ವಿಘ್ನಗಳ ನಡುವೆ ನಂಜನಗೂಡಿನ ರಥೋತ್ಸವ ಸಂಪನ್ನ
ನಂಜನಗೂಡು, ಏ.1: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಐತಿಹಾಸಿಕ ನಂಜನಗೂಡಿನಲ್ಲಿ ಸೋಮವಾರ ಮೀನ ಲಗ್ನದಲ್ಲಿ ಪಂಚರಥೋತ್ಸವಕ್ಕೆ ಚಾಲನೆ ಸಿಕ್ಕಿತು. ಅದರೆ, ಆತಂಕ, ವಿಘ್ನಗಳ ನಡುವೆ ಸಾಗಿದ ಭಾರಿ ಗಾತ್ರದ ರಥಗಳನ್ನು ಎಳೆದ ಭಕ್ತರು ಪುನೀತರಾದರು. ಕಳೆದ ವರ್ಷದಂತೆ ಈ ವರ್ಷ ಕೂಡಾ ರಥದ ಚಕ್ರ ಮಾರ್ಗಮಧ್ಯೆ ಸಿಲುಕಿಕೊಂಡು ಆತಂಕ ಮೂಡಿಸಿತ್ತು. ಆದರೆ, ನಂಜುಂದನ ಕೃಪೆಯಿಂದ ಎಲ್ಲವೂ ಸಾಂಗವಾಗಿ ನೆರವೇರಿತು.
ಬೆಳಗ್ಗೆ 6.30 ರಿಂದ 6.40 ಮಧ್ಯೆ ಶುಭ ಲಗ್ನದಲ್ಲಿ ಪ್ರಧಾನ ಅರ್ಚಕ ಜೆ ನಾಗಚಂದ್ರ ದೀಕ್ಷಿತ್ ಅವರು ಪೂಜಾ ವಿಧಿ ವಿಧಾನವನ್ನು ಪೂರೈಸಿದ ನಂತರ ಮೊದಲಿಗೆ ಗಣಪತಿ, ಶ್ರೀಕಂಠೇಶ್ವರ (ಗೌತಮ ರಥ), ಚಂಡಿಕೇಶ್ವರ, ಸುಬ್ರಹ್ಮಣ್ಯ ಹಾಗೂ ಪಾರ್ವತಮ್ಮನ ರಥ ಹೀಗೆ ಪಂಚದೇವರ ರಥಗಳನ್ನು ರಾಜಬೀದಿಗೆ ಭಕ್ತಾದಿಗಳು ಎಳೆದು ತಂದರು. ಭಕ್ತ ಸಮೂಹ ತಾವು ತಂದಿದ್ದ ಕಾಣಿಕೆ, ಹರಕೆಗಳನ್ನು ತೀರಿಸಿಕೊಂಡರು.
ಬೆಂಗಳೂರಿನಂತೆ ಮೈಸೂರಿನಲ್ಲೂ ಮಂಗಳವಾರ ರಾತ್ರಿ ಮಳೆ ಬಿದ್ದ ಕಾರಣ ಬಿಸಿಲ ಬೇಗೆಯಲ್ಲಿ ಬೆಂದಿದ್ದ ಕಪಿಲ ನದಿ ತೀರದನಂಜನಗೂಡು ಬುಧವಾರ ಕೊಂಚ ತಂಪಾಗಿತ್ತು. [ನಂಜನಗೂಡು ಹಲ್ಲುಪುಡಿಗೆ 100!]

ಬೃಹತ್ ರಥ: ಸುಮಾರು 90 ಅಡಿ ಎತ್ತರ ಹಾಗೂ 120 ಟನ್ ತೂಕದ ಶ್ರೀಕಂಠೇಶ್ವರ ರಥ ಮಂಟಪ ವೃತ್ತದ ಬಳಿ ಬರುವಾಗ ಅದಕ್ಕೆ ಕಟ್ಟಿದ್ದ ಹಗ್ಗ ಕಿತ್ತು ಬಂತು. ಪ್ರತಿ ಬಾರಿಯಂತೆ ಈ ಬಾರಿ ವಿಶೇಷವಾಗಿ ತಮಿಳುನಾಡಿನಿಂದಲೇ ಭಾರೀ ಹಗ್ಗವನ್ನು ತಯಾರಿಸಿ ತಂದು ರಥಕ್ಕೆ ಕಟ್ಟಲಾಗಿತ್ತು. ಆದರೂ ಸುಮಾರು 25 ರಿಂದ 30 ಸಾವಿರ ಜನ ಅದನ್ನು ಹಿಡಿದು ಎಳೆಯುವಾಗ ರಥಕ್ಕೆ ಅಳವಡಿಸಿರುವ ಕೊಂಡಿಯೇ ಕಳಚಿಕೊಂಡಿತು. [ನಂಜನಗೂಡಿನ ಕಲಾವಿದನ ಬದುಕು ಬವಣೆ]
ಸಮಯ ಪ್ರಜ್ಞೆ ಮೆರೆದ ದೇವಾಲಯದ ಆಡಳಿತ ಮಂಡಳಿ ಸದಸ್ಯರು ರೈಲ್ವೆ ಇಲಾಖೆಯ ಕ್ರೇನ್ ತಂದು ಕುಸಿಯುತ್ತಿದ್ದ ರಥವನ್ನು ಸರಿಯಾಗಿ ಕೂರಿಸಿದ್ದರಿಂದ ಭಕ್ತರಲ್ಲಿ ಉಂಟಾದ ಆತಂಕ ನಿವಾರಣೆಯಾಯಿತು. ಸುಮಾರು ಒಂದೂವರೆ ಗಂಟೆಗಳ ರಥೋತ್ಸವಕ್ಕೆ ಅಡ್ಡಿ ಉಂಟಾಗಿತ್ತು.

ಕಳೆದ ವರ್ಷ ವಿಜಯ ಬ್ಯಾಂಕ್ ಬಳಿ ಬರುವಷ್ಟರಲ್ಲಿ ರಥದ ಒಂದು ಚಕ್ರ ರಸ್ತೆಯಲ್ಲಿ ಹೂತು ಹೋಗಿತ್ತು. ಆದರೆ, ಪ್ರತಿ ವರ್ಷ ಇದೇ ರೀತಿ ಸಮಸ್ಯೆ ಎದುರಾಗುತ್ತಿದ್ದು, ಭಕ್ತರಲ್ಲಿ ಆತಂಕ ಮೂಡುತ್ತಿದೆ. ಅದರೆ, ಇದು ರಸ್ತೆ ದುರಸ್ತಿ ಕಾರ್ಯದ ಸಮಸ್ಯೆಯೇ ಹೊರತೂ ಬೇರೆ ಯಾವುದೇ ರೀತಿ ಆತಂಕ ಪಡುವ ಅಗತ್ಯವಿಲ್ಲ ಎಂದು ಅರ್ಚಕ ನಾಗಚಂದ್ರ ದೀಕ್ಷಿತ್ ಹೇಳಿದ್ದಾರೆ. [ನಂಜನಗೂಡು : ಅಸೆಂಬ್ಲಿ ಕ್ಷೇತ್ರ ಪರಿಚಯ]
ಪಟ್ಟಣದಲ್ಲಿ ಅನೇಕ ಸಂಘ-ಸಂಸ್ಥೆಗಳು, ದೇಗುಲದ ವತಿಯಿಂದ ಬರುವ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಏರ್ಪಡಿದ್ದರು.ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರು ಕುಟುಂಬ ಸಮೇತ ಆಗಮಿಸಿ 'ಹಕೀಂ ನಂಜುಂಡ' ನ ದರ್ಶನ ಪಡೆದುಕೊಂಡರು. ಪೊಲೀಸ್ ವರಿಷ್ಠಾಧಿಕಾರಿ ಅಭಿನವ್, ಪುರಸಭೆ ಅಧ್ಯಕ್ಷೆ ಮೀನಾಕ್ಷಿ, ದೇವಾಲಯದ ನಿರ್ವಹಣಾಧಿಕಾರಿ ರೂಪಾ ಮುಂತಾದವರು ಉಪಸ್ಥಿತರಿದ್ದರು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications