5 ದಶಕದಿಂದ ತುಂಬದ ಕೆರೆ 3 ದಿನದ ಮಳೆಗೆ ಭರ್ತಿ
ಮೈಸೂರು, ಮೇ 30 : ಮೈಸೂರಿನಲ್ಲಿ ಕಳೆದ 3 ದಿನಗಳಿಂದ ನಿರಂತರ ಮಳೆ ಹಿನ್ನೆಲೆಯಲ್ಲಿ ಕಳೆದ 55 ವರ್ಷಗಳಿಂದ ಪೂರ್ಣವಾಗಿ ತುಂಬದ ಕೆರೆಯೊಂದು 3 ದಿನಕ್ಕೆ ಸಂಪೂರ್ಣವಾಗಿ ಭರ್ತಿಯಾಗಿದೆ.
ನಂಜನಗೂಡು ತಾಲೂಕಿನ ಚುಂಚನಹಳ್ಳಿ ಗ್ರಾಮದ ಕೆರೆಯಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದ್ದು. ಸತತ ಮೂರು ದಿನದ ಮಳೆ 55 ವರ್ಷದ ಬಳಿಕ ಗ್ರಾಮದ ಮಾದಯ್ಯನಕೆರೆ ತುಂಬಿ ತುಳುಕಿದೆ. ಕಳೆದ 5 ದಶಕಗಳಿಂದ ಸಂಪೂರ್ಣ ಕೆರೆ ಈ ರೀತಿ ನೀರಿನಿಂದ ತುಂಬಿರಲಿಲ್ಲ. ಇದಕ್ಕಾಗಿ ಹಲವು ಆಚರಣೆಗಳನ್ನ ನಡೆಸಿದ್ರು ಯಾವುದೇ ಪ್ರಯೋಜನ ಆಗಿರಲಿಲ್ಲ.[ಗೋಮಾಂಸ ನಿಷೇಧದಿಂದ ಮೈಸೂರು ಜೂ ಕಂಗಾಲು, ಮುಂದೇನು?]
ಇತ್ತೀಚೆಗೆ ಸರ್ಕಾರದ ವತಿಯಿಂದ ಕೆರೆಯ ಹೂಳು ತೆಗೆದು ಸ್ವಚ್ಛಗೊಳಿಸಲಾಗಿತ್ತು. ಪರಿಣಾಮ ಕೆರೆಯಲ್ಲಿ 10 ರಿಂದ 11 ಅಡಿಗಳಷ್ಟು ನೀರು ಸಂಗ್ರಹವಾಗಿದ್ದು 5 ದಶಕಗಳ ನಂತರ ಚುಂಚನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರ ನೀರಿನ ಬವಣೆಗೆ ಪರಿಹಾರ ಸಿಕ್ಕಿದಂತಾಗಿದೆ. ಕೆರೆಯ ಸುತ್ತಮುತ್ತ ಅಂತರ್ಜಲ ಪ್ರಮಾಣ ಸಹ ದಿಢೀರ್ ಹೆಚ್ಚಳವಾಗಿದ್ದು ಕೆರೆ ತುಂಬಿದ್ದರಿಂದ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು.[ಕಳೆದೆರಡು ದಿನಗಳಿಂದ ಮಳೆ, ನಂಜನಗೂಡಿನ ಹೆಡತಲೆ ಗ್ರಾಮ ಜಲಾವೃತ]
ನೀರು ತುಂಬಿದ್ದಕ್ಕಾಗಿ ವಿಶೇಷ ಆಚರಣೆಗೆ ಸಿದ್ಧವಾಗಿರುವ ಗ್ರಾಮಸ್ಥರು ಇನ್ನೆರಡು ದಿನದ ನಂತರ ವಿಶೇಷ ಹಬ್ಬ ನಡೆಸಿ ವಿಶೇಷ ಭೋಜನ ವ್ಯವಸ್ಥೆಆಯೋಜಿಸಲು ಸಿದ್ಧವಾಗುತ್ತಿದ್ದಾರೆ.