ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ಉಪ್ಪಿನಕಾಯಿಗೆ ಬಹುಬೇಡಿಕೆ
ಉಜಿರೆ: ಲಕ್ಷದೀಪೋತ್ಸವದ ವಸ್ತುಪ್ರದರ್ಶನ ಮಳಿಗೆಯಲ್ಲಿ ಉಪ್ಪಿನಕಾಯಿ ಮಾರಾಟ ಭರಾಟೆ ಜೋರಾಗಿತ್ತು. ಧರ್ಮಸ್ಥಳ ಮಂಜುನಾಥೇಶ್ವರ ಸನ್ನಿಧಾನದ ಲಕ್ಷದೀಪೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡ ಭಕ್ತರ ಗಮನ ಸೆಳೆದಿದ್ದು ಉಪ್ಪಿನಕಾಯಿ ಮಳಿಗೆ.
ಬಾಯಲಿ ನೀರೂರಿಸುವ ಉಪ್ಪಿನ ಕಾಯಿ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಊಟಕ್ಕೆ ಉಪ್ಪಿನ ಕಾಯಿ ಬೇಕೆ ಬೇಕು. ಹಬ್ಬ ಹರಿದಿನದ ಭೋಜನಕ್ಕೆ ಬಾಳೆಯ ತುದಿಯಲ್ಲಿ ಉಪ್ಪಿನ ಕಾಯಿ ಇಲ್ಲವಾದರೆ ಊಟ ಅಪೂರ್ಣ. ಹೀಗಿರುವಾಗ ಉಪ್ಪಿನ ಕಾಯಿ ವ್ಯಾಪಾರವನ್ನು ನಂಬಿ ಜೀವನ ನಡೆಸುವವರು ಮೂಡಬಿದರೆಯ ಕಲಾವತಿ ಭಟ್.
ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಉಪ್ಪಿನ ಕಾಯಿ ಮಳಿಗೆಯನ್ನು ಇರಿಸಿದ್ದಾರೆ. ದೀಪೋತ್ಸವದಲ್ಲಿ ಇರುವುದು ಇದೊಂದೇ ಉಪ್ಪಿನಕಾಯಿ ಮಳಿಗೆ. ಆದ್ದರಿಂದ ವ್ಯಾಪಾರವು ಒಳ್ಳೆಯದಾಗಿಯೇ ಆಗುತ್ತಿದೆ. ಉಪ್ಪಿನ ಕಾಯಿ ಮಾರಿಬಂದ ಹಣದಿಂದಲೆ ತಮ್ಮ ಜೀವನ್ನು ನಡೆಸುತ್ತಾರೆ.

ಬಾಯಲಿ ನೀರೂರಿಸುವ ಉಪ್ಪಿನ ಕಾಯಿ
ಧರ್ಮಸ್ಥಳ ಮಂಜುನಾಥೇಶ್ವರ ಸನ್ನಿಧಾನದ ಲಕ್ಷದೀಪೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡ ಭಕ್ತರ ಗಮನ ಸೆಳೆದಿದ್ದು ಉಪ್ಪಿನಕಾಯಿ ಮಳಿಗೆ. ಬಾಯಲಿ ನೀರೂರಿಸುವ ಉಪ್ಪಿನ ಕಾಯಿ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಊಟಕ್ಕೆ ಉಪ್ಪಿನ ಕಾಯಿ ಬೇಕೆ ಬೇಕು. ಹಬ್ಬ ಹರಿದಿನದ ಭೋಜನಕ್ಕೆ ಬಾಳೆಯ ತುದಿಯಲ್ಲಿ ಉಪ್ಪಿನ ಕಾಯಿ ಇಲ್ಲವಾದರೆ ಊಟ ಅಪೂರ್ಣ

ಮಾವಿನ ಕಾಯಿ ಉಪ್ಪಿನ ಕಾಯಿಯಲ್ಲಿ ಮೀಡಿ ತುಂಡು
ನೆಲ್ಲಿ, ದೊಡ್ಲಿ, ಮಾವಿನ ಕಾಯಿ,ಲಿಂಬು, ಕ್ಯಾರೇಟ್, ಕವಳಿಕಾಯಿ, ಬೆಳ್ಳುಳಿ, ಕಟ್ಟಾ ಮೀಠಾ ಹೀಗೆ 12 ತರಹದ ಉಪ್ಪಿನ ಕಾಯಿಗಳಿದ್ದವು. ಮಾವಿನ ಕಾಯಿ ಉಪ್ಪಿನ ಕಾಯಿಯಲ್ಲಿ ಮೀಡಿ ತುಂಡು ಎಂದೂ ಎರಡು ತರಹ ಇದೆ. ನಿಂಬೆಯಲ್ಲಿ ಕೆಂಪು ರಸದ್ದು, ಹಳದಿ ರಸದ ಎಂದು ಎರಡು ತರನಾದ ಉಪ್ಪಿನ ಕಾಯಿಗಳಿದ್ದವು. ಚಟ್ನಿ ಪುಡಿ ,ರಸಮ್ ಪುಡಿ, ಸಾಂಬಾರ ಪುಡಿ. ಪುಳಿಯೊಗರೆ ಪುಡಿಯೂ ಇದೆ.

350 ಕಿಲೋ ಉಪ್ಪಿನ ಕಾಯಿಯನ್ನು ದೀಪೋತ್ಸವಕ್ಕಾಗಿ
ಬಂಡವಾಳ 95 ಸಾವಿರ ಹಾಕಿದ್ದಾರೆ. 350 ಕಿಲೋ ಉಪ್ಪಿನ ಕಾಯಿಯನ್ನು ದೀಪೋತ್ಸವಕ್ಕಾಗಿಯೆ ತಂದಿದ್ದಾರೆ. ಟೇಸ್ಟ್ ನೋಡಿ ಜನ ಖರೀದಿ ಮಾಡುತ್ತಾರೆ. ಮಾವಿನ ಕಾಯಿ ಅಪ್ಪೇ ಮಿಡಿಗೆ ಬೇಡಿಕೆ ಹೆಚ್ಚಿದೆ. 35 ಕೆಜಿ ಉಪ್ಪಿನ ಕಾಯಿ ಈಗಾಗಲೇ ಖಾಲಿಯಾಗಿದೆ. ಚಟ್ನಿ ಪುಡಿಗೆ 30 ರೂಪಾಯಿ, ಸಾಂಬಾರು ಪೌಡರ್ 50 ರೂಪಾಯಿ, ಕಾಲು ಕಿಲೋದಿಂದ ಐದು ಕೆಜಿಯ ವರೆಗೆ ಇದೆ.

ಉಪ್ಪಿನ ಕಾಯಿ ವ್ಯಾಪಾರವನ್ನೇ ನಂಬಿ ಜೀವನ
ಬೇರೆಯಾರ ಸಹಾಯವಿಲ್ಲದೇ ಇವರ ಸಂಸಾರವೇ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಹೊಟ್ಟೆಪಾಡು ಕಲಿಸಿದ ವ್ಯಾಪಾರವಿದು. ಇದನ್ನೇ ಮುಂದುವರೆಸಿಕೊಂಡು ಹೋಗುತ್ತೇವೆ ಎನ್ನುತ್ತಾರೆ. ಉಪ್ಪಿನ ಕಾಯಿ ವ್ಯಾಪಾರವನ್ನೇ ನಂಬಿ ಜೀವನ ನಡೆಸುವ ಕುಟುಂಬಗಳಿವೆ ಎಂಬುವುದಕ್ಕೆ ಉದಾಹರಣೆಯಂತೆ ದೊರೆತಿದ್ದು ಲಕ್ಷದೀಪೋತ್ಸವದಲ್ಲಿ ಇವರು ಇರಿಸಿದ ಮಳಿಗೆಯಿಂದ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications