ಹಸು ಕಳ್ಳಸಾಗಣೆದಾರರಿಂದ ಬಿಎಸ್ಎಫ್ ಯೋಧರ ಮೇಲೆ ಗುಂಡಿನ ದಾಳಿ
ನವದೆಹಲಿ,ಫೆಬ್ರವರಿ 22: ಪಶ್ಚಿಮ ಬಂಗಾಳದಲ್ಲಿ ಭಾರತ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಯಲ್ಲಿ ಬಿಎಸ್ಎಫ್ ಯೋಧರ ಮೇಲೆ ಗೋ ಕಳ್ಳಸಾಗಣೆದಾರರು ಗುಂಡಿನ ದಾಳಿ ನಡೆಸಿದ್ದಾರೆ.
ಭಾರತದಿಂದ ಬಾಂಗ್ಲಾದೇಶಕ್ಕೆ ದನಗಳು ಕಳ್ಳಸಾಗಣೆ ಮಾಡಲು ಎರಡೂ ಕಡೆಯವರು ಪ್ರಯತ್ನಿಸುತ್ತಿದ್ದರು.ಇವರನ್ನು ಚದುರಿಸಲು ಸೈನಿಕರು ಗ್ರೆನೇಡ್ ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ರೌಡಿಶೀಟರ್ ದೀಪು ಕಾಲಿಗೆ ಪೊಲೀಸ್ ಗುಂಡೇಟು
ಕೂಚ್ ಬೆಹಾರ್ ಜಿಲ್ಲೆಯ ಫಲಕತಾ ಸೆಕ್ಟರ್ನ ಪುತಿಯಾ ಬಾರಾಮಾಸಿಯಾ ಗಡಿ ಪೋಸ್ಟ್ಬಳಿ ಭಾನುವಾರ ಬೆಳಗಿನ ಜಾವ 5.30ರವೇಳೆಗೆ ಗುಂಡಿನ ದಾಳಿ ನಡೆದಿದೆ.
ಭಾರತ ಮೂಲದ ಕಳ್ಳಸಾಗಣೆದಾರರು ಬಿಎಸ್ಎಫ್ ಯೋಧರ ಮೇಲೆ ಗುಂಡು ಹಾರಿಸಿದರು. ತಕ್ಷಣ ಬಿಎಸ್ಎಫ್ ಯೋಧರು ಪ್ರತಿದಾಳಿ ನಡೆಸಿದರು. ಇದರಿಂದ ಹೆದರಿದ ದುಷ್ಕರ್ಮಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಬಾಂಗ್ಲಾದೇಶದಿಂದ 20-25 ದುಷ್ಕರ್ಮಿಗಳು ಮತ್ತು ಭಾರತದ ಕಡೆಯಿಂದ 18-20 ಕಳ್ಳಸಾಗಣೆದಾರರ ಅನುಮಾನಾಸ್ಪದ ಚಲನೆಯನ್ನು ಬಿಎಸ್ಎಫ್ ಯೋಧರು ಗಮನಿಸಿದ್ದರು.