹೇರಲಾಗದು. ಸ್ಪೀಕರ್ ಅವರು ರಾಜೀನಾಮೆಯನ್ನು ಇತ್ಯರ್ಥ ಪಡಿಸುವ ವರೆಗೂ ವಿಧಾನಸಭೆಯ ಯಾವ ಪ್ರಕ್ರಿಯೆಗಳಿಗೂ ಶಾಸಕರು ಒಳಗಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.
10:42 AM, 17 Jul
ಸಾಂವಿಧಾನಿಕ ಸಮತೋಲನವನ್ನು ಕಾಯ್ದುಕೊಳ್ಳುವುದು ಕಡ್ಡಾಯವೆಂದು ಹೇಳಿದ ಸುಪ್ರೀಂಕೋರ್ಟ್, ದೊಡ್ಡ ಮಟ್ಟದ ಕಾನೂನಿನ ತೊಡಕುಗಳಿಗೆ ಸೀಮಿತ ಕಾಲಮಿತಿಯಲ್ಲಿ ಉತ್ತರ ಹುಡುಕಿಕೊಳ್ಳುವುದು ಕಷ್ಟ ಎಂದು ಹೇಳಿದೆ.
10:47 AM, 17 Jul
ರಾಜೀನಾಮೆ ಅಂಗೀಕಾರದ ಬಗ್ಗೆಯಾಗಲಿ, ಅನರ್ಹತೆಯ ಬಗ್ಗೆಯಾಗಲಿ ನಿರ್ದಿಷ್ಟ ಸೂಚನೆಯನ್ನು ಸುಪ್ರೀಂಕೋರ್ಟ್ ಸ್ಪೀಕರ್ ಅವರಿಗೆ ನಿರ್ದೇಶನ ನೀಡಲಿಲ್ಲ. ಬದಲಿಗೆ ಅವನ್ನು ಸ್ವಂತ ವಿವೇಚನೆ ಮೇರೆಗೆ ನಿರ್ಧರಿಸಲು ಬಿಟ್ಟಿದೆ.
10:49 AM, 17 Jul
ರಾಜೀನಾಮೆ ಇತ್ಯರ್ಥಪಡಿಸುವ ವರೆಗೆ ವಿಧಾನಸಭೆಯ ಯಾವುದೇ ಪ್ರಕ್ರಿಯೆಗಳು ಅತೃಪ್ತರಿಗೆ ಅನ್ವಯವಾಗುವುದಿಲ್ಲವಾದ್ದ ರಿಂದ ಅತೃಪ್ತ ಶಾಸಕರ ಮೇಲೆ ವಿಪ್ ಸಹ ಜಾರಿ ಆಗುವುದಿಲ್ಲ. ಹೀಗಾಗಿ ಅತೃಪ್ತ ಶಾಸಕರು ನಿರಾಳವಾಗಿರಬಹುದು.
10:51 AM, 17 Jul
ಸ್ಪೀಕರ್ಗೆ ಸ್ಪಷ್ಟ ಸೂಚನೆ ನೀಡದ ಸುಪ್ರೀಂಕೋರ್ಟ್, ರಾಜೀನಾಮೆಯನ್ನು ಸೂಕ್ತ ಸಮಯದ ಕಾಲಮಿತಿಯಲ್ಲಿ ಇತ್ಯರ್ಥ ಪಡಿಸುವಂತೆ ನಿರ್ದೇಶಿಸಿದೆ.
10:52 AM, 17 Jul
ಸ್ಪೀಕರ್ ಅವರು ತಮ್ಮ ವಿವೇಚನೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರ್ಯರಾಗಿದ್ದು, ಅನರ್ಹತೆ ಮತ್ತು ರಾಜೀನಾಮೆ ಅಂಗೀಕಾರ ಎರಡೂ ಸಹ ಸ್ಪೀಕರ್ ಅವರ ಬಳಿಯೇ ಇದ್ದು, ಸೂಕ್ತ ಸಮಯದಲ್ಲಿ ಅವರು ನಿರ್ಧಾರ ತೆಗೆದುಕೊಳ್ಳಬೇಕಿದೆ.
10:57 AM, 17 Jul
ಸ್ಪೀಕರ್ ಅವರಿಗೆ ಕಾಲಮಿತಿಯಲ್ಲಿ ರಾಜೀನಾಮೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಿ ಎಂದು ಸೂಚಿಸಲು ಆಗದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
11:01 AM, 17 Jul
ಸುಪ್ರೀಂಕೋರ್ಟ್ ಆದೇಶದ ಅನ್ವಯ ಅತೃಪ್ತ ಶಾಸಕರು, ನಾಳೆ ನಡೆಯುವ ವಿಶ್ವಾಸಮತ ಯಾಚನೆಯಲ್ಲಿ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ಭಾಗವಹಿಸಲೇ ಬೇಕು ಎಂದು ವಿಪ್ ಮೂಲಕ ಒತ್ತಾಯ ಮಾಡುವಂತಿಲ್ಲ.
11:21 AM, 17 Jul
ಅತೃಪ್ತರ ಪರ ವಕೀಲ ಮುಕುಲ್ ರೊಹ್ಟಗಿ: ಸುಪ್ರೀಂಕೋರ್ಟ್ ಆದೇಶದ ಅನ್ವಯ ನಾಳೆ ನಡೆಯುವ ವಿಶ್ವಾಸಮತ ಯಾಚನೆಗೆ ಹಾಜರಾಗಬೇಕು ಎಂದು ವಿಪ್ ಮೂಲಕ ಒತ್ತಾಯ ಮಾಡುವಂತಿಲ್ಲ. ನಾಳೆ ವಿಶ್ವಾಸಮತಕ್ಕೆ ಹಾಜರಾಗುವುದು ಬಿಡುವುದು ಅವರ ವಿವೇಚನೆಗೆ ಬಿಟ್ಟಿದೆ.
1:31 PM, 17 Jul
ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಒತ್ತಡಕ್ಕೆ ಒಳದಾದಂತಿರುವ ಕುಮಾರಸ್ವಾಮಿ ಅವರು, ಸಚಿವ ಕೆ.ಜೆ.ಜಾರ್ಜ್ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಅಲ್ಲಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ವೇಣುಗೋಪಾಲ್, ದಿನೇಶ್ ಗುಂಡೂರಾವ್ ಅವರೊಂದಿಗೆ ಸಭೆ ನಡೆಸಿದ್ದಾರೆ.
3:33 PM, 17 Jul
ವಿಧಾನಸೌಧದ ಸ್ಪೀಕರ್ ಕಚೇರಿಗೆ ಮೈತ್ರಿ ನಾಯಕರು ಭೇಟಿ ನೀಡಿದ್ದಾರೆ. ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ಕೆಜೆ.ಜಾರ್ಜ್ ಅವರುಗಳು ಸ್ಪೀಕರ್ ಕಚೇರಿಗೆ ಭೇಟಿ ನೀಡಿದ್ದಾರೆ.