ಅಬ್ಬಾ! ಡೆಂಗ್ಯೂ ಗುಣಪಡಿಸುವ ಲಸಿಕೆ ಬಂದಿದೆಯಂತೆ
ಮುಂಬೈ, ಸೆಪ್ಟೆಂಬರ್,23 : ದೇಶಾದ್ಯಂತ ತನ್ನ ಭೀಕರ ಛಾಯೆ ತೋರಿಸಿದ ಡೆಂಗ್ಯೂ ಬಹಳಷ್ಟು ಮಂದಿಯನ್ನು ಬಲಿ ತೆಗೆದುಕೊಂಡಿದ್ದರೆ, ಇನ್ನೂ ಕೆಲವರನ್ನು ಇದರ ಭೀತಿಯಲ್ಲಿಯೇ ಬಳಲುವಂತೆ ಮಾಡಿದೆ. ಆದರೆ ಇದೀಗ ಎಲ್ಲರೂ ಡೆಂಗ್ಯೂ ಜ್ವರದ ಆತಂಕದಿಂದ ನಿರಾಳವಾಗುವ ಸಂತಸದ ಸುದ್ದಿ ಹೊರಬಿದ್ದಿದೆ.
ಏಷ್ಯಾದ ಅತಿ ಪ್ರತಿಷ್ಠಿತ ಲಸಿಕೆ ತಯಾರಿಕಾ ಸಂಸ್ಥೆ ಸೀರಂ ಡೆಂಗ್ಯೂ ಜ್ವರವನ್ನು ಗುಣಪಡಿಸುವ ಇಂಜೆಕ್ಷನ್ ಕಂಡು ಹಿಡಿದಿದೆ. ಈ ಲಸಿಕೆಯನ್ನು ದೇಶದೆಲ್ಲೆಡೆ ಬಳಸಲು ಅನುಮತಿ ಕೋರಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವಾಲಯಕ್ಕೆ ಪತ್ರ ಬರೆದು ಅನುಮತಿ ಕೋರಿದ್ದು, ತನ್ನ ಚಿಕಿತ್ಸೆಯನ್ನು ಪಾಕಿಸ್ತಾನ, ನೇಪಾಳ, ಭೂತಾನ್ ಮಾಲ್ಡೀವ್ಸ್ ಬಾಂಗ್ಲಾದೇಶ ಹಾಗೂ ಶ್ರೀಲಂಕಾಗಳಲ್ಲಿ ನೀಡುವ ಯೋಚನೆಯಲ್ಲಿದೆ.[ಸೊಳ್ಳೆ ಒದ್ದೋಡಿಸುವ ಗಿಡಗಳ ನೆಟ್ಟ ಹಿರಿಯ ನಾಗರಿಕರು]

ಈ ಇಂಜೆಕ್ಷನ್ ಸುಮಾರು 5000 ದಿಂದ 10,000 ವೆಚ್ಚವನ್ನು ಒಳಗೊಂಡಿದ್ದು, ಈ ಚಿಕಿತ್ಸೆಯಲ್ಲಿ ಒಂದೇ ಕ್ಲೋನ್ ನಿಂದ (organism or cell) ತಯಾರಾದ ಪ್ರತಿಕಾಯಗಳನ್ನು (ಮೋನೋ ಕ್ಲೋನಲ್ ಆಂಟಿಬಾಡಿ) ರೋಗಿಗಳಿಗೆ ಇಂಜೆಕ್ಷನ್ ಮೂಲಕ ನೀಡಲಾಗುತ್ತದೆ.
ಸೀರಂ ಸಂಸ್ಥೆ ಅಮೆರಿಕ ಮೂಲದ ಜೈವಿಕ ತಂತ್ರಜ್ಞಾನ ಕಂಪನಿಯಾದ ವಿಸ್ಟೆರಾದ ಸಹಕಾರದೊಂದಿಗೆ ಮೋನೋಕ್ಲೋನಲ್ ಆಂಟಿಬಾಡಿ ತಯಾರಿಕೆಗೆ ಮುಂದಾಗಿದ್ದು, 50ಲಕ್ಷ ಡಾಲರ್ ನೀಡಿದೆ. ವಿಸ್ಟೆರಾ ನಡೆಸಿದ ಡೆಂಗ್ಯೂ ನಿರೋಧಕ ಲಸಿಕೆ 'ವಿಐಎಸ್513' ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗಗಳಲ್ಲಿ ಯಶಸ್ವಿಯಾಗಿದೆ.
ಅಲ್ಲದೇ ಸೀರಂ ಸಂಸ್ಥೆಯು ಡೆಂಗ್ಯೂ ಬಾರದಂತೆ ತಡೆಗಟ್ಟುವ ಲಸಿಕೆ ಕಂಡು ಹಿಡಿಯಲು ಎಲ್ಲಾ ತಯಾರಿ ನಡೆಸುತ್ತಿದ್ದು, ಮೂರು ಅಥವಾ ನಾಲ್ಕು ವರ್ಷಗಳಲ್ಲಿ ಇದನ್ನು ಜಾರಿಗೆ ತರುವ ಯೋಚನೆ ಇದೆ ಎಂದು ಸೀರಂ ಸಂಸ್ಥೆಯ ಮುಖ್ಯಸ್ಥ ಪೂನಾವಾಲಾ ತಿಳಿಸಿದ್ದಾರೆ.
ಈ ಲಸಿಕೆಯಿಂದ 2020ರ ಹೊತ್ತಿಗೆ ಇದು 400 ಮಿಲಿಯನ್ ಡಾಲರ್ ನಿಂದ 140 ಕೋಟಿ ಡಾಲರ್ ವರೆಗೆ ಲಾಭ ತರಲಿದ್ದು, ಸೀರಂ ಸಂಸ್ಥೆಯಲ್ಲದೇ, ಸಾನ್ ಪೋಯಿ ಹಾಗೂ ನೋವಾರ್ಟಿಸ್ ನಂತಹ ಬೃಹತ್ ಔಷಧ ತಯಾರಿಕಾ ಸಂಸ್ತೆಗಳು ಡೆಂಗ್ಯೂ ನಿವಾರಣೆ ಹಾಗೂ ತಡೆಗಟ್ಟುವಿಕೆ ಔಷಧಿ ತಯಾರಿಕೆಗಾಗಿ ಹಲವಾರು ಪ್ರಯೋಗಗಳನ್ನು ಕೈಗೊಳ್ಳುತ್ತಿದೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications