ದೆಹಲಿಗೆ ದಾಳಿಯಿಟ್ಟ ಮಿಡತೆಗಳು: ರಾಷ್ಟ್ರ ರಾಜಧಾನಿ ಹೈ ಅಲರ್ಟ್
ನವದೆಹಲಿ, ಜೂನ್ 27: ಕೊರೊನಾ ಸಾಂಕ್ರಾಮಿಕ ರೋಗದಿಂದಲೇ ಈಗಾಗಲೇ ಬಳಲಿ ಹೋಗಿರುವ ದೆಹಲಿ ಎನ್ಸಿಆರ್ ಜನರಿಗೆ ಮಿಡತೆ ರೂಪದಲ್ಲಿ ಹೊಸ ತೊಂದರೆಗಳು ಹುಟ್ಟಿಕೊಂಡಿವೆ. ಭಾರೀ ಮಿಡತೆಗಳು ದೇಶದ ರಾಜಧಾನಿ ದೆಹಲಿಗೆ ಎಂಟ್ರಿ ನೀಡಿದ್ದಾಗಿದೆ.
Recommended Video
ಗುರುಗ್ರಾಮ್ ಮೂಲಕ ಮರುಭೂಮಿಯ ಮಿಡತೆಗಳು ದೆಹಲಿಯನ್ನು ಪ್ರವೇಶಿಸಿದೆ. ದೆಹಲಿ ಸರ್ಕಾರವು ರಾಷ್ಟ್ರ ರಾಜಧಾನಿಯಲ್ಲಿ ಸಂಭವನೀಯ ಮಿಡತೆ ದಾಳಿಯನ್ನು ನಿಯಂತ್ರಿಸಲು ಸಲಹೆಗಳನ್ನು ನೀಡಿದೆ. ಇದರೊಂದಿಗೆ ದೆಹಲಿ ಸರ್ಕಾರವು ಮಿಡತೆಗಳನ್ನು ನಿರ್ನಾಮ ಮಾಡಲು ಇವು ಪರಿಣಾಮಕಾರಿ ಎಂದು ನಾಲ್ಕು ಕೀಟನಾಶಕಗಳ ಹೆಸರನ್ನು ಸಹ ಸೂಚಿಸಿದೆ. ಇಂತಹ ಪರಿಸ್ಥಿತಿಯಲ್ಲಿ ದೆಹಲಿ ಮತ್ತು ಹರಿಯಾಣ ಸರ್ಕಾರ ಅಲರ್ಟ್ ಘೋಷಿಸಿದೆ.
ಮಿಡತೆ ನಿಯಂತ್ರಿಸುವ ತಂಡದ ದೃಷ್ಟಿಯಿಂದ ದೆಹಲಿ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ವಿಮಾನದ ಪೈಲಟ್ಗಳಿಗೆ ಹಾರಾಟ ಮತ್ತು ಇಳಿಯುವಾಗ ವಿಶೇಷ ಕಾಳಜಿ ವಹಿಸುವಂತೆ ಸೂಚನೆ ನೀಡಿದೆ. ಗುರುಗ್ರಾಮ್-ದ್ವಾರಕಾ ಎಕ್ಸ್ಪ್ರೆಸ್ ಹೆದ್ದಾರಿ ಬಳಿ ಹೆಚ್ಚಿನ ಸಂಖ್ಯೆಯ ಮಿಡತೆಗಳನ್ನು ಸಹ ಗಮನಿಸಲಾಗಿದೆ. ವಿಮಾನಗಳ ನಡುವೆ ಪಕ್ಷಿ ಅಥವಾ ಕೀಟಗಳ ಹಿಂಡುಗಳ ಆಗಮನವು ವಿಮಾನ ಅಪಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಮಿಡತೆ ಗುಂಪುಗಳು ಬಂದಿರುವಲ್ಲಿ ವಿಮಾನ ನಿಲ್ದಾಣವೂ ಇದೆ. ದೆಹಲಿಯನ್ನು ಪ್ರವೇಶಿಸಿರುವ ಮಿಡತೆ ಈಗ ನೋಯ್ಡಾ ಮತ್ತು ಗಾಜಿಯಾಬಾದ್ ಅನ್ನು ತಲುಪಬಹುದು.

ಏತನ್ಮಧ್ಯೆ, ದೆಹಲಿಯ ಕಾರ್ಮಿಕ ಮತ್ತು ಅಭಿವೃದ್ಧಿ ಸಚಿವ ಗೋಪಾಲ್ ರೈ ಅವರು ರಾಷ್ಟ್ರ ರಾಜಧಾನಿಯಲ್ಲಿ ಮಿಡತೆ ದಾಳಿಯ ಬಗ್ಗೆ ತುರ್ತು ಸಭೆ ಕರೆದಿದ್ದಾರೆ. ಅಭಿವೃದ್ಧಿ ಕಾರ್ಯದರ್ಶಿ, ವಿಭಾಗೀಯ ಆಯುಕ್ತರು, ಕೃಷಿ ನಿರ್ದೇಶಕರು ಮತ್ತು ಜಿಲ್ಲಾಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಪಾಲ್ಗೊಂಡ ಅಧಿಕಾರಿಯೊಬ್ಬರ ಪ್ರಕಾರ, ದಕ್ಷಿಣ ದೆಹಲಿಯ ಅಸೋಲಾ ಭಟ್ಟಿ ಪ್ರದೇಶಕ್ಕೆ ಸಣ್ಣ ಮಿಡತೆ ಮಿಡತೆಗಳು ಕೂಡ ತಲುಪಿದೆ ಎಂದು ಸಚಿವರಿಗೆ ಮಾಹಿತಿ ನೀಡಲಾಯಿತು.
ದೆಹಲಿಯಲ್ಲಿ ಸಂಭವನೀಯ ಮಿಡತೆ ದಾಳಿಯನ್ನು ಎದುರಿಸಲು ಎಲ್ಲಾ ಜಿಲ್ಲಾ ನ್ಯಾಯಾಧೀಶರು ಮತ್ತು ಉಪವಿಭಾಗ ನ್ಯಾಯಾಧೀಶರಿಗೆ ವಿವರವಾದ ಸಲಹೆಯನ್ನು ನೀಡುವಂತೆ ಕೃಷಿ ಇಲಾಖೆಗೆ ಸೂಚಿಸಲಾಗಿದೆ. ಮಿಡತೆಗಳ ಹಿಂಡುಗಳನ್ನು ಹಿಮ್ಮೆಟ್ಟಿಸಲು ಡಿಜೆಗಳನ್ನು , ಡ್ರಮ್ಸ್ ಮತ್ತು ಡೋಲುಗಳನ್ನು ಬಾರಿಸಲು ಅರರಣ್ಯ ಇಲಾಖೆಯನ್ನು ಕೇಳಿದರು ಎಂದು ಅಧಿಕಾರಿ ಹೇಳಿದರು.
ಮಿಡತೆಗಳು ದಾಳಿ ಇಟ್ಟಿರುವ ಪ್ರದೇಶದಲ್ಲಿ ಜನರು ಈಗಾಗಲೇ ತಮ್ಮ ಮನೆಗಳಲ್ಲಿ ಅಡಗಿದ್ದಾರೆ. ಮಿಡತೆಗಳನ್ನು ಓಡಿಸಲು ಜನರು ಪಟಾಕಿ ಸಿಡಿಸುವುದರ ಜೊತೆಗೆ ಪಾತ್ರೆಗಳು ಮತ್ತು ಘಂಟೆಗಳನ್ನು ಬಾರಿಸುತ್ತಿದ್ದಾರೆ.
ಮತ್ತೊಂದೆಡೆ, ಮಿಡತೆಗಳ ದಾಳಿಯ ಬಗ್ಗೆ ಯಾವುದೇ ಎಚ್ಚರಿಕೆ ನೀಡದ ಕಾರಣ ಗುರುಗ್ರಾಮ್ ಜಿಲ್ಲಾಡಳಿತದ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications