ಮೋದಿಯನ್ನು 'ಹಕ್ಕಿ ಪಿಕ್ಕೆ' ಎಂದ ರಮ್ಯಾಗೆ ಮಹಾಮಂಗಳಾರತಿ!
ನವದೆಹಲಿ, ನವೆಂಬರ್ 02: 'ನಿಮ್ಮಂಥ ಅಪ್ರಬುದ್ಧ ವ್ಯಕ್ತಿಯಿಂದ ಬೇರೇನನ್ನೂ ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ!' ಇದು ಪ್ರಧಾನಿ ಮೋದಿ ಬಗ್ಗೆ ನಟಿ ರಮ್ಯಾ ಮಾಡಿದ ಟ್ವೀಟ್ ಗೆ ವ್ಯಕ್ತಿಯೊಬ್ಬರು ನೀಡಿದ ಖಡಕ್ ಪ್ರತಿಕ್ರಿಯೆ.
ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ 182 ಮೀಟರ್ ನ ವಿಶ್ವದ ಅತೀ ಎತ್ತರದ ಪ್ರತಿಮೆಯ ಬಳಿ ನಿಂತಿದ್ದ ಮೋದಿಯವರನ್ನು ಕಂಡು, 'ಇದೇನು ಹಕ್ಕಿಯ ಪಿಕ್ಕೆಯಾ?(Is that bird dropping?)' ಎಂದು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ರಮ್ಯಾ ಪ್ರಶ್ನಿಸಿದ್ದರು.
ಪ್ರಧಾನಿ ಮೋದಿಯನ್ನು ಹಕ್ಕಿ ಪಿಕ್ಕೆಗೆ ಹೋಲಿಸಿದರಾ ರಮ್ಯಾ?
ಅವರ ಈ ಟ್ವೀಟ್ ಗೆ ಸಾಕಷ್ಟು ಜನ ಮಹಾಮಂಗಳಾರತಿ ಮಾಡಿ, ಛೀಮಾರಿ ಹಾಕಿದ್ದಾರೆ. ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಪ್ರಧಾನಿ ಮೋದಿ ಅವರನ್ನು ಸಮಯ ಸಿಕ್ಕಾಗಲೆಲ್ಲ ಅಣಕಿಸುವ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಮತ್ತೊಮ್ಮೆ ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ.
|
ಇನ್ನೇನು ನಿರೀಕ್ಷಿಸುವುದಕ್ಕೆ ಸಾಧ್ಯ?
ನಿಮ್ಮಂಥ ಅಪ್ರಬುದ್ಧ ವ್ಯಕ್ತಿಗಳಿಂದ ಇನ್ನೇನನ್ನು ನಿರೀಕ್ಷಿಸುವುದಕ್ಕೆ ಸಾಧ್ಯ? ಎಂದು ಹಿರೆನ್ ಪಟೇಲ್ ಎಂಬುವವರು ಟ್ವೀಟ್ ಮಾಡಿದ್ದಾರೆ. ಇದೇ ಹಕ್ಕಿ ಪಿಕ್ಕೆಯೇ ನಿಮಗೆ 2019 ರ ಚುನಾವಣೆಯಲ್ಲಿ ಪಾಠ ಕಲಿಸುತ್ತದೆ ಎಂದು ನರೇಶ್ ಕಾವುರಿ ಎಂಬುವವರು ಟ್ವೀಟ್ ಮಾಡಿದ್ದಾರೆ.
Array |
ಈ ಹಕ್ಕಿಪಿಕ್ಕೆಯ ಸಾಮರ್ಥ್ಯ ಗೊತ್ತೇ?
'ಕುಟುಂಬ ರಾಜಕಾರಣದ ಹಗಲು ಗನಸನ್ನು ಇದೇ ಹಕ್ಕಿಪಿಕ್ಕೆಯೇ ಅಲ್ಲಾಡಿಸಿದೆ ಎಂದರೆ ಅದರ ಸಾಮರ್ಥ್ಯವೇನು ಎಂಬುದನ್ನು ಊಹಿಸಿಕೊಳ್ಳಿ! ನಿಮ್ಮನ್ನು ನಾಶಗೊಳಿಸುವುದಕ್ಕೆ ಒಂದು ಹಕ್ಕಿಪಿಕ್ಕೆ ಸಾಕಾಯ್ತಲ್ಲ!' ಎಂದು ಅಣಕಿಸಿದ್ದಾರೆ ಜಾವೇದ್ ಇಕ್ಬಾಲ್ ಶಾ
ಮಂಡ್ಯ ಉಪ ಚುನಾವಣೆ : ಕಾಂಗ್ರೆಸ್ಗೆ ಬಿಸಿತುಪ್ಪವಾದ ರಮ್ಯಾ ಅಭಿಮಾನಿಗಳು!
|
ಹಕ್ಕಿಪಿಕ್ಕೆಯಾಗುವುದೇ ಉತ್ತಮ!
ನೆಹರೂ ಕುಟುಂಬದ ಬೂಟು ನೆಕ್ಕುವುದಕ್ಕಿಂತ ಸರ್ದಾರ್ ಪಟೇಲರ ಕಾಲಿನ ಬಳಿ ಹಕ್ಕಿಪಿಕ್ಕೆಯಾಗುವುದೇ ನಮಗೆ ಉತ್ತಮ ಎನ್ನಿಸುತ್ತದೆ ಎಂದಿದ್ದಾರೆ ಗಿರೀಶ್ ಭಾರದ್ವಜ.
|
ಗಾಂಚಾಲಿಗೆ ಕಡಿಮೆ ಇಲ್ಲ!
ಒಂದು ಕುಟುಂಬದ ಗುಲಾಮರಾದರೆ ಹೀಗೆಯೇ ಆಗುತ್ತದೆ. ನೀವು ಹೇಳಿದ ಹಕ್ಕಿ ಪಿಕ್ಕೆಯೇ ಈ ದೇಶಕ್ಕೆ ಒಂದು ಘನತೆಯನ್ನು ತಂದುಕೊಟ್ಟಿದೆ, ನಿಮ್ಮ ಚಾಚಾ ಅಲ್ಲ! ನಾಲ್ಕು ಅಕ್ಷರ ಸ್ಕ್ರಿಫ್ಟ್ ಇಲ್ಲದೆ ಮಾತಾಡುವುದಕ್ಕೂ ಬರೆದಿದ್ದರೂ ಗಾಂಚಾಲಿಗೆ ಕಡಿಮೆ ಇಲ್ಲ' ಎಂದಿದ್ದಾರೆ ಪ್ರಶಾಂತ್ ಪದ್ಮನಾಭ.
'ಚೋರ್ ಪಿಎಂ' ಎಂದು ಟೀಕಿಸಿದ ಗೌರಮ್ಮನ ವಿರುದ್ಧ ಉತ್ತರ ಪ್ರದೇಶದಲ್ಲಿ ಕೇಸ್
|
ಹಕ್ಕಿಪಿಕ್ಕೆಯನ್ನು ತಬ್ಬಿಕೊಂಡಿದ್ದ ರಾಹುಲ್!
ದಿವ್ಯ ಸ್ಪಂದನ... ನಿಮ್ಮ ರಾಜ ಇದೇ ಹಕ್ಕಿಪಿಕ್ಕೆಯನ್ನೇ ಒಂದು ದಿನ ತಬ್ಬಿಕೊಂಡಿದ್ದರು! ಎಂದು ಲೇವಡಿ ಮಾಡಿ ಮೀಟೂ ಬ್ಯಾಡ್ ಹಿಂದು ಎಂಬ ಖಾತೆಯಿಡ ಪೋಸ್ಟ್ ಮಾಡಲಾಗಿದೆ.