ಮಂಗಳೂರು: ಸ್ನೇಹಿತರ ಕಿತ್ತಾಟ, ಕೊಲೆಯಲ್ಲಿ ಅಂತ್ಯ
ಮಂಗಳೂರು. ಮೇ.22: ಮಂಗಳೂರಿನಲ್ಲಿ ಯುವಕನೊಬ್ಬನನ್ನು ಆತನ ನಾಲ್ವರು ಸ್ನೇಹಿತರು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಸಂಜಯ್ ಅಲಿಯಾಸ್ ವರುಣ್ (19) ಕೊಲೆಯಾದ ಯುವಕ. ನಗರದ ಬೋಳಾರ್ ಸಮೀಪದ ರೈಸ್ ಮಿಲ್ ಹತ್ತಿರ ಮೇ.22 ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ನಾಲ್ವರು ಸ್ನೇಹಿತರು ಅಕ್ರಮ ಗಾಂಜಾ ವಹಿವಾಟು ನಡೆಸುತ್ತಿದ್ದು, ವ್ಯವಹಾರದಲ್ಲಿ ಭಿನ್ನಾಭಿಪ್ರಾಯ ಉಂಟಾದ ಹಿನ್ನಲೆಯಲ್ಲಿ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ.[ಮಂಗಳೂರು: ರವಿ ಪೂಜಾರಿ ಸಹಚರ ಸೆರೆ]

ಪಡೀಲ್ ಹೋಮ್ ಸ್ಟೇ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದ ವಿಜಯ್ ಈ ಕೊಲೆ ಕೃತ್ಯದಲ್ಲಿ ಶಮೀಲಾಗಿದ್ದು ಪರಾರಿಯಾಗಿದ್ದಾನೆ. ಕೊಲೆಯಾದ ವರುಣ್ ಮೃತ ದೇಹವನ್ನು ನಗರದ ಎಜಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.












Click it and Unblock the Notifications