ಔರಂಗಬಾದ್ಗೆ ನೂತನ ಹೆಸರು ಇಟ್ಟ 'ಮಹಾ' ಸರ್ಕಾರ
ಮುಂಬೈ, ಜೂ.29: ರಾಜಕೀಯ ಬಿಕ್ಕಟ್ಟಿನ ನಡುವೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಸಚಿವ ಸಂಪುಟವು ಔರಂಗಾಬಾದ್ ಅನ್ನು ಸಂಭಾಜಿನಗರ ಎಂದು ಮತ್ತು ಒಸ್ಮಾನಾಬಾದ್ ಅನ್ನು ಧಾರಾಶಿವ್ ಎಂದು ಮರುನಾಮಕರಣ ಮಾಡಲು ಅನುಮೋದನೆ ನೀಡಿದೆ.
ಸಂಭಾಜಿ ಮರಾಠ ರಾಜ ಛತ್ರಪತಿ ಶಿವಾಜಿಯ ಹಿರಿಯ ಮಗ. ಸಂಭಾಜಿ ಹೆಸರನ್ನು ಈಗ ಔರಂಗಬಾದ್ಗೆ ನೀಡಲಾಗಿದೆ. 17ನೇ ಶತಮಾನದಲ್ಲಿ ಔರಂಗಾಬಾದ್ಗೆ ಅದರ ಹೆಸರನ್ನು ನೀಡಿದ ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ಸಂಭಾಜಿ ಕೊಲ್ಲಲ್ಪಟ್ಟನು. ಸಂಭಾಜಿ ಹೆಸರನ್ನು ಮರುನಾಮಕರಣ ಮಾಡುವುದು ಬಹಳ ಹಿಂದಿನಿಂದಲೂ ಶಿವಸೇನೆಯ ಬೇಡಿಕೆಯಾಗಿತ್ತು.
ಹೈದರಾಬಾದಿನ ಕೊನೆಯ ದೊರೆ ಮೀರ್ ಒಸ್ಮಾನ್ ಅಲಿ ಖಾನ್ ಹೆಸರನ್ನು ಹೊಂದಿರುವ ಉಸ್ಮಾನಾಬಾದ್ ನಗರದ ಸಮೀಪವಿರುವ 6ನೇ ಶತಮಾನದ ಗುಹೆಗಳಿಂದ ಧಾರಶಿವ್ ಎಂಬ ಹೊಸ ಹೆಸರನ್ನು ಪಡೆದುಕೊಂಡಿದೆ. ಇದರ ಬದಲಾವಣೆ ಕೂಡ ಶಿವಸೇನೆಯ ಅಜೆಂಡಾದಲ್ಲಿ ಕೆಲಕಾಲ ಇತ್ತು.

ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರ ತಂಡ ಉದ್ದವ್ ಠಾಕ್ರೆಗೆ ಸವಾಲು ಹಾಕುತ್ತಿರುವುದರಿಂದ ಈ ಸಮಯವು ಮಹಾರಾಷ್ಟ್ರದಲ್ಲಿ ನಿರ್ಣಾಯಕವಾಗಿದೆ. ಬಿಜೆಪಿಯೊಂದಿಗೆ ಮೈತ್ರಿಯನ್ನು ಪುನರಾರಂಭಿಸಲು ಶಿವಸೇನಾ ಪಕ್ಷವು ಎನ್ಸಿಪಿ ಮತ್ತು ಕಾಂಗ್ರೆಸ್ನೊಂದಿಗೆ ಮೈತ್ರಿ ಕಡಿದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನವಿ ಮುಂಬೈನ ಹೊಸ ವಿಮಾನ ನಿಲ್ದಾಣಕ್ಕೆ ಡಿ. ಬಿ. ಪಾಟೀಲ್ ಹೆಸರಿಡಲು ಸಚಿವ ಸಂಪುಟ ನಿರ್ಧರಿಸಿದೆ. ಏತನ್ಮಧ್ಯೆ, ಉದ್ದವ್ ಠಾಕ್ರೆ ಅವರ ವಕೀಲರು ಸರ್ಕಾರದ ವಿಶ್ವಾಸ ಮತ ಸಾಬೀತು ಮಾಡುವುದನ್ನು ಮುಂದೂಡಲು ಸುಪ್ರೀಂ ಕೋರ್ಟ್ಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಠಾಕ್ರೆ ಅವರು ತಮ್ಮದೇ ಜನರು ತನಗೆ ದ್ರೋಹ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ತನ್ನ ಬೆಂಬಲಕ್ಕೆ ನಿಂತಿದ್ದಕ್ಕಾಗಿ ಮೈತ್ರಿಕೂಟದ ಮಂತ್ರಿಗಳಿಗೆ ಧನ್ಯವಾದ ಹೇಳಿದ್ದಾರೆ.

ಏಕನಾಥ್ ಶಿಂಧೆ ಅವರು ಶಿವಸೇನೆಯ 55 ಶಾಸಕರ ಪೈಕಿ 40 ಶಾಸಕರು ಸೇರಿದಂತೆ 50 ಶಾಸಕರ ಬೆಂಬಲ ಇದೆ ಎಂದು ಹೇಳಿದ್ದಾರೆ. ಹತಾಶರಾಗಿರುವ ಉದ್ದವ್ ಠಾಕ್ರೆ ತಂಡ ಬಂಡಾಯ ಶಾಸಕರನ್ನು ದೇಶದ್ರೋಹಿಗಳು ಎಂದು ಕರೆದಿದೆ. ಅವರು ಮುಖ್ಯಮಂತ್ರಿಯ ತಂದೆಯಾದ ಶಿವಸೇನಾ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಪರಂಪರೆಯ ಬಗ್ಗೆ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.












Click it and Unblock the Notifications