ಮೋದಿ ಭಯದಿಂದ ದಾವೂದ್ ಮನೆ ಬದಲಾಯಿಸ್ತಾ ಇದ್ದ: ಕಸ್ಕರ್
ಮುಂಬೈ, ಸೆ. 22: ಭಾರತದಲ್ಲಿ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ, ದಾವೂದ್ ಇಬ್ರಾಹಿಂಗೆ ಆತಂಕ ಶುರುವಾಗಿದ್ದು ನಿಜ, ಭಯದಿಂದ ಮನೆ ಬದಲಾಯಿಸುತ್ತಾ ಇದ್ದ. ದಾವೂದ್ ಗೆ ನೀಡಿದ್ದ ಭದ್ರತೆಯನ್ನು ದ್ವಿಗುಣಗೊಳಿಸಲಾಯಿತು ಎಂದು ದಾವೂದ್ ತಮ್ಮ ಇಕ್ಬಾಲ್ ಕಸ್ಕರ್ ವಿಚಾರಣೆ ವೇಳೆ ಹೇಳಿದ್ದಾನೆ.
ಇಕ್ಬಾಲ್ ನೀಡಿದ ದಾವೂದ್ ಮನೆ ವಿಳಾಸಗಳು, ದಾವೂದ್ ಬಳಸುತ್ತಿದ್ದ ಅಲಿಯಾಸ್ ಹೆಸರುಗಳ ವಿವರ ಎಲ್ಲವೂ ಸರಿಯಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ವಿಶ್ವಸಂಸ್ಥೆಗೆ ಕಳಿಸಿ ದೃಢಪಡಿಸಿಕೊಂಡ ಮಾಹಿತಿಯನ್ನೇ ಇಕ್ಬಾಲ್ ಹೇಳಿದ್ದಾನೆ.

1993ರ ಮಾರ್ಚ್ 12ರಂದು 260 ಜನರ ಬಲಿಗೆ ಕಾರಣವಾದ ಮುಂಬೈ ಸರಣಿ ಸ್ಫೋಟದ ರೂವಾರಿ, ಭೂಗತ ಪಾತಕಿ ದಾವೂದ್ ಯಾರನ್ನೂ ನಂಬುವುದಿಲ್ಲ. ಮನೆಯವರು, ಆಪ್ತರ ಜತೆ ಫೋನ್ ಮಾತುಕತೆ ಕೂಡಾ ತೀರಾ ಕಡಿಮೆ. ಆತನ ಕುರಿತು ನಾವು ಪೊಲೀಸರಿಗೆ ಮಾಹಿತಿ ನೀಡುತ್ತೇವೆಂದು ದಾವೂದ್ ಫೋನ್ನಲ್ಲಿ ಮಾತನಾಡಲ್ಲ ಎಂದು ಕಸ್ಕರ್ ಹೇಳಿದ್ದಾನೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡ್ರಗ್ಸ್ ಡೀಲಿಂಗ್ ಗೂ ದಾವೂದ್ ಕೈ ಹಾಕಿದ್ದಾನೆ. ಪಶ್ಚಿಮ ಮತ್ತು ಪೂರ್ವ ಆಫ್ರಿಕಾದ ರಾಷ್ಟ್ರಗಳಲ್ಲಿ ಡಿ-ಕಂಪನಿ ಹೂಡಿಕೆ ಮಾಡಿದೆ. ಲ್ಯಾಟಿನ್ ಅಮೆರಿಕಾಕ್ಕೂ ಕಂಪನಿ ಕಾಲಿಟ್ಟಿದೆ.
ಎನ್ ಸಿಪಿ ನಾಯಕರಿಗೆ ಭೀತಿ: ಬಿಲ್ದರ್ ಗಳಿಗೆ ಬೆದರಿಕೆ ಒಡ್ಡಿ ಹಣ ವಸೂಲಿ ಮಾಡುವ ಪ್ರಕರಣದ ಆರೋಪಿಯಾಗಿರುವ ಕಸ್ಕರ್ ವಿಚಾರಣೆ ವೇಳೆ ಎನ್ ಸಿಪಿ ನಾಯಕರ ಹೆಸರುಗಳು ಕೇಳಿ ಬಂದಿವೆ. ಎನ್ ಸಿಪಿ ಮುಖಂಡರು ಮಧ್ಯವರ್ತಿಗಳ ರೀತಿ ವರ್ತಿಸುತ್ತಿದ್ದರು ಎಂದು ಹೇಳಿದ್ದಾನೆ.
ಇಬ್ಬರು ಎನ್ ಸಿಪಿ ನಾಯಕರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಹವಾಲಾ ಹಣ ಬಳಕೆ, ರಾಜಕಾರಣಿಗಳ ನೆರವು, ದಾವೂದು ಸಂಚು ಎಲ್ಲದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಥಾಣೆ ಪೊಲೀಸ್ ಆಯುಕ್ತ ಪರಮ್ಬೀರ್ ಸಿಂಗ್ ಹೇಳಿದ್ದಾರೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications