ದೆಹಲಿಯಲ್ಲಿ ಕೊರೊನಾ ಎರಡನೇ ಅಲೆ ಇದೀಗ ತಾರಕ್ಕೇರಿದೆ: ಕೇಜ್ರಿವಾಲ್
ನವದೆಹಲಿ, ಸೆಪ್ಟೆಂಬರ್ 24: ದೆಹಲಿಯಲ್ಲಿ ಈಗಾಗಲೇ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ತಾರಕ್ಕೇರಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಈ ತಿಂಗಳ ಮೊದಲವಾರದಲ್ಲಿ ಎಲ್ಲಿ ಕೊರೊನಾ ಸೋಂಕಿತ ಪ್ರಕರಣ 4000 ಸಾವಿರದ ಗಡಿ ದಾಟಿತೋ ಅಲ್ಲಿಂದಲೇ ಕೊರೊನಾ ಎರಡನೇ ಅಲೆಯು ತಾರಕ್ಕೇರಿದೆ.
ಡಾ. ರಾಜೇಂದ್ರ ಪ್ರಸಾದ್ ಸೆಂಟ್ರಲ್ ಅಗ್ರಿಕಲ್ಚರಲ್ ಯೂನಿವರ್ಸಿಟಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಈ ಕುರಿತು ಮಾತನಾಡಿದರು. ದೆಹಲಿಯು ಈಗ ಎರಡನೇ ಹಂತದ ಕೊರೊನಾ ಪ್ರಕರಣಗಳಿಗೆ ಸಾಕ್ಷಿಯಾಗುತ್ತಿದೆ.

ಸೆಪ್ಟೆಂಬರ್ 16 ರಂದು ದೆಹಲಿಯಲ್ಲಿ 4500 ಪ್ರಕರಣಗಳು ಪತ್ತೆಯಾಗಿದ್ದವು. ಬಳಿಕ ಮುಂದಿನ 24 ಗಂಟೆಗಳಲ್ಲಿ ಅದು 3700ಕ್ಕೆ ಬಂದು ನಿಂತಿತ್ತು. ಮುಂದಿನ ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕಡಿಮೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ 16 ರಂದು 4473 ಪ್ರಕರಣಗಳು ಪತ್ತೆಯಾಗಿವೆ. ಸೆಪ್ಟೆಂಬರ್ 15 ರಂದು 4263 ಪ್ರಕರಣಗಳು 36 ಮಂದಿ ಸಾವು, 16 ರಂದು 4473 ಪ್ರಕರಣಗಳು 33 ಮಂದಿ ಸಾವು, ಸೆಪ್ಟೆಂಬರ್ 17 ರಂದು 4432 ಪ್ರಕರಣಗಳು 38 ಮಂದಿ ಸಾವು, ಸೆಪ್ಟೆಂಬರ್ 18 ರಂದು 4127 30 ಮಂದಿ ಸಾವು, ಸೆಪ್ಟೆಂಬರ್ 19 ರಂದು 4071 ಪ್ರಕರಣಗಳು 38 ಮಂದಿ ಸಾವನ್ನಪ್ಪಿದ್ದಾರೆ.












Click it and Unblock the Notifications