ಮುಂಬೈನ 'ಒಂದು ರುಪಾಯಿ ಕ್ಲಿನಿಕ್'ನಲ್ಲಿ ಹೀಗೊಂದು ಸುಖ ಪ್ರಸವ
ಮುಂಬೈ, ಜುಲೈ 11: ಮುಂಬೈನಲ್ಲಿ ತೀರಾ ಹೆಸರುವಾಸಿ ಆಗುತ್ತಿರುವ 'ಒಂದು ರುಪಾಯಿ ಕ್ಲಿನಿಕ್' ನಲ್ಲಿ ಮಹಿಳೆಯೊಬ್ಬರು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಘಾಟ್ಕೋಪರ್ ರೈಲು ನಿಲ್ದಾಣದಲ್ಲಿ ಮಂಗಳವಾರ ಮಹಾಲಕ್ಷ್ಮಿ ಬಂದಷ್ಟೇ ಸಂಭ್ರಮವಿತ್ತು.
ಗುಡಿಯಾ ಎಂಬ ಮಹಿಳೆ ಕೆಲಸಕ್ಕೆ ಹೋಗುವ ಸಲುವಾಗಿ ರೈಲಿಗೆ ಕಾಯುತ್ತಿದ್ದರು. ಆ ವೇಳೆ ನಿಲ್ದಾಣದಲ್ಲಿರುವ ಜನಸ್ನೇಹಿ ಕ್ಲಿನಿಕ್ ನಲ್ಲಿ ಆರೋಗ್ಯವಂತ ಹೆಣ್ಣುಮಗುವನ್ನು ಹೆತ್ತಿದ್ದಾರೆ. ತೀರಾ ತುರ್ತು ಸಂದರ್ಭದಲ್ಲಿ ವೈದ್ಯಕೀಯ ನೆರವು ನೀಡುವ ಉದ್ದೇಶದಿಂದ ಮುಂಬೈನ ಸೆಂಟ್ರಲ್ ಲೈನ್ ನ ಸ್ಟೇಷನ್ ಗಳಲ್ಲಿ ಇಂಥ ಕ್ಲಿನಿಕ್ ಆರಂಭಿಸಲಾಗಿದೆ.

ಇನ್ನು ಘಾಟ್ಕೋಪರ್ ನಿಲ್ದಾಣದಲ್ಲಿ ಕಳೆದ ಮೇನಲ್ಲಷ್ಟೇ ಕ್ಲಿನಿಕ್ ಆರಂಭವಾಗಿತ್ತು. "ನಮ್ಮ ಕ್ಲಿನಿಕ್ ಗಳಲ್ಲೇ ಮಗುವಿನ ಹೆರಿಗೆ ಮಾಡುತ್ತಿರುವುದು ಇದೇ ಮೊದಲು. ನಾಲ್ಕು ಮಂದಿಯ ತಂಡದಲ್ಲಿ ಇಬ್ಬರು ವೈದ್ಯರಿದ್ದು, ಹೆರಿಗೆಗೆ ನೆರವಾಗಿದ್ದಾರೆ. ಆ ಮಗು ಎರಡೂವರೆ ಕೇಜಿ ತೂಕವಿದೆ. ಮಗುವಿನ ಸ್ಥಿತಿ ಸ್ಥಿರವಾಗಿದೆ" ಎಂದು ವೈದ್ಯ ರಾಹುಲ್ ಘುಲೆ ಹೇಳಿದ್ದಾರೆ.
ಮಗುವಿಗೆ ಜನ್ಮ ನೀಡಿದ ಗುಡಿಯಾ ಹಾಗೂ ಆಕೆಯ ಪತಿ ಅಬ್ರಾರ್ ಖಾನ್ ದಾದರ್ ಗೆ ಹೋಗುವ ರೈಲಿಗಾಗಿ ಕಾಯುತ್ತಿದ್ದರು. ಆಕೆಗೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ರೈಲು ನಿಲ್ದಾಣದ ಮೂರನೇ ಪ್ಲಾಟ್ ಫಾರ್ಮ್ ನಲ್ಲಿರುವ ಕ್ಲಿನಿಕ್ ಗೆ ಕರೆದೊಯ್ಯಲಾಗಿದೆ. ಹೆರಿಗೆ ನಂತರ ಹತ್ತಿರದ ಆಸ್ಪತೆಗೆ ಹೆಚ್ಚಿನ ನಿಗಾ ವಹಿಸಲು ಸೇರಿಸಲಾಗಿದೆ.
ಈ ಕ್ಲಿನಿಕ್ ಗಳಲ್ಲಿ ಈ ವರೆಗೆ ಹನ್ನೆರಡು ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಅಪಘಾತ, ಹೃದಯಾಘಾತ ಅಥವಾ ಇನ್ಯಾವುದೇ ತುರ್ತು ಸಮಯದಲ್ಲಿ ರೋಗಿಗಳ ಶುಶ್ರೂಷೆ ಮಾಡಲು ಈ ಕ್ಲಿನಿಕ್ ಗಳನ್ನು ತೆರೆಯಲಾಗಿದೆ. ಇದಕ್ಕಾಗಿ ಸ್ಥಳವನ್ನು ಸರಕಾರ ಪುಕ್ಕಟೆ ನೀಡಿದೆ. ಜತೆಗೆ ನೀರು, ವಿದ್ಯುತ್ ಕೂಡ ಒದಗಿಸುತ್ತಿದೆ.
ಈ ಕ್ಲಿನಿಕ್ ನಲ್ಲಿ ಕನ್ಸಲ್ಟೇಷನ್ ಗೆ ಒಂದು ರುಪಾಯಿ ದರವಿದೆ. ಇತರ ಪರೀಕ್ಷೆ ಹಾಗೂ ಔಷಧಿಗಳಿಗೆ ಸಿಕ್ಕಾಪಟ್ಟೆ ರಿಯಾಯಿತಿ ಇದೆ. ಇಂಥ ಒಂದು ರುಪಾಯಿ ಕ್ಲಿನಿಕ್ ಗಳನ್ನು ಮುಂಬೈನ ಇನ್ನಷ್ಟು ಮೆಟ್ರೋ ನಿಲ್ದಾಣಗಳಲ್ಲಿ ಆರಂಭಿಸುವ ಉದ್ದೇಶ ಇದೆ.
ಒನ್ಇಂಡಿಯಾ ನ್ಯೂಸ್
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications