ಮೈಸೂರು ವಿವಿ ಪ್ರಾಧ್ಯಾಪಕನ ಅತ್ಯಾಚಾರ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್
ಮೈಸೂರು, ಆಗಸ್ಟ್ 06: ಮೈಸೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕನಿಂದಲೇ ಪಿಎಚ್ಡಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದೆ.
ಪ್ರಾಧ್ಯಾಪಕನಿಂದ ಅತ್ಯಾಚಾರವಾಗಿದೆ ಎಂದು ದೂರು ನೀಡಿದ್ದ ಪಿಎಚ್ಡಿ ವಿದ್ಯಾರ್ಥಿನಿ ಈಗ ಉಲ್ಟಾ ಹೊಡೆದಿದ್ದಾಳೆ. ನನ್ನ ಮೇಲೆ ಅತ್ಯಾಚಾರ ಆಗಿದೆ ಎಂದು ಗುರುವಾರ ಸಂತ್ರಸ್ತೆ ಪೊಲೀಸ್ ದೂರು ಕೊಟ್ಟಿದ್ದರು.
ಅತ್ಯಾಚಾರ ಸಂತ್ರಸ್ತೆ ದೂರಿನ ಪ್ರತಿಗೆ ಸಹಿ ಹಾಗೂ ಹೆಬ್ಬೆಟ್ಟು ಹಾಕಿದ್ದಳು. ಆದರೆ, ಪೊಲೀಸರ ವಿಚಾರಣೆ ವೇಳೆ ಉಲ್ಟಾ ಹೊಡೆದಿದ್ದು, "ನನ್ನ ಮೇಲೆ ಅತ್ಯಾಚಾರ ಆಗಿಲ್ಲ, ಅಂತಹ ಯಾವ ಘಟನೆಯೂ ನಡೆದಿಲ್ಲ," ಎಂದು ಹೇಳಿದ್ದಾಳೆ.
"ಪ್ರೊ.ರಾಮಚಂದ್ರ ನನ್ನ ಪಿಎಚ್ಡಿ ಮಾರ್ಗದರ್ಶಕರಾಗಿದ್ದು, ಸಂಶೋಧನೆ ಬಗ್ಗೆ ನಾವಿಬ್ಬರೂ ಮಾತನಾಡುತ್ತಿದ್ದೆವು. ಆಗ ಮನೆಗೆ ಬಂದ ರಾಮಚಂದ್ರ ಪತ್ನಿ ಲೋಲಾಕ್ಷಿ ರಂಪ ಮಾಡಿದರು. ನನ್ನನ್ನು ಹೆದರಿಸಿ, ಬೆದರಿಸಿ ಬಲವಂತವಾಗಿ ದೂರು ಬರೆಸಿಕೊಂಡರು,'' ಎಂದು ಲೋಲಾಕ್ಷಿ ವಿರುದ್ಧವೇ ಪಿಎಚ್ಡಿ ವಿದ್ಯಾರ್ಥಿನಿ ದೂರು ನೀಡಿದ್ದಾಳೆ. ಈ ಬಗ್ಗೆ ಮೈಸೂರಿನ ಜಯಲಕ್ಷ್ಮಿಪುರಂ ಠಾಣೆ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡಿದ್ದಾರೆ.
ಏನಿದು
ಘಟನೆ?
ಮೈಸೂರು
ವಿಶ್ವವಿದ್ಯಾನಿಲಯದಲ್ಲಿ
ಮತ್ತೊಂದು
ಲೈಂಗಿಕ
ಕಿರುಕುಳ
ಬಯಲಾಗಿದ್ದು,
ಪ್ರಾಧ್ಯಾಪಕನಿಂದಲೇ
ಸಂಶೋಧನಾ
ವಿದ್ಯಾರ್ಥಿನಿ
ಮೇಲೆ
ಅತ್ಯಾಚಾರ
ಆರೋಪ
ಕೇಳಿಬಂದಿದೆ.
ಪತ್ನಿ
ಎದುರು
ಪ್ರಾಧ್ಯಾಪಕ
ರೆಡ್
ಹ್ಯಾಂಡಾಗಿ
ಸಿಕ್ಕಿಬಿದ್ದಿದ್ದರು
ಎನ್ನಲಾಗಿತ್ತು.
ಮೈಸೂರು ವಿವಿ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೋ. ರಾಮಚಂದ್ರ ವಿರುದ್ಧ ಆರೋಪ ಕೇಳಿಬಂದಿದ್ದು, ಅತ್ಯಾಚಾರ ಸಂತ್ರಸ್ತೆಯಿಂದ ಗುರುವಾರ ಮೈಸೂರಿನ ಜಯಲಕ್ಷ್ಮಿ ಪುರಂ ಠಾಣೆಗೆ ದೂರು ನೀಡಿದ್ದಳು.
ಸಂತ್ರಸ್ತೆ ಪ್ರೋ. ರಾಮಚಂದ್ರ ಬಳಿ ಪಿಎಚ್ಡಿ ಮಾರ್ಗದರ್ಶನ ಪಡೆಯುತ್ತಿದ್ದರು. ವಿದ್ಯಾರ್ಥಿನಿಯನ್ನು ಮನೆಗೆ ರಾಮಚಂದ್ರ ಕರೆಸಿಕೊಂಡಿದ್ದರು ಎನ್ನಲಾಗಿದೆ.
ಈ ವೇಳೆ ಕೂಗಾಟ, ಚೀರಾಟ ನಡೆಸಿದ್ದ ವಿದ್ಯಾರ್ಥಿನಿಯು, ಇದೇ ಸಂದರ್ಭದಲ್ಲಿ ಪ್ರಾಧ್ಯಾಪಕ ರಾಮಚಂದ್ರ ಪತ್ನಿ ಮನೆಗೆ ಬಂದಿದ್ದಾರೆ. ಪ್ರೋ. ರಾಮಚಂದ್ರ ಪತ್ನಿ ಲೋಲಾಕ್ಷಿ ಕೂಡ ಮೈಸೂರು ವಿವಿಯಲ್ಲಿ ಪ್ರಾಧ್ಯಾಪಕಿಯಾಗಿದ್ದಾರೆ ಎನ್ನಲಾಗಿದೆ.
ಪತ್ನಿ ಲೋಲಾಕ್ಷಿಯು ಸಂತ್ರಸ್ತೆ ಯುವತಿಯನ್ನು ಹಾಗೂ ಪತಿಯನ್ನು ಪೊಲೀಸ್ ಠಾಣೆಗೆ ಕರೆತಂದಿದ್ದರು. ನಂತರ ಆರೋಪಿ ಪ್ರೋ. ರಾಮಚಂದ್ರರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.
"ನನ್ನ ಪತಿ ಹಲವು ವಿದ್ಯಾರ್ಥಿನಿಯರನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ," ಎಂದು ರಾಮಚಂದ್ರರ ಪತ್ನಿ ಹಾಗೂ ಮೈಸೂರು ವಿವಿ ಪ್ರಾಧ್ಯಾಪಕಿಯೂ ಆಗಿರುವ ಲೋಲಾಕ್ಷಿ ಆರೋಪಿಸಿದ್ದಾರೆ.
"ನಾನು ಗುರುವಾರ ಕಾಲೇಜಿಗೆ ಹೋಗಿದ್ದೆ, ಸ್ಟಡಿ ಮೆಟಿರಿಯಲ್ ತೆಗೆದುಕೊಳ್ಳುವ ಸಲುವಾಗಿ ಮನೆಗೆ ಬಂದೆ. ಆಗ ಮನೆಯಲ್ಲಿ ಕೂಗಾಟ ಕೇಳಿಸುತ್ತಿತ್ತು. ಬಾಗಿಲು ತೆಗೆಸಿದಾಗ ಸಂತ್ರಸ್ತೆಯು ನನ್ನ ಕಾಲು ಹಿಡಿದುಕೊಂಡಳು. ನನ್ನ ಮೇಲೆ ಅತ್ಯಾಚಾರವಾಗಿದೆ ಅಂತಾ ಹೇಳಿಕೊಂಡಳು. ಕೂಡಲೇ ಇಬ್ಬರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದೇನೆ,'' ಎಂದು ಲೋಲಾಕ್ಷಿ ಹೇಳಿದ್ದಾರೆ.
"ನನ್ನ ಗಂಡ ಡಿಪಾರ್ಟ್ಮೆಂಟ್ನಲ್ಲೇ ವಿದ್ಯಾರ್ಥಿನಿಯರ ಜೊತೆ ಸಂಬಂಧ ಇಟ್ಟುಕೊಂಡಿದ್ದ. ಅವರಿಂದ ಪಿಎಚ್ಡಿ ಮಾರ್ಗದರ್ಶನ ಪಡೆಯುವ ಕೆಲ ಪುರುಷ ವಿದ್ಯಾರ್ಥಿಗಳು ನನ್ನ ಗಂಡನಿಗೆ ಯುವತಿಯರನ್ನು ಪೂರೈಕೆ ಮಾಡುತ್ತಿದ್ದರು. ಇದೆಲ್ಲದರ ಬಗ್ಗೆ ಮೊದಲಿನಿಂದಲೂ ನನಗೆ ಅನುಮಾನವಿತ್ತು. ಇವತ್ತು ಅದು ಸಾಬೀತಾಗಿದೆ,'' ಎಂದು ತಿಳಿಸಿದ್ದಾರೆ.
"ಬೇರೆ ಯಾವ ಯುವತಿಯರ ಮೇಲೂ ಇಂತಹ ದಾಳಿ ನಡೆಯಬಾರದು. ಹೀಗಾಗಿ ನಾನೇ ಮುಂದೆ ನಿಂತು ದೂರು ದಾಖಲಿಸಿದ್ದೇನೆ. ಮೈಸೂರು ವಿಶ್ವವಿದ್ಯಾಲಯ ಕುಲಪತಿ, ಕುಲಸಚಿವರ ಗಮನಕ್ಕೂ ಈ ವಿಚಾರ ತಂದಿದ್ದೇನೆ,'' ಎಂದರು.
"ಯುಗಾದಿ ಹಬ್ಬದಂದು ಮನೆಯಲ್ಲಿ ದೊಡ್ಡ ಗಲಾಟೆಯಾಗಿತ್ತು. ನನ್ನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಈ ಬಗ್ಗೆ ಹೊರಗಡೆ ಇವರ ಬಗ್ಗೆ ವಿಚಾರಿಸಿದಾಗ, ಬೇರೆ ಬೇರೆ ಯುವತಿಯರ ಜೊತೆ ಸಂಬಂಧ ಇರುವುದು ಗೊತ್ತಾಗಿದೆ. ನಾನು ಅವರನ್ನು ಗಮನಿಸುತ್ತಿದ್ದೆ. ಲಾಕ್ಡೌನ್ ವೇಳೆ ಮನೆಯಲ್ಲಿದ್ದರು. ನಂತರ ಕೆಲವು ದಿನ ಲಾಡ್ಜ್ನಲ್ಲಿ ಉಳಿದುಕೊಳ್ಳುತ್ತಿದ್ದರು,'' ಎಂದು ಪ್ರೋ. ರಾಮಚಂದ್ರ ಪತ್ನಿ ಲೋಲಾಕ್ಷಿ ಆರೋಪಿಸಿದ್ದಾರೆ.