ವಿದೇಶಕ್ಕೆ ಹಬ್ಬುತ್ತಾ ಮೈಸೂರು ಸ್ಯಾಂಡಲ್ ಸೋಪ್ ಪರಿಮಳ?
ಮೈಸೂರು, ಜ. 16: ನಿರೀಕ್ಷೆಯಂತೆ ನಡೆದರೆ ಕರ್ನಾಟಕದ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ ವಿದೇಶಗಳಲ್ಲೂ ತನ್ನ ಪರಿಮಳ ಬೀರಲಿದೆ.
ಕರ್ನಾಟಕ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜಂಟ್ ಲಿ. (ಕೆಎಸ್ಡಿಎಲ್) ತನ್ನ ವ್ಯವಹಾರವನ್ನು ವಿದೇಶಕ್ಕೂ ವಿಸ್ತರಿಸಲು ಅನುಮತಿ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಕೋರಿದೆ. ಆದರೆ, ಈ ಹಿಂದೆಯೂ ಹಲವು ಬಾರಿ ಅನುಮತಿ ಕೇಳಲಾಗಿತ್ತು. ಆದರೆ, ಸರ್ಕಾರ ನಿರಾಕರಿಸಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೆಎಸ್ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಎ.ಸಿ. ಕೇಶವಮೂರ್ತಿ, "ಕಂಪನಿಗೆ ಈಗ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ನಮ್ಮ ಉತ್ಪನ್ನಗಳಾದ ಸೋಪ್, ಧೂಪದ್ರವ್ಯ ದಂಡಗಳು, ಶ್ರೀಗಂಧದ ಧೂಪ ಹಾಗೂ ಶ್ರೀಗಂಧದ ಎಣ್ಣೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ, ಇವನ್ನು ದೇಶದೊಳಗೆ ಮಾತ್ರ ಮಾರಲು ಅನುಮತಿ ಇದೆ. ಅನೇಕ ಅನಿವಾಸಿ ಭಾರತೀಯರು ಕರ್ನಾಟಕಕ್ಕೆ ಭೇಟಿ ನೀಡಿದಾಗ ಮಾತ್ರ ಇವನ್ನು ಖರೀದಿಸುವಂತಾಗಿದೆ" ಎಂದು ತಿಳಿಸಿದ್ದಾರೆ. [ಸ್ಯಾಂಡಲ್ ಸೋಪ್ ನಲ್ಲಿ ಹಗರಣದ ವಾಸನೆ]

"ನಮ್ಮ ಅತ್ಯಂತ ಜನಪ್ರಿಯ ಬ್ರಾಂಡ್ ಆಗಿರುವ ಮೈಸೂರು ಸ್ಯಾಂಡಲ್ ಸೋಪ್ ಮಾರಾಟ ಪ್ರತಿ ವರ್ಷ ಶೇ. 14ರಷ್ಟು ಹೆಚ್ಚುತ್ತಿದೆ. ಜೊತೆಗೆ ಸ್ಯಾಂಡಲ್ ಗೋಲ್ಡ್ ಸೋಪ್ ಮಾರಾಟವೂ ವರ್ಷಕ್ಕೆ ಶೇ. 22ರಷ್ಟು ಹೆಚ್ಚಾಗಿದೆ" ಎಂದು ತಿಳಿಸಿದರು.
ಸಂಸ್ಥೆಯಿಂದಲೇ ಮೈಸೂರಲ್ಲಿ ಅಂಗಡಿ : "ಕೆಎಸ್ಡಿಎಲ್ ಸಂಸ್ಥೆ ಉತ್ಪನ್ನ ಮಾರಾಟಕ್ಕೆ ಕಂಪನಿ ವತಿಯಿಂದಲೇ ಮೈಸೂರಿನಲ್ಲಿ ಅಂಗಡಿ ತೆರೆಯುವ ಯೋಜನೆ ಇದೆ. ಅಂಗಡಿಗಾಗಿ ಸೂಕ್ತ ಸ್ಥಳ ಹುಡುಕುತ್ತಿದ್ದೇವೆ" ಎಂದು ಕೇಶವಮೂರ್ತಿ ತಿಳಿಸಿದ್ದಾರೆ.
ಪ್ರಸ್ತುತ ಅಶೋಕಪುರಂನಲ್ಲಿರುವ ಮೈಸೂರು ಶ್ರೀಗಂಧ ಕಾರ್ಖಾನೆಯಲ್ಲಿ ಈಗಾಗಲೇ ಒಂದು ಅಂಗಡಿಯಿದೆ. ಅದು ಗ್ರಾಹಕರನ್ನು ಹೆಚ್ಚು ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ. ಇದರಿಂದ ವಹಿವಾಟು ತಿಂಗಳಿಗೆ ಐದು ಲಕ್ಷ ರು.ಗಳಿಗೆ ಹೆಚ್ಚಾಗಿದೆ. ಮೊದಲು 3 ಲಕ್ಷ ರು. ಇತ್ತು ಎಂದು ತಿಳಿಸಿದರು.
ಆರಂಭವಾಗಿದೆ ಸೋಪ್ ಮೇಳ : ಮೈಸೂರಿನ ವಿನೋಬಾ ರಸ್ತೆಯಲ್ಲಿರುವ ನಂಜರಾಜ ಬಹದ್ದೂರ್ ಚೌಲ್ಟ್ರಿಯಲ್ಲಿ 'ಸೋಪ್ ಸಂತೆ' ಆಯೋಜಿಸಲಾಗಿದೆ. ಶುಕ್ರವಾರ ಆರಂಭವಾಗಿರುವ ಈ ಸಂತೆ 10 ದಿನಗಳ ಕಾಲ ನಡೆಯಲಿದೆ. ಕೆಎಸ್ಡಿಎಲ್ ಸಂಸ್ಥೆಯ ಎಲ್ಲ ಸೋಪ್ಗಳು, ಮೈಸೂರು ಸ್ಯಾಂಡಲ್ ಧೂಪ್ ಹಾಗೂ ಅಗರಬತ್ತಿಗಳನ್ನು ಪ್ರದರ್ಶನಕ್ಕಿಡಲಾಗಿದೆ ಎಂದು ಕೇಶವಮೂರ್ತಿ ತಿಳಿಸಿದ್ದಾರೆ.
-
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ












Click it and Unblock the Notifications