ಅಗಲಿದ ಒಡೆಯನಿಗೆ ಕಂಬನಿ ಮಿಡಿದ ಸೇವಕರು
ಮೈಸೂರು, ಡಿ. 11 : "ನಮ್ಮ ಮನೆಯ ಮತ್ತು ಅರಮನೆಯ ನಂದಾ ದೀಪ ಆರಿ ಹೋಗಿದೆ" ಎಂದು ಅರಮನೆಯಲ್ಲಿ ಕಾರ್ಯ ನಿರ್ವಹಿಸುವ 300ಕ್ಕೂ ಅಧಿಕ ಸೇವಕರು ಮತ್ತು ಸಿಬ್ಬಂದಿ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಮಂಗಳವಾರ ಮಧ್ಯಾಹ್ನ ಒಡೆಯರ್ ನಿಧನದ ಸುದ್ದಿ ತಿಳಿದ ತಕ್ಷಣದಿಂದಲೇ ಅರಮನೆಯಲ್ಲಿ ನೀರವ ಮೌನ ಆವರಿಸಿದ, ಕೆಲಸಗಾರರು ಒಡೆಯನನ್ನು ಕಳೆದುಕೊಂಡ ದುಖಃದಲ್ಲಿ ಮುಳುಗಿ ಹೋಗಿದ್ದಾರೆ.
ನಮ್ಮ ಮನೆಯ ದೀಪ ಬೆಳಗಿದ ಒಡೆಯರು ಇಂದು ನಮ್ಮೊಂದಿಗಿಲ್ಲ ಎಂಬ ಸುದ್ದಿ ಆಘಾತವನ್ನು ಉಂಟು ಮಾಡಿದೆ. ಹಲವಾರು ವರ್ಷಗಳಿಂದ ಅವರ ಮತ್ತು ಅರಮನೆಯ ಕೆಲಸ ಮಾಡುತ್ತಿದ್ದೇವೆ ಎಂದು ಕಣ್ಣಿನಲ್ಲಿ ನೀರು ತುಂಬಿಕೊಂಡರು ಮುಜಾಹೀದ್ದಿನ್. 30 ವರ್ಷಗಳಿಂದ ಅರಮನೆಯಲ್ಲಿ ದುಡಿಯುತ್ತಿದ್ದ ರಾಮ ನಾಯಕ್. ತಾತ ಮುತ್ತಾತರ ಕಾಲದಿಂದ ನಮ್ಮ ವಂಶ ಅರಮನೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ತಂದೆಯನ್ನೇ ಕಳೆದುಕೊಂಡ ದುಖಃದಲ್ಲಿದ್ದೇವೆ ಎಂದು ನೋವನ್ನು ಹಂಚಿಕೊಂಡರು. (ನೀರವ ಮೌನದಲ್ಲಿ ಮುಳುಗಿದ ಮೈಸೂರು)

ಅರಮನೆಯಲ್ಲಿ ಒಡೆಯರು ಮತ್ತು ರಾಜಮನೆತನದವರು ನೀಡಿದ ಸೂಚನೆಗಳನ್ನು ತಪ್ಪದೇ ಪಾಲಿಸಿ, ರಾಜ ವೈಭವದ ಮೆರಗು ನೀಡುತ್ತಿದ್ದ ಅರಮನೆಯ ಸಿಬ್ಬಂದಿ ಈಗ ಅರಸನಿಲ್ಲದೇ ಅನಾಥಪ್ರಜ್ಞೆ ಅನುಭವಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಒಡೆಯರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಅರಮನೆ ತಲುಪುತ್ತಿದ್ದಂತೆ, ಅರಮನೆಯಲ್ಲಿ ಶೋಕ ಮಡುಗಟ್ಟಿತು. ಒಡೆಯರ್ ಅವರ ಮೃತದೇಹ ಅರಮನೆ ತಲುಪುವ ವರೆಗೂ ಸಿಬ್ಬಂದಿ ಅವರ ದರ್ಶನಕ್ಕಾಗಿ ಕಾದು ಕುಳಿತಿದ್ದರು.
ನಮ್ಮನ್ನು ಅವರು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಅವರಿಲ್ಲದ ಅರಮನೆಯನ್ನು ಕಲ್ಪಿಸಿಕೊಳ್ಳುವುದಾದದರೂ ಹೇಗೆ? ಎಂದು ಕೆಲಸಗಾರರು ನೋವಿನಿಂದ ನುಡಿದರು. ಅವರ ಸೇವೆ ಮಾಡುವುದೇ ನಮಗೆ ದೊರೆತ ಪುಣ್ಯವಾಗಿತ್ತು. ಸಮೀಪದಿಂದಲೇ ರಾಜರನ್ನು ನೋಡುವ ಭಾಗ್ಯ ನಮ್ಮದಾಗಿತ್ತು. ಆದರೆ ಇದೀಗ ಒಡೆಯರು ನಮ್ಮಿಂದ ದೂರವಾಗಿದ್ದಾರೆ ಎಂದು ಅರಮನೆ ಕೆಲಸಗಾರರು ಕಂಬನಿ ಮಿಡಿದಿದ್ದಾರೆ. (ಒಡೆಯರಿಗೆ ಚಿತ್ರ ನಮನ)
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications