Get Updates
Get notified of breaking news, exclusive insights, and must-see stories!

ದಸರಾ ಅತಿಥಿಗಳಿಗೆ ಔಷಧೀಯ ಸಸ್ಯಗಳ ಸ್ವಾಗತ

ಮೈಸೂರು, ಸೆ.1 : ಮೈಸೂರು ದಸರಾಕ್ಕೆ ಆಗಮಿಸುವ ವಿಐಪಿಗಳು ಮತ್ತು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸುವ ಸಂಪ್ರದಾಯವನ್ನು ಸ್ಥಗಿತಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ಬಾರಿಯ ದಸರಾಕ್ಕೆ ಆಗಮಿಸುವವರ ಕೈಗೆ ಔಷಧೀಯ ಸಸ್ಯ ನೀಡಿ ಸ್ವಾಗತಿಸಲಾಗುತ್ತದೆ.

ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಪುಷ್ಪಾವತಿ ಅಮರನಾಥ್ ಅವರು ಇಂತಹ ವಿನೂತನ ಪ್ರಯತ್ನ ಆರಂಭಿಸಿದ್ದಾರೆ. ದಸರಾಕ್ಕೆ ಆಗಮಿಸುವ ವಿಐಪಿಗಳು ಮತ್ತು ಅತಿಥಿಗಳಿಗೆ ಈ ಬಾರಿ ಔಷಧೀಯ ಸಸ್ಯವನ್ನು ಹೊಂದಿರುವ ಪಾಟ್‌ಅನ್ನು ನೀಡಿ ಸ್ವಾಗತ ಕೋರಲಾಗುತ್ತದೆ.

B.Pushpa Amarnath

ಈಗಾಗಲೇ ಅತಿಥಿಗಳಿಗೆ ಔಷಧೀಯ ಸಸ್ಯ ನೀಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾಧಿಕಾರಿ ಸಿ.ಶಿಖಾ ಅವರ ಜೊತೆ ಪುಷ್ಪಾವತಿ ಅಮರನಾಥ್ ಮಾತುಕತೆ ನಡೆಸಿದ್ದು, ಸಿಎಂ ಸಿದ್ದರಾಮಯ್ಯ ಅವರು ವಿನೂತನ ಪ್ರಯತ್ನಕ್ಕೆ ಒಪ್ಪಿಗೆ ನೀಡಿದ್ದಾರೆ. [ಗುತ್ತಿಗೆದಾರನಿಗೆ ಬೆದರಿಕೆ ಕರೆ]

ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ತಯಾರಿ ನಡೆಸಿರುವ ಜಿಲ್ಲಾಡಳಿತ, ಈಗಾಗಲೇ 5000 ಪಾಟ್‌ಗಳನ್ನು ಖರೀದಿಸಲು ಸಿದ್ಧತೆ ಆರಂಭಿಸಿದೆ. ದಸರಾ ಲಾಂಛನ ಹೊಂದಿರುವ ಪಾಟ್‌ಗಳಲ್ಲಿ ಔಷಧೀಯ ಸಸ್ಯಗಳನ್ನು ಇಟ್ಟು ಅತಿಥಿಗಳಿಗೆ ನೀಡಿ ಅವರನ್ನು ದಸರಾಕ್ಕೆ ಸ್ವಾಗತಿಸಲಾಗುತ್ತದೆ.

ಹೂಗುಚ್ಛ ನೀಡಿದರೆ ಅದನ್ನು ಅತಿಥಿಗಳನ್ನು ಮತೆತು ಬಿಡಬಹುದು ಅಥವ ಅಲ್ಲೇ ಬಿಟ್ಟು ಹೋಗಬಹುದು ಆದ್ದರಿಂದ ಔಷಧೀಯ ಸಸ್ಯಗಳನ್ನು ನೀಡುತ್ತಿದ್ದು, ಇದನ್ನು ತೆಗೆದುಕೊಂಡು ಹೋಗುತ್ತಾರೆ ಎಂದು ಪುಷ್ಪಾವತಿ ಅಮರನಾಥ್ ಹೇಳಿದ್ದಾರೆ. [ದಸರಾ ಮಾಹಿತಿ ಬೇಕೆ ಇಲ್ಲಿ ಕ್ಲಿಕ್ ಮಾಡಿ]

ಜಿಲ್ಲೆಯ ಪ್ರತಿ ತಾಲೂಕಿನಲ್ಲಿಯೂ ಔಷಧ ವನ ನಿರ್ಮಾಣ ಮಾಡುವ ಕನಸು ಷುಪ್ಪಾವತಿ ಅಮರನಾಥ್ ಅವರಿಗಿದೆ. ಹಾಗೆಯೇ ತಂಬಾಕು ರಹಿತ ದಸರಾವನ್ನು ಆಚರಿಸಲು ಅವರು ನಿರ್ಧರಿಸಿದ್ದು, ಧೂಮಪಾನ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+