ನಂಜನಗೂಡಿನಲ್ಲಿ ಲಿಂಗಾಯತ, ದಲಿತ ಮತಗಳ ಹಿಡಿತ ಯಾರಿಗೆ?
ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿರುವ ನಂಜನಗೂಡು ಉಪ ಚುನಾವಣೆಯಲ್ಲಿ ಜಾತಿವಾರು ಮತಗಳ ವಿಭಜನೆ ಹೇಗಿದೆ? ಬಿಜೆಪಿ ಹೆಣೆದಿರುವ ತಂತ್ರಗಳೇನು? ಸಿದ್ದರಾಮಯ್ಯ ಅವರ ಪ್ರತಿತಂತ್ರವೇನು? ಮುಂದೆ ಓದಿ...
ಮೈಸೂರು, ಮಾರ್ಚ್ 23: ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿರುವ ನಂಜನಗೂಡು ಉಪ ಚುನಾವಣೆಯಲ್ಲಿ ಜಾತಿವಾರು ಮತಗಳ ವಿಭಜನೆ ಹೇಗಿದೆ? ಬಿಜೆಪಿ ಹೆಣೆದಿರುವ ತಂತ್ರಗಳೇನು? ಸಿದ್ದರಾಮಯ್ಯ ಅವರ ಪ್ರತಿತಂತ್ರವೇನು? ಕಾಂಗ್ರೆಸ್ ತೊರೆದು ಬಿಜಿ ಅಭ್ಯರ್ಥಿಯಾಗಿರುವ ಶ್ರೀನಿವಾಸ್ ಪ್ರಸಾದ್ ರನ್ನು ಮಣಿಸಲು ಸಿಎಂ ಸಿದ್ದರಾಮಯ್ಯ ಯಾವ ರೀತಿ ಸಿದ್ದರಾಗಿದ್ದಾರೆ? ಮುಂದೆ ಓದಿ...
ಸದ್ಯಕ್ಕೆ
ಬಂದಿರುವ
ಮಾಹಿತಿಯಂತೆ
ಮತದಾರರ
ಒಲವು
ಮಾಜಿ
ಸಚಿವ
ಶ್ರೀನಿವಾಸ್
ಪ್ರಸಾದ್
ರತ್ತ
ತಿರುಗಿದೆ.
ಕಾಂಗ್ರೆಸ್ಸಿನ
ಕಳಲೆ
ಕೇಶವಮೂರ್ತಿ
ಅವರನ್ನು
ಸುಲಭವಾಗಿ
ಸೋಲಿಸುವ
ನಿರೀಕ್ಷೆ
ಇದೆ.[ನಂಜನಗೂಡಿನಲ್ಲಿ
ಲಿಂಗಾಯತ,
ದಲಿತ
ಮತಗಳ
ಹಿಡಿತ
ಯಾರಿಗೆ?]
ಜಾತಿವಾರು ಲೆಕ್ಕಾಚಾರದಲ್ಲಿ ಲಿಂಗಾಯತ ಹಾಗೂ ದಲಿತ ಮತಗಳು ಈ ಭಾಗದಲ್ಲಿ ಅಧಿಕವಾಗಿದ್ದು, ಅರ್ಧದಷ್ಟು ಮತಪಾಲು ಹೊಂದಿವೆ. ಶ್ರೀನಿವಾಸ್ ಪ್ರಸಾದ್ ಅವರಿಗೆ ದಲಿತ ಮತಗಳು ಸಹಜವಾಗಿ ಒಲಿದು ಬರಲಿದ್ದು, ಲಿಂಗಾಯತ ಮತಗಳನ್ನು ಸೆಳೆಯಲು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಪ್ರಚಾರ ಆರಂಭಿಸಿದ್ದಾರೆ.[ನಂಜನಗೂಡು ಉಪಚುನಾವಣಾ: ಅಕ್ರಮ ಮದ್ಯ ವಶ]
ಆದರೆ, 1993ರ ಬದನವಾಳು ದಲಿತ ಪ್ರಕರಣ ಈಗ ಬಿಜೆಪಿಗೆ ತಲೆನೋವಾಗಿದೆ. ಈ ಕೇಸಿನಲ್ಲಿ ಅರೋಪಿಗಳಾಗಿರುವವರೆಲ್ಲ ಲಿಂಗಾಯತರಾಗಿದ್ದು, ಅನೇಕರು ಈಗ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.