ಮಂಗಳೂರು ನೆಲ್ಲಿಜೋರ ನಿವಾಸಿಗಳ ನಿದ್ದೆಗೆಡಿಸಿದ ಕೋತಿ: ಒಂಟಿ ಮಂಗನ ಕಾಟಕ್ಕೆ ಜನ ಹೈರಾಣು
ಮಂಗಳೂರು, ಡಿಸೆಂಬರ್ 29: ಇತ್ತೀಚಿಗೆ ಮಲೆನಾಡು ಕರಾವಳಿ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಕಾಡಾನೆ, ಕಾಡು ಕೋಣ, ಹಂದಿಗಳ ಕಾಟದ ಜೊತೆಗೆ ಮಂಗಗಳ ಕಾಟವು ಹೆಚ್ಚಾಗುತ್ತಿದೆ. ಮಂಗಗಳ ಗುಂಪು ತೋಟ, ಗದ್ದೆಗಳಿಗೆ ನುಗ್ಗಿ ಬೆಳೆ ನಾಶ ಮಾಡುವ ಘಟನೆಗಳು ನಡೆಯುತ್ತಿರುತ್ತವೆ. ಆದರೆ ಇಲ್ಲೊಂದು ಗ್ರಾಮದಲ್ಲಿ ಒಂಟಿ ಮಂಗನ ಕಾಟಕ್ಕೆ ಜನ ಹೈರಾಣಾಗಿದ್ದಾರೆ.
ಮಂಗಳೂರು ನಗರದ ಹೊರವಲಯದ ಕುಪ್ಪೆಪದವು ಎಂಬಲ್ಲಿ ಕೋತಿಯೊಂದರ ಕಾಟ ಹೆಚ್ಚಾಗಿದೆ. ಮನೆಯಿಂದ ಹೊರಗೆ ಬಂದವರ ಮೇಲೆ ಕಾದು ಕುಳಿತು ಅಟ್ಯಾಕ್ ಮಾಡುತ್ತದೆ ಒಂಟಿ ವಾನರ ಕಚ್ಚಿ ಗಾಯಗೊಳಿಸಿ ಇಲ್ಲದ ಅವಾಂತರ ಸೃಷ್ಟಿಸುತ್ತಿದೆ.

ಯಾರೋ ಕುಪ್ಪೆಪದವು - ಎಡಪದವು ಮಧ್ಯಭಾಗದ ನೆಲ್ಲಿಜೋರ ಪ್ರದೇಶಕ್ಕೆ ಈ ಮಂಗನನ್ನು ತಂದು ಬಿಟ್ಟಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇದು ಬಾಲವಿಲ್ಲದ ಒಂಟಿ ವಾನರ. ಈ ಮಂಗನ ಹೊರತುಪಡಿಸಿ ಬೇರೆ ಮಂಗಗಳೇ ಈ ಪ್ರದೇಶದಲ್ಲಿಲ್ಲ. ಈ ಕೋತಿರಾಯನ ಕಪಿಚೇಷ್ಟೆಯಿಂದ ಜನತೆ ಮನೆಯಿಂದ ಹೊರಗೆ ಬರಲು ಆತಂಕಪಡುವ ಸ್ಥಿತಿ ಉಂಟಾಗಿದೆ.
ಸೀಯಾಳ, ಅಡಿಕೆಗಳನ್ನು ತಿಂದು ಹಾಳುಗೆಡವುದಿಲ್ಲ. ಆದರೆ ಮನುಷ್ಯರ ತಲೆ ಕಂಡರೆ ಸಾಕು ಅವರ ಮೇಲೆ ದಾಳಿ ನಡೆಸುತ್ತದೆ. ಕಾದು ಕುಳಿತು ದಾಳಿ ಮಾಡುತ್ತದೆ. ಈ ವಾನರ ಮನುಷ್ಯ ದ್ವೇಷದಿಂದ ಇಲ್ಲಿನ ಜನತೆ ಕಂಗೆಟ್ಟಿದ್ದಾರೆ .ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗೆ ದೂರು ನೀಡಿದ್ದರು.
ಅರಣ್ಯ ಇಲಾಖೆಯೂ ಸಹ ಕಾರ್ಯಾಚರಣೆ ಆರಂಭಿಸಿದ್ದು, ಈ ಮಂಗನ ಸೆರೆಹಿಡಿಯಲು ಗೂಡನ್ನು ಇಟ್ಟಿದ್ದರು. ಆದರೂ ಇಲ್ಲಿನ ಸಮಸ್ಯೆ ಬಗೆಹರಿದಿಲ್ಲ. ಏಕೆಂದರೆ ಈ ಚಾಲಾಕಿ ಕೋತಿ ಗೂಡಿನ ಹತ್ತಿರ ಬಂದರೂ ಅದರೊಳಗೆ ಸೆರೆ ಸಿಕ್ಕದೆ ತಪ್ಪಿಸಿಕೊಳ್ಳುತ್ತಿದೆ. ಇದೀಗ ಈ ಕೋತಿ ದಾಳಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರ ಕೈಗೆ 22 ಸ್ಟಿಚ್ಜ್ ಹಾಕಲಾಗಿದೆ. ಇನ್ನೂ ಅನೇಕರಿಗೆ ಈ ಮಂಗ ಇದೇ ರೀತಿ ದಾಳಿ ಮಾಡಿದೆ . ಆದರೆ ಈ ಕೋತಿ ಕಾಟದಿಂದ ಮುಕ್ತರಾಗುವ ಬಗೆ ಮಾತ್ರ ಇನ್ನೂ ಊರವರಿಗೆ ಸಿಕ್ಕಿಲ್ಲ. ಈ ಬಗ್ಗೆ ಅರಣ್ಯ ಇಲಾಖೆಯೂ ಗಂಭೀರವಾಗಿ ಪರಿಗಣಿಸಿ ಕುಪ್ಪೆಪದವು ಅಲ್ಲಿನ ಒಂಟಿ ಮಂಗನ ಕಾಟಕ್ಕೆ ಮುಕ್ತಿ ಹಾಡಬೇಕಿದೆ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications