ದಸರಾ ಸಮಯದಲ್ಲೇ ಯುದುವೀರ್ ಎರಡನೇ ಮಗ ಜನಿಸಿದ್ರು ಅರಮನೆಗೆ ಸೂತಕ ಇರ್ಲಿಲ್ವಾ?
ಮೈಸೂರು, ಅಕ್ಟೋಬರ್ 16: ಈ ಬಾರಿ ನಾಡಹಬ್ಬ ದಸರಾದ ಸಂಭ್ರಮದ ಜೊತೆಗೆ ಮತ್ತೊಂದು ಸಂತೋಷ ಮನೆ ಮಾಡಿತ್ತು. ನವರಾತ್ರಿ ಹಾಗೂ ದಸರಾ, ಆಯುಧ ಪೂಜೆ ಸಂಭ್ರಮದ ಸಮಯದಲ್ಲೇ ಮೈಸೂರು ಒಡೆಯರ್ ರಾಜಪರಿವಾರಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಪತ್ನಿ ತ್ರಿಷಿಕಾ ದಂಪತಿಗೆ ಎರಡನೇ ಗಂಡು ಮಗು ಜನಿಸಿದ್ದು, ಈ ಬಾರಿ ದಸರಾ ಸಂತೋಷವನ್ನು ದುಪ್ಪಟ್ಟು ಮಾಡಿದೆ.
ನವರಾತ್ರಿ ಹಾಗೂ ದಸರಾ ಸಮಯದಲ್ಲೇ ಯುದುವೀರ್ ಒಡೆಯರ್ಗೆ ಎರಡನೇ ಮಗ ಜನಿಸಿದರೂ ಕೂಡ ಅರಮನೆಗೆ ಸೂತಕ ಇರ್ಲಿಲ್ವಾ ಎನ್ನುವ ಪ್ರಶ್ನೆ ಎಲ್ಲರಲ್ಲಿತ್ತು. ಈ ಪ್ರಶ್ನೆಗೆ ಆಧ್ಯಾತ್ಮಿಕ ಚಿಂತಕ ಡಾ.ಶೆಲ್ವ ಪಿಳ್ಳೈ ಉತ್ತರಿಸಿದ್ದಾರೆ.

ಈ ಬಗ್ಗೆ ವಿವರಿಸಿದ ಅವರು, 'ಅರಮನೆಯಲ್ಲಿ ಸೂತಕ ಎನ್ನುವುದು ಅನ್ವಯಿಸುವುದಿಲ್ಲ. ಯಾಕೆಂದರೆ ಅರಮನೆ ಮತ್ತು ದೇವಸ್ಥಾನಗಳಲ್ಲಿ ಕಂಕಣ ಧಾರಣೆಯನ್ನು ಮಾಡಿಕೊಂಡಿರುತ್ತಾರೆ. ಯಾವುದೋ ಒಂದು ಮುಖ್ಯವಾದ ಕೆಲಸದ ಸಮಯಗಳಲ್ಲಿ ಕಂಕಣ ಧಾರಣೆ ಮಾಡಿಕೊಂಡಿರುತ್ತಾರೆ. ಉದಾಹರಣೆಗೆ ಒಂದು ದೇವಸ್ಥಾನದ ಕುಂಭಾಭಿಷೇಕ ಅದು ಆಗುವ ತನಕ ಕಂಕಣ ಧಾರಣೆ ಮಾಡಿಕೊಂಡಿರುತ್ತಾರೆ. ಅದೇ ರೀತಿ ರಾಜವಂಶದಲ್ಲಿ ನವರಾತ್ರಿ ಮೊದಲ ದಿನವೇ ಕಂಕಣ ಧಾರಣೆ ಮಾಡಿಕೊಂಡಿರುತ್ತಾರೆ' ಎಂದರು.
'ವಿಜಯದಶಮಿಯ ಯಾತ್ರೆ ಮುಗಿಯುವ ತನಕ ನಮಗೆ ಯಾವುದೇ ಸೂತಕಗಳು ಬರದೇ ಇರಲಿ, ತಿಳಿದು ತಿಳಿಯದೆಯೇ ಯಾವುದೇ ರೀತಿಯ ಸೂತಕ ಬರದೇ ಇರಲಿ ಅಂತನೇ ಸಂಕಲ್ಪ ಮಾಡಲಾಗುತ್ತದೆ. ಮೊದಲ ದಿನ ಕಂಕಣ ಧಾರಣೆ ಮಾಡುವಾಗಲೇ, ಈ ಉತ್ಸವ ಆರಂಭಿಸುತ್ತಿದ್ದೇವೆ. ಈ ಉತ್ಸವದ ಮಧ್ಯದಲ್ಲಿ ಯಾವುದೇ ಸೂತಕ ತಾಗದೇ ಇರಲಿ ಅಂತಾಲೇ ಸಂಕಲ್ಪ ಮಾಡುತ್ತಾರೆ. ಕಂಕಣ ಧಾರಣೆ ಆಗಿರುವುದರಿಂದ ಕಂಕಣ ಇರುವ ತನಕ ಯಾವ ಸೂತಕವೂ ಅನ್ವಯಿಸುವುದಿಲ್ಲ' ಎಂದು ಹೇಳಿದರು.
'ಈ ರೀತಿಯ ಪರಿಸ್ಥಿತಿಗಳು ಈ ಹಿಂದೆ ಬಂದಿರುವುದನ್ನು ಕೂಡ ಗಮನಸಿದ್ದೇವೆ. ರಾಜ ಒಡೆಯರ್ ಅವರ ಕಾಲದಲ್ಲಿ ಒಡೆಯರ್ ಅವರು ಆಗ ತಾನೇ ಸಿಂಹಾಸನ ಏರಬೇಕಿತ್ತು. ಆದ ಅವರ ಮಗ ಮರಣ ಹೊಂದಿದರು. ರಾಜನ ಮಗನೇ ಮರಣ ಹೊಂದಿದರೆ ದಸರಾ ಮಾಡುವುದು ಹೇಗೆ? ಆಗ ಅವರು ಹೇಳುತ್ತಾರೆ ಕಂಕಣ ಧಾರಣೆ ಆಗಿರುವುದರಿಂದ ಇದು ಅನ್ವಯಿಸುವುದಿಲ್ಲ ಅಂತಾ ಹೇಳಿ ಅವರ ಅಣ್ಣ-ತಮ್ಮಂದಿರು ಆ ಕಾರ್ಯ ನಡೆಸುತ್ತಾರೆ. ಇವರು ನವರಾತ್ರಿ ಹಾಗೂ ದಸರಾವನ್ನು ಸಂಪೂರ್ಣಗೊಳಿಸುತ್ತಾರೆ' ಎಂದು ಡಾ.ಶೆಲ್ವ ಪಿಳ್ಳೈ ಉದಾಹರಣೆ ಸಮೇತ ವಿವರಿಸಿದರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications