Get Updates
Get notified of breaking news, exclusive insights, and must-see stories!

ವಿಜಯ ಸಂಕೇಶ್ವರ್ ಹೇಳಿಕೆ ಸಮರ್ಥಿಸಿಕೊಂಡ ಪ್ರತಾಪ್ ಸಿಂಹ

ಮೈಸೂರು, ಏಪ್ರಿಲ್ 29; ಮೂಗಿಗೆ ಎರಡು ಹನಿ ಲಿಂಬೆ ರಸ ಹಾಕಿದರೆ ದೇಹದಲ್ಲಿರುವ ಆಕ್ಸಿಜನ್ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಉದ್ಯಮಿ, ವಿಆರ್‌ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ವಿಜಯ ಸಂಕೇಶ್ವರ ಹೇಳಿಕೆ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಹಲವಾರು ಜನರು ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.

ಗುರುವಾರ ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, "ಕೊರೊನಾ ಚಿಕಿತ್ಸೆಗೆ ಮೂಗಿಗೆ ನಿಂಬೆಹಣ್ಣಿನ ರಸ ಹಾಕಿ ಎಂಬ ಉದ್ಯಮಿ ಡಾ. ವಿಜಯ ಸಂಕೇಶ್ವರ್ ಹೇಳಿರುವುದರಲ್ಲಿ ತಪ್ಪೇನಿದೆ?" ಎಂದು ಪ್ರಶ್ನಿಸಿದರು.

"ಸಂಕೇಶ್ವರ್ ಅವರೇನೂ ನಿಂಬೆಹಣ್ಣಿನ ರಸ ಕೊರೊನಾಗೆ ಮೆಡಿಸನ್ ಎಂದು ಹೇಳಿದ್ದಾರಾ?. ದೇಹದ ಕಫಾ ತೆಗೆಯಲು ನಿಂಬೆಹಣ್ಣಿನ ರಸ ಸಹಕಾರಿ ಎಂದು ಹೇಳಿದ್ದಾರೆ, ಇದರಲ್ಲಿ ತಪ್ಪೇನಿದೆ?. ಇದನ್ನೇಕೆ ಕೆಲವರು ವಿವಾದ ಮಾಡುತ್ತಿದ್ದಾರೆ?" ಎಂದು ಕೇಳಿದರು.

 BJP MP Pratap Simha Comment On Vijay Sankeshwar Statement

"ವಿಜಯ ಸಂಕೇಶ್ವರ್ ಅವರ ಬಗ್ಗೆ ಮಾತಾಡುವ ಮುನ್ನಾ ಮಾತಾಡುವವರು ತಮ್ಮ ಯೋಗ್ಯತೆ ಏನೆಂದು ನೋಡಿಕೊಳ್ಳಲಿ" ಎಂದು ಸಂಸದ ಪ್ರತಾಪ್ ಸಿಂಹ ಟೀಕೆಗಳನ್ನು ಮಾಡುವವರಿಗೆ ತಿರುಗೇಟು ನೀಡಿದರು.

ಪ್ರಧಾನಿ ಮೋದಿಯನ್ನು ಟ್ವಿಟ್ಟರ್‌ನಲ್ಲಿ ಅತಿ ಹೆಚ್ಚು ಟೀಕಿಸುವವರಿಗೂ ತಿರುಗೇಟು ನೀಡಿದ ಪ್ರತಾಪ್ ಸಿಂಹ, "ಮೋದಿ ಉಜ್ವಲವಾಗಿ ಬೆಳುಗುತ್ತಿರುವ ಸೂರ್ಯ. ಸೂರ್ಯನೆಡೆಗೆ ನಿಂತು ಉಗುಳಿದರೆ ಉಗುಳು ಯಾರಿಗೆ ತಗುಲುತ್ತದೆ ಗೊತ್ತಾ? ಮೋದಿ ಟೀಕಿಸುವವರ ಕಥೆಯೂ ಅಷ್ಟೆ" ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+