ಬಾಂಬ್ ಬೆದರಿಕೆ, ನಾಗ್ಪುರದಲ್ಲಿ ಗೋಏರ್ ವಿಮಾನ ಭೂಸ್ಪರ್ಶ
ನವದೆಹಲಿ, ಜನವರಿ, 23: ಶಂಕಿತ ಆರು ಭಯೋತ್ಪಾದಕರ ಬಂಧನ ಸುದ್ದಿ ಮಾಸುವ ಮುನ್ನವೇ ಮುಂಬೈ ಏರ್ ಪೋರ್ಟ್ ಮ್ಯಾನೇಜರ್ ಗೆ ಶನಿವಾರ ಬಂದ ಹುಸಿ ಬಾಂಬ್ ಬೆದರಿಕೆ ಕರೆ ಎಲ್ಲರಲ್ಲೂ ಆತಂಕ ಸೃಷ್ಟಿಸಿದೆ.
ಹುಸಿ ಬಾಂಬ್ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಭುವನೇಶ್ವರ್ ನಿಂದ ಮುಂಬೈಗೆ ಹೋಗುತ್ತಿದ್ದ ಗೋಏರ್ ವಿಮಾನ ಜಿ8 243 ನಾಗ್ಪುರ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿದ್ದು, ಒಂದು ಗಂಟೆಕಾಲ ನಿಲ್ದಾಣದಲ್ಲಿಯೇ ಇರಬೇಕಾಯಿತು.[ಜಾಗತಿಕ ಟಾಪ್ 200ರೊಳಗೆ ನಮ್ಮ ಐಐಎಸ್ಸಿಗೆ ಸ್ಥಾನ!]

ಗೋಏರ್ ವಿಮಾನ ಜಿ8 243 ವಿಮಾನ ನಿಂತ ಬಳಿಕ ಬಾಂಬ್ ನಿಷ್ಕ್ರೀಯ ದಳ ವಿಮಾನದಲ್ಲಿದ್ದ 150 ಪ್ರಯಾಣಿಕರು ಸೇರಿದಂತೆ ಎಲ್ಲರನ್ನು ಪರಿಶೀಲನೆ ನಡೆಸಿದ್ದು, ಯಾವುದೇ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿಸಿದೆ.
ಏನಿದು ಘಟನೆ?
ಮುಂಬೈ ಮೂಲದ ಗೋಏರ್ ವಿಮಾನ ಜಿ8 243 ಭುವನೇಶ್ವರ್ ನಿಂದ ಮುಂಬೈಗೆ 8.20ಕ್ಕೆ ಹೊರಟಿದೆ. ಅಷ್ಟರಲ್ಲಿ ಏರ್ ಪೋರ್ಟ್ ಮ್ಯಾನೇಜರ್ ಗೆ ಅಪರಿಚಿತನಿಂದ ಬಾಂಬ್ ಬೆದರಿಕೆ ಕರೆ ಬಂದಿದೆ. ಆದ ಪೈಲಟ್ ಗೆ ತಕ್ಷಣ ಭೂಸ್ಪರ್ಶ ಮಾಡುವಂತೆ ಮ್ಯಾನೇಜರ್ ತಿಳಿಸಿದರು. ಬಳಿಕ 9.20 ರವರೆಗೆ ಪರಿಶೀಲನೆ ನಡೆಯಿತು.[ಬೆಂಗಳೂರಿನಲ್ಲಿ ಭೀತಿ ಹುಟ್ಟು ಹಾಕಿದ್ದು ಅಂಜುಮನ್ ಸಂಸ್ಥೆ]
ಗೋ ಏರ್ ವಿಮಾನದಲ್ಲಿ ಸುಮಾರು 150 ಮಂದಿ ಪ್ರಯಾಣಿಸುತ್ತಿದ್ದು, ಯಾರಿಗೂ ಯಾವುದೇ ತೊಂದರೆ ಆಗಿಲ್ಲ. ಭಯಪಡುವ ಅಗತ್ಯ ಇಲ್ಲ ಎಂದು ತನಿಖಾದಳ ತಿಳಿಸಿದೆ.
#FirstVisuals The Bhubaneswar-Mumbai GoAir flight which made an emergency landing in Nagpur after a bomb scare pic.twitter.com/Sf2jTMYGAV
— ANI (@ANI_news) January 23, 2016












Click it and Unblock the Notifications