ಐಟಿ ದಾಳಿಯಿಂದ ನಾವು ಕುಗ್ಗುವುದಿಲ್ಲ : ಸಚಿವ ಸಾ ರಾ ಮಹೇಶ್
ಮೈಸೂರು, ಮಾರ್ಚ್ 29 : ಚುನಾವಣೆ ಇರುವ ವೇಳೆಯಲ್ಲೇ ಈ ರೀತಿ ದಾಳಿ ನಡೆಸಿರುವುದು ರಾಜಕೀಯ ಪ್ರೇರಿತ. ಈ ರಾಜಕೀಯ ಪ್ರೇರಿತ ದಾಳಿಗೆ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಸಚಿವ ಸಾ.ರಾ ಮಹೇಶ್ ಕಿಡಿಕಾರಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಸಂದರ್ಭದಲ್ಲಿ ಐಟಿ ದಾಳಿ ಮಾಡಿ ನಮ್ಮ ಪಕ್ಷವನ್ನು ಕುಗ್ಗಿಸಲು ಯತ್ನಿಸುತ್ತಿದ್ದಾರೆ. ಆದರೆ ಅದು ಸಾಧ್ಯವಾಗುವುದಿಲ್ಲ. ಕೇಂದ್ರ ಸರ್ಕಾರ ನ್ಯಾಯ ಸಮ್ಮತವಾಗಿ ದಾಳಿ ನಡೆಸಲಿ. ನಮ್ಮ ಪಕ್ಷದ ಬಲ ಇರುವ ಮೈಸೂರು ಮಂಡ್ಯ, ಹಾಸನ ಹಾಗೂ ಮಂಗಳೂರಿನಲ್ಲಿ ದಾಳಿ ನಡೆಸಿರುವುದು ರಾಜ್ಯ ಹಾಗೂ ಬಿಜೆಪಿಯ ರಾಷ್ಟೀಯ ನಾಯಕರಿಗೆ ಶೋಭೆ ತರುವಂತಹದ್ದಲ್ಲ ಎಂದರು.

ಈ ರಾಜಕೀಯ ಪ್ರೇರಿತ ದಾಳಿಗೆ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ. ಇದರಿಂದ ನಮ್ಮ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ನಮ್ಮ ಮೇಲೆ ಈ ರೀತಿಯ ದಾಳಿಯಿಂದ ಮುಂಚಿತವಾಗಿಯೇ ನಡೆಸಬಹುದಿತ್ತು, ಚುನಾವಣೆ ಇರುವ ವೇಳೆಯಲ್ಲೇ ಈ ರೀತಿ ದಾಳಿ ನಡೆಸಿರುವುದು ರಾಜಕೀಯ ಪ್ರೇರಿತವಷ್ಟೇ. ಯುವಮತದಾರರಿಗೆ ಇವೆಲ್ಲ ಅರ್ಥವಾಗಲಿದೆ ಎಂದರು.












Click it and Unblock the Notifications