Yes Bank ಹಗರಣ; ಖಾಸಗಿ ಬ್ಯಾಂಕ್ನಲ್ಲಿ ಠೇವಣಿ ಇಡದಂತೆ ಸೂಚನೆ
ಮುಂಬೈ, ಮಾರ್ಚ್ 10: ಯೆಸ್ ಬ್ಯಾಂಕ್ ಆರ್ಥಿಕ ಸಂಕಷ್ಟದ ಬೆನ್ನಲ್ಲೇ, ಮಹಾರಾಷ್ಟ್ರ ಸರಕಾರ ಎಚ್ಚೆತ್ತುಕೊಂಡಿದ್ದು ಸರಕಾರಿ ಠೇವಣಿಗಳ ಸಂಬಂಧಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಖಾಸಗಿ ಬ್ಯಾಂಕ್ಗಳಲ್ಲಿ ಹಣವನ್ನು ಠೇವಣಿ ಇಡದಂತೆ, ಮಹಾರಾಷ್ಟ್ರ ಸರಕಾರ ತನ್ನ ಎಲ್ಲಇಲಾಖೆ, ಸ್ಥಳೀಯ ಸಂಸ್ಥೆಗಳಿಗೆ ಮಂಗಳವಾರ ಸೂಚನೆ ಹೊರಡಿಸಿದೆ.
ನಮ್ಮ ಎಲ್ಲ ಇಲಾಖೆ, ಸ್ಥಳೀಯ ಸಂಸ್ಥೆಗಳಿಗೆ ಖಾಸಗಿ ಬ್ಯಾಂಕ್ಗಳಲ್ಲಿ ದುಡ್ಡು ಠೇವಣಿ ಇಡದಿರುವಂತೆ ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಮಾತ್ರ ಠೇವಣಿ ಇಡುವಂತೆ ಆದೇಶಿಸಲಾಗಿದೆ ಎಂದು ಮಹಾರಾಷ್ಟ್ರ ಸರಕಾರದ ಮುಖ್ಯ ಕಾರ್ಯದರ್ಶಿ ಅಜಯ್ ಮೆಹ್ತಾ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ನೂರಕ್ಕೂ ಹೆಚ್ಚು ಸಣ್ಣ ಬ್ಯಾಂಕ್ ಗಳು ಮತ್ತು ಸಹಕಾರ ಬ್ಯಾಂಕ್ಗಳು ಖಾಸಗಿ ವಲಯದ ಯೆಸ್ ಬ್ಯಾಂಕ್ನಲ್ಲಿ ಠೇವಣಿ ಇಟ್ಟಿವೆ. ಆರ್ಬಿಐ ನಿರ್ಬಂಧದ ಪರಿಣಾಮ ಹಿಂತೆಗೆದುಕೊಳ್ಳಲು ಪರದಾಡುತ್ತಿವೆ. ಯೆಸ್ ಬ್ಯಾಂಕ್ ನಲ್ಲಿ ಆರ್ಥಿಕ ಬಿಕ್ಕಟ್ಟು ಸಂಭವಿಸಿದ ನಂತರ ಆರ್ಬಿಐ ನಗದು ಹಿಂತೆಗೆತಕ್ಕೆ ನಿರ್ಬಂಧ ವಿಧಿಸಿತ್ತು.












Click it and Unblock the Notifications