ಅಗ್ನಿ ಆಕಸ್ಮಿಕ: ಮುಂಬೈಯಲ್ಲಿ ಇಬ್ಬರ ಸಜೀವ ದಹನ
ಮುಂಬೈ, ನವೆಂಬರ್ 14: ಮುಂಬೈಯಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕವೊಂದರಲ್ಲಿ ಇಬ್ಬರು ಮೃತರಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಮುಂಬೈಯ ಅಂಧೇರಿಯ ವೀರಾ ದೇಸಾಯಿ ರಸ್ತೆಯ ಕದಮ್ ಚಾವ್ಲ್ ಎಸ್ ಆರ್ ಎ ಕಟ್ಟಡದಲ್ಲಿ ಈ ದುರ್ಘಟನೆ ನಡೆದಿದೆ. ಹನ್ನೊಂದು ಮಹಡಿ ಕಟ್ಟಡದ ಹತ್ತನೇ ಮಹಡಿಯಲ್ಲಿ ಇದ್ದಕ್ಕಿದ್ದಂತೇ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಅಗ್ನಿ ಶಾಮಕದಳದ ಸಿಬ್ಬಂದಿ ದೌಡಾಯಿಸಿ ಮೂವರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

ಕಳೆದ ಅಕ್ಟೋಬರ್ ನಲ್ಲಿ ಪಂಜಾಬಿನ ಲುಧಿಯಾನದ ಕಲ್ಯಾಣ ನಗರ ಎಂಬಲ್ಲಿ ಕಾರ್ಖಾನೆಯೊಂದರಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ನಾಲ್ವರು ಮೃತರಾಗಿದ್ದರು.
ಅದಕ್ಕೂ ಮುನ್ನ ಛತ್ತೀಸ್ ಗಢದ ಭಿಹಾಲಿ ಎಂಬಲ್ಲಿ ಸ್ಟೀಲ್ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಬರೋಬ್ಬರಿ 9 ಜನ ಸಜೀವ ದಹನವಾಗಿದ್ದರು.












Click it and Unblock the Notifications