ಚಿಂದಿ ಆಯುವವರ ಮಗಳು ಎಂಬಿಎ ಪದವೀಧರೆ!

ಆದರೆ ಇಲ್ಲೊಬ್ಬ ಬಾಲಕಿ ಇದ್ದಾಳೆ. ತನ್ನ ಕಷ್ಟಕೋಟಲೆಗಳ ಮಧ್ಯೆಯೇ ಶಿಕ್ಷಣದತ್ತ ಗಮನಹರಿಸಿ, ಇದೀಗ ಎಂಬಿಎ ಪದವಿ ಪಡೆಯುವ ಹಂತಕ್ಕೆ ಬೆಳೆದು ನಿಂತಿದ್ದಾಳೆ. ಈ ಸರಸ್ವತೀ ಪುತ್ರಿಗೆ ಒಂದು ನಮಸ್ಕಾರ! ಮಾಯಾನಗರಿ ಮುಂಬೈನಲ್ಲಿ ಸವಿತಾ ದೋಕೆ ಎಂಬ ಹೆಣ್ಣುಮಗಳಿದ್ದಾಳೆ. ಆಕೆಯೇ ಈ ಕಥೆಯ ನಾಯಕಿ.
ಅವರಮ್ಮ ಹಳೆ ಸಾಮಾನು ಮಾರಾಟ ಮಾಡಿ ಬದುಕು ರೂಪಿಸಿಕೊಳ್ಳುತ್ತಿದ್ದಾಳೆ. ಇನ್ನು, ಅಪ್ಪ ಮನೆ ಮನೆಗೂ ಹೋಗಿ ಹಳೆ ಬಟ್ಟೆ ವ್ಯಾಪಾರ ಮಾಡಿ, ಕುಟುಂಬದವರ ಹೊಟ್ಟೆ ತುಂಬಿಸುತ್ತಾನೆ. ಅದರಾಚೆಗೆ ಈ ಅಪ್ಪ-ಅಮ್ಮನಿಂದ ಹೆಚ್ಚಿನದೇನೂ ಆಗದು. ಆದರೆ ಅವರ ಮುದ್ದಿನ ಮಗಳು ಸವಿತಾ ಅಷ್ಟಕ್ಕೇ ನಮ್ಮ ಹಣೆಬರಹವೇ ಇಷ್ಟು ಎಂದುಕೊಂಡು ಸುಮ್ಮನಾಗಲಿಲ್ಲ. ಕುಟುಂಬದ ಆದಾಯ ದಿನಕ್ಕೆ 250 ರೂ ಇರುವಾಗ ಶಿಕ್ಷಣಕ್ಕೆ ಅಂತ ಎಲ್ಲಿಂದ ದುಡ್ಡು ತರೋದು.
22 ವರ್ಷದ ಸವಿತಾ ಹಾಗೂಹೀಗೂ ಕಷ್ಟಪಟ್ಟು ಪದವಿ ಮುಗಿಸಿದ್ದಳು. ಆದರೆ ಅಷ್ಟಕ್ಕೇ ಸುಮ್ಮನಾಗದೆ, ಮುಂದೆ ಪಿಜ್ಜಾ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡು ತಿಂಗಳಿಗೆ 4,500 ರೂ ಸಂಬಳ ಎಣಿಸತೊಡಗಿದಳು. ಮುಂದೆ ಶಿಕ್ಷಣಕ್ಕೆ ಪೂರ್ಣವಿರಾಮ ಹಾಕದೆ ಪಿಜ್ಜಾದಲ್ಲಿ ಕೆಲಸ ಮಾಡಿಕೊಂಡಿದ್ದೇ ಸಮೀಪದ ಕಾಲೇಜಿನಲ್ಲಿ MBA ಪದವಿ ಶಿಕ್ಷಣಕ್ಕೆ ಸೇರಿಕೊಂಡಳು.
ಹುಟ್ಟುತ್ತಾ ತನ್ನೊಂದಿಗೆ ಬಂದಿದ್ದ ದಲಿತ ಹಣೆಪಟ್ಟಿಯನ್ನು ಬಳಸಿಕೊಂಡು ಮೀಸಲಾತಿಯಡಿ ಸೀಟು ಪಡೆದಿದ್ದೂ ಅಲ್ಲದೆ ವಾರ್ಷಿಕ ಶುಲ್ಕವಾದ 1 ಲಕ್ಷ ರೂ. ಗಳನ್ನು ಅರ್ಧಕ್ಕೆ ತಗ್ಗಿಸಿಕೊಂಡಳು. ಸರಕಾರವೂ 25 ಸಾವಿರ ರೂ ಶಿಷ್ಯವೇತನ ನೀಡಿತ್ತು. ಅಷ್ಟೇ ಮೊತ್ತವನ್ನು ತನ್ನ ಸಂಬಳದಿಂದಲೂ ಕೂಡಿಹಾಕಿದಳು.
ಅಲ್ಲಿಗೆ ದುಡ್ಡಿನ ವ್ಯವಹಾರ ಚುಕ್ತಾ ಆಯಿತು. ಆದರೆ ದುಡ್ಡಿದ್ದುಬಿಟ್ರೆ ಜ್ಞಾನಾರ್ಜನೆ ಆಗೋದಿಲ್ಲ ಅಲ್ವಾ? ಅದೂ ತಾನು ದಿನಕ್ಕೆ 9 ಗಂಟೆ ಕಾಲ ಪಿಜ್ಜಾ ಅಂಗಡಿಯಲ್ಲೇ ದುಡಿಯಬೇಕಾಗಿರುವಾಗ ಓದಿಗೆ ಅಂತ ಎಲ್ಲಿಂದ ಸಮಯ ಹೊಂದಿಸುವುದು. ಮುಂದಿನ ವರ್ಷದ ಶುಲ್ಕ ತುಂಬುವುದು ಹೇಗೆ ಎಂಬುದೇ ಆಕೆಯ ತಲೆಯಲ್ಲಿ ಗಿರಕಿ ಹೊಡೆಯುತ್ತಿತ್ತು. ಆದ ಸ್ಥಳೀಯ ದೈನಿಕವೊಂದು ಆಕೆಯ ನೆರವಿಗೆ ಬಂದು, ಶಿಕ್ಷಣಕ್ಕಾಗಿ ಅವಳು ಪಡಿಪಾಟಿಲು ಬೀಳುತ್ತಿರುವುದನ್ನು ವರದಿ ಮಾಡಿತು.
ಇದೀಗ ಅವಳ ಭಾಗ್ಯದ ಬಾಗಿಲು ತೆರೆದಿದೆ. ಎಲ್ಲೆಲ್ಲಿಂದಲೋ ಹಣ ಹರಿದುಬರುತ್ತಿದೆ. ಪ್ರಪಂಚ ಇಷ್ಟೊಂದು ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎಂಬುದನ್ನು ತಿಳಿದು ಓದುವ ಉತ್ಸಾಹ ಮತ್ತಷ್ಟು ಹೆಚ್ಚಾಗಿದೆ ಎನ್ನುತ್ತಾಳೆ ಭಾವಿ ಎಂಬಿಎ ಪದವೀಧರೆ!
-
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
CBSE ಶಾಲೆಗಳಲ್ಲಿ ಋತುಚಕ್ರ ನೈರ್ಮಲ್ಯ ಕಡ್ಡಾಯ: ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಹೊಸ ನಿಯಮ ಜಾರಿ -
UPSC ಪೂರ್ವಭಾವಿ ಪರೀಕ್ಷೆ ಮುಗಿದ ತಕ್ಷಣವೇ ಕೀ ಉತ್ತರಗಳ ಬಿಡುಗಡೆಗೆ ಕೇಂದ್ರ ಸರ್ಕಾರದ ನಿರ್ಧಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು











Click it and Unblock the Notifications