ಚಿತ್ರಗಳಲ್ಲಿ: ನೆಲಕಚ್ಚಿದ ಕಮಲ, ಎಎಪಿಗೆ ಅಭೂತಪೂರ್ವ ಜಯ
ನವದೆಹಲಿ, ಫೆ.10: 'ದೆಹಲಿ ಸಿಎಂ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ಅವರಿಗೆ ಶುಭ ಕೋರಿದ ಪ್ರಧಾನಿ ಮೋದಿ' ಎಂಬಲ್ಲಿಗೆ ಆಮ್ ಆದ್ಮಿ ಪಕ್ಷದ ದೆಹಲಿಯಲ್ಲಿ ಮತ್ತೊಮ್ಮೆ ದರ್ಬಾರ್ ನಡೆಸುವುದು ಖಾತ್ರಿಯಾಗಿದೆ. ಸಮೀಕ್ಷೆಗಳ ಫಲಿತಾಂಶಗಳಿಗೆ ಸೆಡ್ಡು ಹೊಡೆದು ಅಂಕಿ ಸಂಖ್ಯೆಗಳೇ ಮುಖ್ಯವಾದ ಪ್ರಜಾಪ್ರಭುತ್ವದಲ್ಲಿ ಎಎಪಿ ಹೊಸ ವಿಕ್ರಮ ಸಾಧಿಸಿದೆ
ಯಾರೂ ಊಹಿಸದ ರೀತಿಯಲ್ಲಿ ಮ್ಯಾಜಿಕ್ ನಂಬರ್ ದಾಟಿರುವ ಎಎಪಿ ಟ್ರೆಂಡಿಂಗ್ ನೋಡಿದರೆ ದೆಹಲಿಯಲ್ಲಿ ವಿರೋಧ ಪಕ್ಷವೇ ಇಲ್ಲದ್ದಂತಾದರೂ ಅಚ್ಚರಿಪಡಬೇಕಿಲ್ಲ. 65ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ.[ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಅಪ್ಡೇಟ್ಸ್]
ಕರ್ನಾಟಕದ ಆಮ್ ಆದ್ಮಿ ಪಕ್ಷದ ಘಟಕ ಬೆಂಗಳೂರಿನ ಜೈನ ಭವನದಲ್ಲಿ ಬೀಡುಬಿಟ್ಟಿದ್ದು, ದೆಹಲಿ ವಿಜಯವನ್ನು ಕೊಂಡಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯ ಮತ್ತೊಮ್ಮೆ ಎತ್ತಿ ಹಿಡಿಯಲಾಗುವುದು ಎಂದು ಸಾರಿದ್ದಾರೆ. ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರಿಗೆ ಎಲ್ಲೆಡೆಯಿಂದ ಶುಭ ಹಾರೈಕೆಗಳು ಕೇಳಿ ಬರುತ್ತಿದೆ. [ನೆಗಟಿವ್ ಪಬ್ಲಿಸಿಟಿ ಬಿಜೆಪಿ ಸೋಲಿಗೆ ಕಾರಣ: ಎಎಪಿ]

ಮರುಕಳಿಸಿದ ದೆಹಲಿ ಫಲಿತಾಂಶ
2013ರ ಫಲಿತಾಂಶ
* ಬಿಜೆಪಿ 31 ಸ್ಥಾನ (ಶೇ 33.1ರಷ್ಟು ಮತ ಪಾಲು)
* ಕಾಂಗ್ರೆಸ್ 8 ಸ್ಥಾನ ( ಶೇ24.6ರಷ್ಟು ಮತ ಪಾಲು)
* ಆಮ್ ಆದ್ಮಿ ಪಕ್ಷ 28 ಸ್ಥಾನ ( ಶೇ 29.5 ಮತ ಪಾಲು)

ಕರ್ನಾಟಕದ ಎಎಪಿ ಕಾರ್ಯಕರ್ತರಲ್ಲಿ ಸಂಭ್ರಮ
ಕರ್ನಾಟಕದ ಎಎಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದ್ದು, ಬೆಂಗಳೂರು ಸೇರಿದಂತೆ ವಿವಿಧೆಡೆ ಪಾದಯಾತ್ರೆ ಹಮ್ಮಿಕೊಂಡು ಜನತೆ ಧನ್ಯವಾದ ಅರ್ಪಿಸಲಾಗುವುದು ಎಂದು ಎಎಪಿ ವಕ್ತಾರರು ಹೇಳಿದ್ದಾರೆ.

ದೆಹಲಿಯಲ್ಲಿ ಪೊರಕೆ ಹಿಡಿದ ಕೈಗೆ ರಂಗೋ ರಂಗು
ದೆಹಲಿಯಲ್ಲಿ ಪೊರಕೆ ಹಿಡಿದ ಕೈಗಳು ಎಲ್ಲೆಡೆ ವಿಜಯೋತ್ಸವ ಆಚರಿಸುತ್ತಿರುವುದು ಕಂಡು ಬಂದಿದೆ. ನಿರೀಕ್ಷೆಗೂ ಮೀರಿದ ಗೆಲುವು ಎಎಪಿ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತಂದಿದೆ.

ಎಲ್ಲೆಡೆ ಗೆದ್ದ ನಾಯಕರಿಗೆ ಸಂಭ್ರಮದ ಸ್ವಾಗತ
ದೆಹಲಿಯಲ್ಲಿ ಎಎಪಿಯಿಂಡ ಸಿಹಿ ಹಂಚಿಕೆ ಸಂಭ್ರಮ ಮನೆ ಮಾಡಿದ್ದು, ದೆಹಲಿ ಪೊಲೀಸರು ಎಲ್ಲೆಡೆ ಬಿಗಿ ಬಂದೋ ಬಸ್ತ್ ಮಾಡಿದ್ದಾರೆ.

ವಿರೋಧ ಪಕ್ಷವೇ ಇಲ್ಲದಂಥ ವಾತಾವರಣ
ದೆಹಲಿಯಲ್ಲಿ ವಿರೋಧ ಪಕ್ಷವೇ ಇಲ್ಲದಂಥ ವಾತಾವರಣ ಕಂಡು ಬಂದಿದ್ದು, ಬಿಜೆಪಿ 7 ಸ್ಥಾನವನ್ನು ಗೆಲ್ಲದಿದ್ದರೆ ವಿಪಕ್ಷವೇ ಇಲ್ಲದ್ದಂತಾಗುತ್ತದೆ.
|
ನಾಗಪುರದಲ್ಲಿ ಸಂಭ್ರಮ
ನಾಗಪುರದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಸಂಭ್ರಮ ಹೀಗಿತ್ತು
|
ಭೋಪಾಲ್ ನಲ್ಲಿ ಎಎಪಿ ಸಂಭ್ರಮ
ಭೋಪಾಲ್ ನಲ್ಲಿ ಎಎಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮ ಆಚರಿಸಿದ್ದಾರೆ
|
ದೆಹಲಿ ಎಎಪಿ ಕಚೇರಿ ಚಿತ್ರ ಹೀಗಿದೆ
ದೆಹಲಿ ಎಎಪಿ ಕಚೇರಿ ಬಳಿ ಟೋಪಿ ತೊಟ್ಟ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಚಿತ್ರ ಹೀಗಿದೆ

ಜನತೆಗೆ ಧನ್ಯವಾದ ಅರ್ಪಿಸಿದ ಅರವಿಂದ್
ದೆಹಲಿ ಜನತೆಗೆ ಧನ್ಯವಾದ ಅರ್ಪಿಸಿದ ಅರವಿಂದ್ ಕೇಜ್ರಿವಾಲ್ ದಂಪತಿ

ಕಾತುರ ನಿರೀಕ್ಷೆ ಕ್ಷಣ ಬಂದೇ ಬಿಟ್ಟಿತು
ಫೆ.10ರಂದು ಬೆಳಗ್ಗೆ 10 ಸುಮಾರಿಗೆ ಎಎಪಿಗೆ ದಿಗ್ವಿಜಯ ಸಿಗುವ ಮುನ್ಸೂಚನೆ ಸಿಕ್ಕಿತು. ಟಿವಿ ಪರದೆಗಳು ಚುನಾವಣಾ ಆಯೋಗದ ವೆಬ್ ತಾಣದಲ್ಲಿ ಎಎಪಿ ಟ್ರೆಂಡಿಂಗ್ ಬಗ್ಗೆ ಕಾರ್ಯಕರ್ತರಿಂದ ವೀಕ್ಷಣೆ.

ಪೂರಕೆಗೆ ಬೆಲೆ ತಂದುಕೊಟ್ಟ ಎಎಪಿ
ಭ್ರಷ್ಟಾಚಾರವನ್ನು ಪೂರಕೆ ಮೂಲಕ ದೇಶದಿಂದ ಹೊರಕ್ಕೆ ಹಾಕಲಾಗುವುದು ಎಂದು ಎಎಪಿ ಘೋಷಿಸಿದ್ದಲ್ಲದೆ ಮತ್ತೊಮ್ಮೆ ಗೆಲುವು ಸಾಧಿಸಿ ಜನರ ಮುಂದೆ ನಿಂತಿದೆ. ಜನ ಸಾಮಾನ್ಯರಿಗೆ ಕೇಜ್ರಿವಾಲ್ ಹತ್ತಿರವಾಗಿದ್ದರಿಂದ ಎಲ್ಲಾ ವರ್ಗದ ಬೆಂಬಲ ಅವರಿಗೆ ದಕ್ಕಿದೆ.

ಪ್ರತಿ ಪಕ್ಷವೇ ಇಲ್ಲದಂತೆ ಮಾಡಿದ ಎಎಪಿ ಗೆಲುವು
ದೆಹಲಿಯ 70 ಕ್ಷೇತ್ರಗಳಲ್ಲಿ 67 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಎಎಪಿ ದಿಗ್ವಿಜಯ ಬಾರಿಸಿದೆ. ಬಿಜೆಪಿ 3 ಸೀಟು ಕಷ್ಟಪಟ್ಟು ಗೆದ್ದಿದೆ. ಪ್ರತಿಪಕ್ಷ ಸ್ಥಾನ ದಕ್ಕಲು ಕನಿಷ್ಠ 7 ಸ್ಥಾನವಾದರೂ ಬೇಕು. ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ












Click it and Unblock the Notifications