ಈ ಬಾರಿಯ ದಸರಾ ಉದ್ಘಾಟಿಸಲಿದ್ದಾರಾ ಡಾ.ಸಿ.ಎನ್ ಮಂಜುನಾಥ್?
ಬೆಂಗಳೂರು,
ಸೆಪ್ಟೆಂಬರ್
25:
ನಾಡಹಬ್ಬ
ಮೈಸೂರು
ದಸರಾ
ಉದ್ಘಾಟನೆಗೆ
ರಾಜ್ಯ
ಸರ್ಕಾರ
ಈ
ಬಾರಿ
ಕೊರೊನಾ
ವಾರಿಯರ್ಸ್
ಗಳನ್ನು
ಆಯ್ಕೆ
ಮಾಡಲು
ತೀರ್ಮಾನಿಸಿದ್ದು,
ಜಯದೇವ
ಹೃದ್ರೋಗ
ಸಂಸ್ಥೆಯ
ಡಾ.ಸಿ.ಎನ್
ಮಂಜುನಾಥ್
ಅವರನ್ನು
ಆಹ್ವಾನಿಸಲಾಗಿದೆ
ಎಂದು
ತಿಳಿದು
ಬಂದಿದೆ.
ಇತ್ತೀಚೆಗೆ
ಮುಖ್ಯಮಂತ್ರಿ
ಯಡಿಯೂರಪ್ಪ
ಅಧ್ಯಕ್ಷತೆಯಲ್ಲಿ
ನಡೆದ
ದಸರಾ
ಉನ್ನತ
ಮಟ್ಟದ
ಸಭೆಯಲ್ಲಿ
ಐವರು
ಕೊರೊನಾ
ವಾರಿಯರ್ಸ್
ಗಳನ್ನು
ಕರೆಯಲು
ತೀರ್ಮಾನಿಸಲಾಗಿದೆ
ಎನ್ನಲಾಗಿದ್ದು,
ವೈದ್ಯಕೀಯ
ಕ್ಷೇತ್ರದಿಂದ
ಡಾ.
ಸಿ.ಎನ್
ಮಂಜುನಾಥ್
ಅವರನ್ನು
ಆಹ್ವಾನಿಸಲು
ನಿರ್ಧರಿಸಲಾಗಿದೆ
ಎನ್ನಲಾಗಿದೆ.
ಮೈಸೂರು ದಸರಾ; ಉತ್ಸವದ ಸಿದ್ಧತೆಗೆ ಉಪಸಮಿತಿಗಳ ರಚನೆ
ಉಳಿದಂತೆ ನರ್ಸ್, ಆಶಾ ಕಾರ್ಯಕರ್ತೆ, ಪೊಲೀಸ್ ಹಾಗೂ ಪೌರ ಕಾರ್ಮಿಕರೊಬ್ಬರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಜಯದೇವ ಹೃದ್ರೋಗ ತಜ್ಞ ಡಾ.ಸಿ.ಎನ್ ಮಂಜುನಾಥ್
ಲಕ್ಷಾಂತರ ಬಡ ಹೃದ್ರೋಗಿಗಳ ಜೀವ ಹಾಗೂ ಸಂಸಾರಗಳನ್ನು ಉಳಿಸಿ ಬದುಕು ಕೊಟ್ಟು ಸಾವಿರಾರು ಜನಕ್ಕೆ ಉದ್ಯೋಗ ಕೊಟ್ಟು, ಜೀವನ ರೂಪಿಸಿದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕರಾದ ಡಾ.ಸಿ.ಎನ್ ಮಂಜುನಾಥ್ ಅವರಿಂದ ಈ ಬಾರಿಯ ದಸರಾವನ್ನು ಉದ್ಘಾಟಿಸಲು ಸರ್ಕಾರ ತೀರ್ಮಾನಿಸಿದ್ದು, ಆದರೆ ಅಧಿಕೃತ ಘೋಷಣೆಯನ್ನು ಮಾಡಿಲ್ಲ.
ಸರ್ಕಾರಿ ಆಸ್ಪತ್ರೆಯನ್ನು ಹೈಟೆಕ್ ಆಸ್ಪತ್ರೆಯನ್ನಾಗಿ ಮಾಡಿದ್ದಾರೆ
ಸರ್ಕಾರಿ ಆಸ್ಪತ್ರೆಯನ್ನು ಹೈಟೆಕ್ ಆಸ್ಪತ್ರೆಯನ್ನಾಗಿ ಮಾಡಿ ಬಡ ಜನರಿಗೆ ಚಿಕಿತ್ಸೆ ನೀಡುವ ಮೂಲಕ ಜಯದೇವ ಹೃದ್ರೋಗ ಆಸ್ಪತ್ರೆಗೆ ವಿಶ್ವಮನ್ನಣೆ ಗಳಿಸಿದ ಕೀರ್ತಿ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಸಂದಿದೆ. ಲಕ್ಷಾಂತರ ರೋಗಿಗಳು ಇವರಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಇಂದು ಎಂದಿನಂತೆ ಬದುಕು ಸಾಗಿಸುತ್ತಿದ್ದಾರೆ. ಅವರ ಸೇವಾ ಕೈಂಕರ್ಯ ನಾಡಿಗೆ ಇನ್ನಷ್ಟು, ಮತ್ತಷ್ಟು ದೊರೆಯಲಿ ಎಂಬುದು ಸರ್ಕಾರದ ಮತ್ತು ನಾಡಿನ ಜನರ ಆಶಯವಾಗಿದೆ.
ಅ.16ರಂದು ನಡೆಯಲಿರುವ ದಸರಾ ಉದ್ಘಾಟನೆ
ಈ ನಿಟ್ಟಿನಲ್ಲಿ ಅ.16ರಂದು ನಡೆಯಲಿರುವ ದಸರಾ ಉದ್ಘಾಟನೆ ಕಾರ್ಯ ಅವರ ಅಮೃತ ಹಸ್ತದಿಂದ ನೆರವೇರಲಿರುವುದು ಔಚಿತ್ಯ ಮತ್ತು ಅರ್ಥಪೂರ್ಣವಾಗಿದೆ. ಡಾ.ಸಿ.ಎನ್ ಮಂಜುನಾಥ್ ಅವರು ಹೃದ್ರೋಗ ತಜ್ಞರಷ್ಟೇ ಅಲ್ಲ, ಸಾಮಾಜಿಕ ಕಳಕಳಿಯ, ಹೃದಯವಂತ, ಮಾನವೀಯತೆಯ ಶ್ರೀಮಂತ. ಕೊರೊನಾ ಸಂಕಷ್ಟದ ಕಾಲದಲ್ಲಿ ಟಾಸ್ಕ್ ಫೋರ್ಸ್ ನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿ ಜನಮನ್ನಣೆ ಗಳಿಸಿದವರು.
ಕೊರೊನಾ ವಾರಿಯರ್ಸ್ ಅವರಿಂದ ದಸರಾ ಉದ್ಘಾಟನೆ
ಈ ಬಾರಿ ಕೊರೊನಾ ವಾರಿಯರ್ಸ್ ಅವರಿಂದ ದಸರಾ ಉದ್ಘಾಟನೆ ಮಾಡಿಸಬೇಕೆಂಬ ಮೈಸೂರು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ನಿರ್ಧರಿಸಿತು. ಆಗ ಕೊರೋನಾ ವಾರಿಯರ್ಸ್ ಆಗಿ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದವರಲ್ಲಿ ಮೊದಲಿಗರಾಗಿ ಕಂಡು ಬಂದವರು ಡಾ.ಸಿ.ಎನ್.ಮಂಜುನಾಥ್. ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸಚಿವ ಸಂಪುಟದ ಬಹುತೇಕ ಸದಸ್ಯರು ದಸರಾ ಉದ್ಘಾಟನೆಗೆ ಮಂಜುನಾಥ್ ಅವರ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.