ಭಾರತದಲ್ಲಿ ಸುರಕ್ಷತೆಯಿಲ್ಲ, ನಾನು ಬರಲಾರೆ: ನೀರವ್ ಮೋದಿ
ಮುಂಬೈ, ಜನವರಿ 5: ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಕರಣದ ಪ್ರಮುಖ ಆರೋಪಿ, ವಜ್ರ ವ್ಯಾಪಾರಿ ನೀರವ್ ಮೋದಿ, ಸುರಕ್ಷತೆಯ ಕಾರಣದಿಂದ ಭಾರತಕ್ಕೆ ಮರಳಲು ಸಾಧ್ಯವಿಲ್ಲ ಎಂದು ಮುಂಬೈ ನ್ಯಾಯಾಲಯಕ್ಕೆ ಶನಿವಾರ ತಿಳಿಸಿದ್ದಾರೆ.
ಅಲ್ಲದೆ, ತಮ್ಮ ಪ್ರಕರಣವನ್ನು ರಾಜಕೀಯಕರಣಗೊಳಿಸಲಾಗದಿದೆ ಎಂದೂ ಅವರು ಆರೋಪಿಸಿದ್ದಾರೆ.
ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆಯಡಿ (ಎಫ್ಇಒಎ) ನೀರವ್ ಮೋದಿ ಅವರನ್ನು ದೇಶಭ್ರಷ್ಟ ಎಂದು ಘೋಷಿಸುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ಕೋರಿ ಸಲ್ಲಿಸಿರುವ ಅರ್ಜಿಗೆ ನೀರವ್ ಮೋದಿ ಪರ ವಕೀಲರು ಪ್ರತಿಕ್ರಿಯೆ ಸಲ್ಲಿಸಿದ್ದಾರೆ.

ತಮ್ಮ ಭಾವಚಿತ್ರಗಳನ್ನು ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಗಿದೆ. ಇದರಿಂದ ತಮ್ಮ ಮೇಲೆ ಹಿಂಸಾತ್ಮಕ ಬೆದರಿಕೆಗಳಿವೆ. ಸುರಕ್ಷತೆಯ ಕುರಿತು ಭಯವಿದೆ. ಎಲ್ಲ ರಾಜಕೀಯ ಪಕ್ಷಗಳು ನೀಡಿರುವ ಹೇಳಿಕೆಗಳು ತಾವು ತಪ್ಪಿತಸ್ಥನೆಂದು ಅವರೇ ತೀರ್ಪು ಕೊಟ್ಟಂತಿವೆ. ತಮ್ಮ ಪ್ರಕರಣವನ್ನು ರಾಜಕೀಯ ಕಾರಣಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ನೀರವ್ ಅಭಿಪ್ರಾಯಪಟ್ಟಿದ್ದಾರೆ.
ಇ.ಡಿ,ಯು ತಮ್ಮ ವಿರುದ್ಧ ಸತ್ಯಕ್ಕೆ ದೂರವಾದ ಆರೋಪಗಳ ಆಧಾರದಲ್ಲಿ ಸುಳ್ಳು ಮೊಕದ್ದಮೆಯನ್ನು ದಾಖಲಿಸಲು ಪ್ರಯತ್ನಿಸಿತ್ತು. ಇ.ಡಿ.ಯ ಸಮನ್ಸ್ಗಳಿಗೆ ಸೂಕ್ತ ಉತ್ತರ ನೀಡಲಾಗಿತ್ತು ಎಂದು ವಿವರಿಸಿದ್ದಾರೆ.
ಮೂರು ಬಾರಿ ಸಮನ್ಸ್ ನೀಡಿದ್ದರೂ ಅದಕ್ಕೆ ನೀರವ್ ಮೋದಿ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ಇ.ಡಿ. ಕೋರ್ಟ್ಗೆ ತಿಳಿಸಿತ್ತು.












Click it and Unblock the Notifications