ತಮಿಳುನಾಡಿಗೆ ಕಲುಷಿತ ನೀರು: ಕಾಲಾವಕಾಶ ಕೋರಿದ ಕರ್ನಾಟಕ
ಬೆಂಗಳೂರು, ಆಗಸ್ಟ್ 3: ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಹರಿಸುವ ಕುರಿತಂತೆ ತಮಿಳುನಾಡು ಸಲ್ಲಿಸಿದ್ದ ಅರ್ಜಿಗೆ ಉತ್ತರ ನೀಡಲು ಕರ್ನಾಟಕ ಸರ್ಕಾರ ಒಂದುವಾರಗಳ ಕಾಲಾವಕಾಶ ಕೋರಿದೆ.
ತಮಿಳುನಾಡಿಗೆ ಮಾಲಿನ್ಯಯುಕ್ತ ಕಾವೇರಿ ನೀರು ವಿಚಾರವಾಗಿ ಶುಕ್ರವಾರ ಸುಪ್ರೀಂಕೋರ್ಟ್ ದ್ವಿಸದಸ್ಯಪೀಠದಲ್ಲಿ ವಿಚಾರಣೆ ನಡೆಯಿತು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ್ದ ವರದಿ ಆಧರಿಸಿ ನ್ಯಾ.ಎಸ್.ಎ. ಬೊಬ್ಬೆ ನೇತೃತ್ವದ ದ್ವಿಸಸ್ಯ ಪೀಠ ವಿಚಾರಣೆ ನಡೆಸಿತು.

ಈ ವರದಿಗೆ ಉತ್ತರಿಸಲು ಕರ್ನಾಟಕ ಸರ್ಕಾರದ ಪರ ವಕೀಲರು ಒಂದು ವಾರಗಳ ಕಾಲ ಕಾಲಾವಕಾಶ ಕೇಳಿದರು. ಮನವಿಗೆ ಸುಪ್ರೀಂಕೋರ್ಟ್ ಸಮ್ಮತಿ ಸೂಚಿಸಿತು. ಕಾವೇರಿ ನೀರು ಮಾಲಿನ್ಯ ಕುರಿತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸುಪ್ರೀಂಕೋರ್ಟ್ಗೆ ವರದಿ ಸಲ್ಲಿಸಿತ್ತು, ಈ ಕುರಿತು ಜುಲೈ 27ರಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ತಮಿಳುನಾಡು ಸರ್ಕಾರ ಉತ್ತರ ನೀಡಿತ್ತು.












Click it and Unblock the Notifications