Get Updates
Get notified of breaking news, exclusive insights, and must-see stories!

ಜಂಬೂ ಸವಾರಿಗೆ ಚಾಲನೆ, ತಾಯಿ ಚಾಮುಂಡೇಶ್ವರಿ ಹೊತ್ತು ಹೊರಟ ರಾಜಗಜ

ಮೈಸೂರು, ಅಕ್ಟೋಬರ್ 19: ಮೈಸೂರು ದಸರಾದ ಹೆಮ್ಮೆ ಜಂಬೂ ಸವಾರಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. 2:30 ರಿಂದ 3:15 ರ ನಡುವಿನ ಸಮಯದಲ್ಲಿ ನಂದಿ ಧ್ವಜ ಪೂಜೆ ನಂತರ ಜಂಬೂ ಸವಾರಿ ಆರಂಭವಾಗಲಿದೆ.

ಮೈಸೂರು ದಸರಾ - ವಿಶೇಷ ಪುರವಣಿ

ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾದ ತಾಯಿ ಚಾಮುಂಡೇಶ್ವರಿ ಅವರ ಚಿನ್ನದ ಮೂರ್ತಿಯನ್ನು ಹೊತ್ತು ಪಟ್ಟದ ಆನೆ ಅರ್ಜುನ ಹೊತ್ತು ರಾಜಬೀದಿಯಲ್ಲಿ ಮೆರವಣಿಗೆಯಲ್ಲಿ ಸಾಗಲಿದ್ದಾನೆ.

LIVE: Mysuru Dasara 2018 Jambu Savari

ಕುಮಾರಸ್ವಾಮಿ ಹಾಗೂ ಕೆಲವು ಸಚಿವರು ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ. ಮಹರಾಜ ಯಧುವೀರ ಅವರು ಇರಲಿದ್ದಾರೆ.

ಕಲಾತಂಡಗಳು, ಜನಪದ ತಂಡಗಳು, ಕುಂಭ ಹತಹೊತ್ತ ಮಹಿಳೆಯರು ಜಂಬೂ ಸವಾರಿಯ ಜೊತೆ ಸಾಗಲಿದ್ದು, ಕರ್ನಾಟಕದ ಇತಿಹಾಸ, ಸಂಸ್ಕೃತಿ ಬಿಂಬಿಸುವ 42 ಸ್ಥಬ್ದ ಚಿತ್ರಗಳು ಜನರ ಕಣ್‌ ತಣಿಸಲಿವೆ.

LIVE: Mysuru Dasara 2018 Jambu Savari

Oct 19, 2018, 4:40 pm IST

ಅಂಬಾರಿ ಸಾಗುತ್ತಿರುವ ದಾರಿಯ ಇಕ್ಕೆಲದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿರುವ ಜನಸ್ತೋಮ. ಹೂಗಳನ್ನು ಎರಚಿ ಕೈಮುಗಿಯುತ್ತಿರುವ ಜನಸಮೂಹ.
Oct 19, 2018, 4:36 pm IST

ಜಯಚಾಮರಾಜೇಂದ್ರ ವೃತ್ತ, ಕೃಷ್ಣರಾಜೇಂದ್ರ ವೃತ್ತ, ಮಾರ್ಕೆಟ್ ರಸ್ತೆ, ಬಂಬೂ ಬಜಾರ್ ಮೂಲಕ ಬನ್ನಿ ಮಂಟಪವನ್ನು ಜಂಬೂ ಸವಾರಿ ತಲುಪುತ್ತದೆ. ಒಟ್ಟು ಐದುವರೆ ಕಿ.ಮೀ ಜಂಬೂ ಸವಾರಿ ಸಾಗುತ್ತದೆ.
Oct 19, 2018, 4:24 pm IST

7ನೇ ಬಾರಿ ಅಂಬಾರಿ ಹೊತ್ತಿರುವ ಅರ್ಜುನ ಸರಿ ಸುಮಾರಿ 1000 ಕೆ.ಜಿ ಭಾರವನ್ನು ಹೊತ್ತು ಸಾಗುತ್ತಿದ್ದಾನೆ. ಆತನ ಪಕ್ಕ ಕುಮ್ಕಿ ಆನೆಗಳು ಸಾಗುತ್ತಿವೆ. ಹಿಂದೆ ಗಜಪಡೆ ಸಾಗಿಬರುತ್ತಿದೆ.
Oct 19, 2018, 4:20 pm IST

ಕಾಲಾಳುಗಳು, ಅಶ್ವಪಡೆ, ಪೊಲೀಸ್ ಪಡೆ, ಪೊಲೀಸ್ ಬ್ಯಾಂಡ್, ಸ್ಕಾಟ್‌ಲ್ಯಾಂಡ್ ಬ್ಯಾಂಡ್‌ ಇನ್ನೂ ಹಲವು ದಳಗಳು ಅಂಬಾರಿಯ ಹಿಂದೆ ಸಾಲಾಗಿ ಗತ್ತಿನಿಂದ ಸಾಗುತ್ತಿವೆ.
Oct 19, 2018, 4:15 pm IST

ಜಂಬೂ ಸವಾರಿಗೆ ಚಾಲನೆ ನೀಡಿದ ಸಿಎಂ ಕುಮಾರಸ್ವಾಮಿ. ಅಂಬಾರಿ ಹೊತ್ತ ಅರ್ಜುನ ರಾಜಗಾಂಭಿರ್ಯದಿಂದ ಹೆಜ್ಜೆ ಹಾಕುತ್ತಿದ್ದಾನೆ. ಆತನ ಪಕ್ಕ ಕುಮ್ಕಿ ಆನಿಗಳಾದ ಕಾವೇರಿ ಮತ್ತು ವರಲಕ್ಷ್ಮಿ ಜೊತೆಗೂಡಿವೆ.
Oct 19, 2018, 4:05 pm IST

ಅಂಬಾರಿಯನ್ನು ಕಟ್ಟುವ ಕಾರ್ಯ ಪ್ರಾರಂಭ. ಮುಸ್ಲಿಂ ಕುಟುಂಬವೊಂದು ಅಂಬಾರಿಯನ್ನು ಕಟ್ಟುವ ಕಾರ್ಯವನ್ನು ತಲೆತಲಾಂತರದಿಂದ ಮಾಡಿಕೊಂಡು ಬರುತ್ತಿದೆ.
Oct 19, 2018, 3:27 pm IST

ಬೆಂಗಳೂರು ಗ್ರಾಮಾಂತರ ಜಿಲ್ಲೆಯು, ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ದೇವನಹಳ್ಳಿ ಕೋಟೆಯ ಸ್ಥಬ್ಧ ಚಿತ್ರವನ್ನು ಮೈಸೂರು ದಸರಾದಲ್ಲಿ ಪ್ರದರ್ಶಿಸಲಾಯಿತು. ಬೆಂಗಳೂರು ನಗರ ಜಿಲ್ಲೆಯು ಸ್ವಚ್ಛತಾ ಅಭಿಯಾನ ಕುರಿತ ಸ್ತಬ್ಧ ಚಿತ್ರ ಪ್ರದರ್ಶಿಸಿತು.
Oct 19, 2018, 3:26 pm IST

ಡೊಳ್ಳು ಕುಣಿತ, ವೀರಗಾಸೆ, ವಾಲಗ, ವೀರಭದ್ರನ ಕುಣಿತ, ನಂದಿ ಧ್ವಜ ಕುಣಿತ, ಮದ್ದಳೆ ಕಲೆ, ಜಗ್ಗಲಿಗೆ ಇನ್ನೂ ಹಲವು ಕಲಾ ತಂಡಗಳ ಪ್ರದರ್ಶನ ನಡೆಯುತ್ತಿದೆ.
Oct 19, 2018, 3:24 pm IST

ಬಸವಣ್ಣನ ಜೀವನ ಬಿಂಬಿಸುವ ಸ್ತಬ್ಧ ಚಿತ್ರವನ್ನು ಕೂಡಲಸಂಗಮ ಪ್ರದರ್ಶಿಸಿದೆ.
Oct 19, 2018, 3:23 pm IST

ಸ್ತಬ್ಧ ಚಿತ್ರಗಳ ಪ್ರದರ್ಶನ ಆರಂಭವಾಗಿದೆ. ರಾಜ್ಯದ ಇತಿಹಾಸ, ಸಂಸ್ಕೃತಿ ಬಿಂಬಿಸುವ ಸ್ತಬ್ಧ ಚಿತ್ರಗಳ ಪ್ರದರ್ಶನ
Oct 19, 2018, 2:59 pm IST

ಸುಧಾ ಮೂರ್ತಿ, ಅನಿತಾ ಕುಮಾರಸ್ವಾಮಿ, ಸಚಿವ ಜಿ.ಟಿ.ದೇವೇಗೌಡ, ಜಯಮಾಲಾ, ಸಾರಾ ಮಹೇಶ್‌ ಇನ್ನೂ ಹಲವು ಮುಖಂಡರು ಜಂಬೂ ಸವಾರಿ ಚಾಲನೆಯಲ್ಲಿ ಭಾಗಿ.
Oct 19, 2018, 2:51 pm IST

ಜಂಬೂ ಸವಾರಿ ಚಾಲನೆಗೆ ಹಸಿರು ಶಾಲು ಹೊದ್ದು, ರೈತ ಪರ ನಿಲುವು ಪ್ರದರ್ಶಿಸಿದ ಕುಮಾರಸ್ವಾಮಿ. ಉಪಮುಖ್ಯಮಂತ್ರಿ ಜಿ.ಪರಮೇಶ್ವರ್‌ ಅವರಿಂದಲೂ ಪೂಜೆ.
Oct 19, 2018, 2:50 pm IST

ಪೂರ್ಣ ಕುಂಭ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಕುಮಾರಸ್ವಾಮಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+