ಏರ್ ಪೋರ್ಟ್ ಸಿಸಿ ಕ್ಯಾಮರಾದಿಂದ ತಗ್ಲಾಕೊಂಡ ನಕಲಿ ಏರ್ ಕ್ಯಾಪ್ಟನ್!
ನವದೆಹಲಿ, ನವೆಂಬರ್.19: ಸರ್ಕಾರಿ ಸವಲತ್ತು ಪಡೆಯಲು ಜನರು ಏನೆಲ್ಲಾ ಕೆಲಸಗಳನ್ನು ಮಾಡುತ್ತಾರೆ ಅನ್ನೋದಕ್ಕೆ ಈ ಘಟನೆಯೇ ಬೆಸ್ಟ್ ಎಕ್ಸಾಂಪಲ್. ವಿಮಾನಯಾನ ಸಂಸ್ಥೆಯಲ್ಲಿನ ರಾಜ ಮರ್ಯಾದೆ ಅನುಭವಿಸಲು ಹೋಗಿ,ಇಲ್ಲೊಬ್ಬ ಆಸಾಮಿ ಸರಿಯಾಗೇ ತಗ್ಲಾಕೊಂಡಿದ್ದಾನೆ.
ಇದು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿರುವ ಘಟನೆ. ಏರ್ ಪೋರ್ಟ್ ನಲ್ಲಿ ಏರ್ ಕ್ಯಾಪ್ಟನ್ ಸಮವಸ್ತ್ರ ಧರಿಸಿಕೊಂಡು ವ್ಯಕ್ತಿಯೊಬ್ಬ ಓಡಾಡುತ್ತಿದ್ದನು. ಈ ವ್ಯಕ್ತಿಯ ನಡುವಳಿಕೆ ಮೇಲೆ ಅನುಮಾನ ಬಂದು ವಿಚಾರಣೆಗೆ ಒಳಪಡಿಸಿದಾಗ ಅಚ್ಚರಿಯ ವಿಷಯ ಹೊರ ಬಿದ್ದಿದೆ.
ಹೌದು, ಜರ್ಮನಿ ಲಫ್ತಾನಾ ವಿಮಾನಯಾನ ಸಂಸ್ಥೆಯ ಏರ್ ಕ್ಯಾಪ್ಟನ್ ವೇಷ ಧರಿಸಿಕೊಂಡು ಓಡಾಡುತ್ತಿದ್ದ ರಾಜನ್ ಮೆಹಬೂಬಾನಿ ಎಂಬಾತನನ್ನು ನವೆಂಬರ್.18ರಂದೇ ದೆಹಲಿಯ ಸಿಐಎಸ್ಎಫ್ ಪೊಲೀಸರು ಅನುಮಾನಗೊಂಡು ಬಂಧಿಸಿದರು. ನಂತರ ಈತನ ಬಗ್ಗೆ ಲುಫ್ತಾನ್ಸಾ ಮುಖ್ಯ ಭದ್ರತಾ ಅಧಿಕಾರಿ ಆದಿತ್ಯಾ ಸಿಂಗ್ ಅವರಿಗೆ ಕರೆ ಮಾಡಲಾಯಿತು. ಆಗ ಗೊತ್ತಾಗಿದ್ದು ಮತ್ತೊಂದು ಅಚ್ಚರಿಯ ವಿಷಯ.

ಅಸಲಿ ಸಮವಸ್ತ್ರ, ನಕಲಿ ಐಡಿ ಕಾರ್ಡ್!
ಸಿಐಎಸ್ಎಫ್ ಅಧಿಕಾರಿಗಳು ಬಂಧಿತ ರಾಜನ್ ಮೆಹಬೂಬಾನಿ ಬಗ್ಗೆ ವಿಚಾರಣೆ ನಡೆಸಿದರು. ಈ ವೇಳೆ ಲುಫ್ತಾನ್ಸಾದಲ್ಲಿ ಈ ಹೆಸರಿನ ಏರ್ ಕ್ಯಾಪ್ಟನ್ ಇಲ್ಲವೇ ಇಲ್ಲ ಎಂದು ತಿಳಿದು ಬಂತು. ನಂತರ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಏರ್ ಪೋರ್ಟ್ ನಲ್ಲಿನ ಸವಲತ್ತುಗಳನ್ನು ಪಡೆಯಲು ಹೀಗೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಅಲ್ಲದೇ ಏರ್ ಕ್ಯಾಪ್ಟನ್ ವೇಷದಲ್ಲಿದ್ದ ರಾಜನ್ ನಕಲಿ ಐಡಿ ಕಾರ್ಡ್ ನ್ನು ಬ್ಯಾಂಕಾಕ್ ನಲ್ಲಿ ಪಡೆದಿದ್ದಾಗಿ ಒಪ್ಪಿಕೊಂಡಿದ್ದಾನೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications