ಈ ಬಾರಿ ಸಾಹಿತಿ ಎಸ್ ಎಲ್ ಭೈರಪ್ಪ ಅವರಿಂದ ದಸರಾ ಉದ್ಘಾಟನೆ
ಮೈಸೂರು, ಆಗಸ್ಟ್ 14: ಈ ಬಾರಿ ವೈಭವದ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಪ್ರಸಿದ್ಧ ಸಾಹಿತಿ ಎಸ್.ಎಲ್.ಭೈರಪ್ಪ ಅವರನ್ನು ಆಹ್ವಾನಿಸಲಾಗಿದೆ.
ನಾಳೆ
ವಿಧಾನಸೌಧದಲ್ಲಿ
ದಸರಾ
ಉನ್ನತ
ಮಟ್ಟದ
ಸಭೆ
ನಾಡಹಬ್ಬದ
ಸಿದ್ಧತೆ
ಕುರಿತು
ಚರ್ಚಿಸಲು
ಮುಖ್ಯಮಂತ್ರಿ
ಬಿ.ಎಸ್.ಯಡಿಯೂರಪ್ಪ
ಅಧ್ಯಕ್ಷತೆಯಲ್ಲಿ
ಬೆಂಗಳೂರಿನಲ್ಲಿ
ಇಂದು
ನಡೆದ
ಉನ್ನತ
ಮಟ್ಟದ
ಸಮಿತಿ
ಸಭೆಯಲ್ಲಿ
ಮೈಸೂರು
ಭಾಗದ
ಬಿಜೆಪಿ
ಸಂಸದರು
ಹಾಗೂ
ಶಾಸಕರು
ಭೈರಪ್ಪ
ಅವರ
ಹೆಸರನ್ನು
ಪ್ರಸ್ತಾಪಿಸಿದ್ದರು.
ಈ
ಹಿನ್ನೆಲೆ
ಸಿಎಂ
ಎಸ್.ಎಲ್.ಭೈರಪ್ಪ
ಅವರನ್ನು
ಆಯ್ಕೆ
ಮಾಡಿದ್ದಾರೆ
ಎನ್ನಲಾಗಿದೆ.
ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, "20.5 ಕೋಟಿ ಹಣವನ್ನು ದಸರೆಗೆ ಬಿಡುಗಡೆ ಮಾಡಲಾಗಿದೆ. ಪ್ರತಿವರ್ಷ ಹೇಗೆ ದಸರಾ ಆಚರಣೆಯಾಗುತ್ತದೋ ಅದೇ ರೀತಿ ಯಾವುದೇ ಕೊರತೆಯಾಗದಂತೆ ಈ ಬಾರಿಯೂ ಆಚರಿಸಲಾಗುತ್ತದೆ. ರಾಜ್ಯದ ಪ್ರತಿಭಾವಂತ ಕಲಾವಿದರನ್ನು ಆರಿಸಿಯೇ ಈ ಬಾರಿ ದಸರೆಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಲು ಮುಂದಾಗುವಂತೆ ಇಲಾಖೆಗಳಿಗೆ ತಿಳಿಸಲಾಗಿದೆ" ಎಂದರು.
"ಮೈಸೂರು ದಸರಾ ನಾಡಿನ ಪರಂಪರೆಯನ್ನು ಎತ್ತಿ ಹಿಡಿಯುವ ಹಬ್ಬ, ಪ್ರವಾಸೋದ್ಯಮಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಇದರಿಂದ ಆರ್ಥಿಕತೆಯೂ ವೃದ್ಧಿಸಲಿದೆ. ಈ ಬಾರಿ ಯಾವುದೇ ಗೊಂದಲಕ್ಕೆ ಎಡೆಮಾಡದೆ ಆಯೋಜನೆ ಮಾಡಲಾಗುವುದು. ಈಗಾಗಲೇ ಕಲಾವಿದರನ್ನು ಆಯ್ಕೆ ಮಾಡುವಂತೆ ವಾರ್ತಾ ಮತ್ತು ಸಂಪರ್ಕ ಇಲಾಖೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಗೆ ಸೂಚನೆ ನೀಡಲಾಗಿದೆ" ಎಂದು ತಿಳಿಸಿದರು.