ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಡಾದಿಂದ ಶೆಡ್ ಗಳ ಒತ್ತುವರಿ ತೆರವು; 6 ಕೋಟಿ ರೂ ಆಸ್ತಿ ವಶ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 16: ಆಶಾಮಂದಿರ ಯೋಜನೆಯಡಿ ನಗರದ ದೇವನೂರು 1ನೇ ಹಂತ ಬಡಾವಣೆಯ ಮೂಲೆ ನಿವೇಶನಗಳಲ್ಲಿ ಮುಡಾ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಹತ್ತಾರು ಶೆಡ್ಡುಗಳನ್ನು ಇಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವರು ತೆರವುಗೊಳಿಸಿದರು.

ದೇವನೂರು ಬಡಾವಣೆಯ ಮೂಲೆ ನಿವೇಶನಗಳಲ್ಲಿ 40X40 ಅಡಿ ಅಳತೆಯ 4 ನಿವೇಶನ ಹಾಗೂ 30X40 ಅಡಿ ಅಳತೆಯ 2 ನಿವೇಶನಗಳಲ್ಲಿ ಒಟ್ಟು 8800 ಚದರ ಅಡಿಗಳಷ್ಟನ್ನು ಒತ್ತುವರಿ ಮಾಡಿಕೊಂಡು ಶೆಡ್ ನಿರ್ಮಿಸಲಾಗಿತ್ತು. ಶೆಡ್ ತೆರವುಗೊಳಿಸಲಾದ ಈ ನಿವೇಶನಗಳ ಒಟ್ಟು ಮೌಲ್ಯ ಆರು ಕೋಟಿ ರೂಪಾಯಿ ಎಂದು ಮುಡಾ ಆಯುಕ್ತ ನಟೇಶ್ ತಿಳಿಸಿದರು.

 ಮುಡಾ ಭೂಮಿ ಅತಿಕ್ರಮಣ ತೆರವು; 10 ಕೋಟಿ ರೂ.ಮೌಲ್ಯದ ನಿವೇಶನ ವಶಕ್ಕೆ ಮುಡಾ ಭೂಮಿ ಅತಿಕ್ರಮಣ ತೆರವು; 10 ಕೋಟಿ ರೂ.ಮೌಲ್ಯದ ನಿವೇಶನ ವಶಕ್ಕೆ

Mysuru: Muda Cleared Sheds Encroached Worth 6 Crores

ಆಯುಕ್ತ ನಟೇಶ್ ನೇತೃತ್ವದಲ್ಲಿ ನಡೆದ ಒತ್ತುವರಿ ತೆರುವು ಕಾರ್ಯಾಚರಣೆಯಲ್ಲಿ ಅಧೀಕ್ಷಕ ಅಭಿಯಂತರ ಶಂಕರ್, ಕಾರ್ಯಪಾಲಕ ಅಭಿಯಂತರರಾದ ಎಂ.ಆರ್.ಪಾಂಡುರಂಗ, ಜಿ.ಸುವರ್ಣ, ವಲಯ ಅಧಿಕಾರಿಗಳಾದ ಜಿ.ಮೋಹನ್, ಎಸ್.ಕೆ.ಭಾಸ್ಕರ್, ಸಿ.ಕಿರಣ್, ಕೆ.ಆರ್.ಮಹೇಶ್, ಎಚ್.ಪಿ.ಶಿವಣ್ಣ, ನಾಗೇಶ್, ಎಚ್.ಎನ್.ರವೀಂದ್ರ ಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ರಾಘವೇಂದ್ರ ಇತರರು ಇದ್ದರು.

English summary
The Mysore Urban Development Authority today cleared sheds which had been encroached at Devanuru Phase 1 under Asha Mandir project,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X